ನಂಜನಗೂಡು: ಪೌಲ್ಟ್ರಿ ಫಾರಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಾರ್ಮಿಕನ ಶವ ಪತ್ತೆ
ಇದು ಸಾವಲ್ಲ ಕೊಲೆ ಎಂದ ಮೃತನ ಪತ್ನಿ
Team Udayavani, May 22, 2022, 8:01 PM IST
ನಂಜನಗೂಡು : ತಾಲ್ಲೂಕಿನ ಸೂರಳ್ಳಿ ಗ್ರಾಮದ ಪೌಲ್ಟ್ರಿ ಫಾರಂ ಮತ್ತು ಮೇಕೆ ಸಾಕಣೆಯ ಖಾಸಗಿ ಮಾಲೀಕನ ಜಮೀನಿನ ಕೊಠಡಿಯಲ್ಲಿ ಅನುಮಾನಾ ಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಕೂಲಿ ಕಾರ್ಮಿಕನ ಶವ ಕಂಡು ಬಂದಿದೆ.
*ಸೂರಳ್ಳಿ ಗ್ರಾಮದ ಶ್ರೀನಿವಾಸ ಶೆಟ್ಟಿ (40) ಮೃತ ಕೂಲಿ ಕಾರ್ಮಿಕ. ಮೈಸೂರು ಮೂಲದ ಉಮೇಶ್ ಎಂಬುವರ ಮಾಲೀಕನಿಗೆ ಸೇರಿದ ಫಾರಂ ನಲ್ಲಿ 1 ವರ್ಷಗದಿಂದ ಶ್ರಿನಿವಾಸ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಇದು ಸಾವಲ್ಲ ಕೊಲೆ ಎಂದ ಮೃತನ ಪತ್ನಿ ರಾಜೇಶ್ವರಿ ಮಗಳು ಸುಕನ್ಯ ಆರೋಪಿಸಿದ್ದಾರೆ. ಕುಟುಂಬಸ್ಥರ ಜತೆಗೂಡಿ ಸ್ಥಳಕ್ಕೆ ಭೇಟಿ ನೀಡಿದ ನಂತರ ನಂಜಗೂಡು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ನನಗೂ ಘಟನೆಗೂ ಸಂಭಂದವೇ ಇಲ್ಲಾ ಎಂದಪೌಲ್ಟ್ರಿ ಮಾಲೀಕ ಉಮೇಶ್ ಹೇಳಿದ್ದಾರೆ.
ಸೂರಳ್ಳಿ ಮತ್ತು ಮಸಗೆ ಗ್ರಾಮಸ್ಥರು ರಿಂದ ಸರ್ಕಾರಿ ಆಸ್ಪತ್ರೆಯ ಶವ ಸಂಸ್ಕಾರ ಘಟಕದ ಮುಂದೆ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಲಾಗಿದ್ದು,ನಂತರ ಸ್ಥಳಕ್ಕೆ ಗ್ರಾಮಾಂತರ ಪೋಲಿಸ್ ಠಾಣೆಯ ಪಿಎಸ್ ಐ ಜಯರಾಮ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾಲೀಕನ ಬಂಧನ ಅಥವಾ ಸೂಕ್ತ ಪರಿಹಾರ ಅಗುವವರಿಗೂ ಶವ ಪಡೆಯಲು ಕುಟುಂಬದವರ ನಿರಾಕರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ