ನಿವೃತ್ತ ಪ್ರಾಂಶುಪಾಲ ಪ್ರೊ| ವಿನೋಬ್ನಾಥ್ ಐಕಳ: ನಿಧನ
Team Udayavani, Apr 20, 2022, 6:32 PM IST
ಶಿರ್ವ: ಇಲ್ಲಿನ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ,ಮೂಲ್ಕಿ ಕಾರ್ನಾಡು ನಿವಾಸಿ ಪ್ರೊ| ವಿನೋಬ್ನಾಥ್ ಐಕಳ (65) ಅವರು ಎ. 19ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.
ಮೂಲ್ಕಿಯ ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ದಿ|ಸಂಜೀವನಾಥ ಐಕಳ ಅವರ ಪುತ್ರರಾಗಿದ್ದ ಅವರು ಶಿರ್ವ ಎಂಎಸ್ಆರ್ಎಸ್ ಕಾಲೇಜಿನಲ್ಲಿ ಸುಮಾರು 35 ವರ್ಷಗಳ ಕಾಲ ಅರ್ಥಶಾಸ್ತ್ರ ಉಪನ್ಯಾಸಕರಾಗಿ,ವಿಭಾಗ ಮುಖ್ಯಸ್ಥರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಪುನರೂರು ಭಾರತ್ ಮಾತಾ ಪ್ರೌಢ ಶಾಲೆಯ ಸಂಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಕಾರ್ನಾಡು ಯಂಗ್ ಸ್ಟಾರ್ ಏಸೋಸಿಯೇಶನ್ ಮಾಜಿ ಅಧ್ಯಕ್ಷರಾಗಿ, ವಿದ್ಯಾನಿಧಿ ಯೊಜನೆಯ ನಿರ್ದೇಶಕರಾಗಿದ್ದರು. ಯುವ ಸಂಘಟಕ ,ಕ್ರೀಡಾ ಪಟುವಾಗಿದ್ದ ಅವರು ಕ್ರಿಕೆಟ್, ವಾಲಿಬಾಲ್ ಮತ್ತು ಫುಟ್ಬಾಲ್ ಆಟಗಾರರಾಗಿ ಪ್ರಸಿದ್ಧಿ ಪಡೆದಿದ್ದರು.