ಅರ್ಧ ಹೇಳಿಕೆಗೆ ಮಹತ್ವ ನೀಡಿ ಗೊಂದಲ ಸೃಷ್ಟಿಸಲಾಗಿದೆ : ಸಚಿವ ಎಂಟಿಬಿ ನಾಗರಾಜ್

`ಕೇಳದೇ' ಕಾಂಗ್ರೆಸ್ ಪಕ್ಷ ಬಿಟ್ಟು ತಪ್ಪು ಮಾಡಿದೆ..!

Team Udayavani, May 26, 2022, 6:42 PM IST

mtb-nagaraju

ವಿಜಯಪುರ : ಕಾಂಗ್ರೆಸ್ಸಿನಿಂದ ಗೆದ್ದಿದ್ದ 15 ಶಾಸಕರು ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷಕ್ಕೆ ಬಂದಿದ್ದು, ಮತ್ತೆ ನಾವ್ಯಾರು ಕಾಂಗ್ರೆಸ್ ಪಕ್ಷಕ್ಕೆ ಮರಳುವ ಮಾತಿಲ್ಲ. ನನ್ನ ಅರ್ಧ ಹೇಳಿಕೆಗೆ ಮಹತ್ವ ನೀಡಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ನಮಗೆ ಖಾತೆ ಹಂಚಿಕೆ ವಿಷಯದಲ್ಲಿ ಅಸಮಾಧಾನವಿಲ್ಲ, ಬಿಜೆಪಿ ತೊರೆಯುವ ಮಾತಿಲ್ಲ ಎಂದು ಸಚಿವ ಎಂ.ಟಿ.ಬಿ.ನಾಗರಾಜ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಬಿಟ್ಟು ತಪ್ಪು ಮಾಡಿದೆ ಎಂದು ತಮ್ಮ ಹೇಳಿಕೆಗೆ ಸಮಜಾಯಿಸಿ ನೀಡಿದ ಅವರು, ಕಾರ್ಯಕರ್ತರು ನೀವೇಕೆ ಪಕ್ಷ ಬಿಟ್ಟು ಹೋದಿರಿ, ನಮ್ಮನ್ನು ಏಕೆ ಕೇಳಲಿಲ್ಲ ಎಂದೆಲ್ಲ ಕಾರ್ಯಕರ್ತರು ಪ್ರಶ್ನೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸುವಾಗ ನಿಮಗೆ ಕೇಳದೇ ಹೋಗಿದ್ದು ತಪ್ಪಾಯ್ತಪ್ಪಾ ಅಂತ ಹೇಳಿದ್ದೆ. ಆದರೆ ಮಾಧ್ಯಮಗಳು `ಕೇಳದೇ’ ಎನ್ನುವ ಪದ ಕತ್ತರಿಸಿ ಕೇವಲ ನಾನು ಹೋಗಿ ತಪ್ಪು ಮಾಡಿದೆ ಎಂಬುದನ್ನು ಪ್ರಸಾರ ಮಾಡಿ ಗೊಂದಲ ಸೃಷ್ಟಿಸಿವೆ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಅವರಿಗೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಉದ್ದೇಶದಿಂದ ಪಕ್ಷದ ವರಿಷ್ಠರು ಮೇಲ್ಮನೆ ಚುನಾವಣೆಗೆ ಟಿಕೆಟ್ ನೀಡಿರಲಿಕ್ಕಿಲ್ಲ. ಪಕ್ಷದಲ್ಲಿ ಸಂಘಟನೆ ಚತುರನಾಗಿರುವ ವಿಜಯೇಂದ್ರ ಅವರಿಗೆ ನೇರ ಚುನವಣೆಗೆ ಅವಕಾಶ ನೀಡುವ ಉದ್ದೇಶದಿಂದ ಪಕ್ಷ ಈ ನಿರ್ಧಾರ ಕೈಗೊಂಡಿರಬಹುದು. ಇದು ನನ್ನ ಊಹೆ ಎಂದರು.

ಇನ್ನೂ ಯುವಕರಾಗಿರುವ ವಿಜಯೇಂದ್ರ ಅವರು, ರಾಜಕೀಯದಲ್ಲಿ ಬೆಳೆಯಲು ಪಕ್ಷದ ವರ್ಚಸ್ಸಿನ ಜೊತೆಗೆ ಅವರ ತಂದೆಯ ಹೆಸರಿನ ದೊಡ್ಡ ಶಕ್ತಿ ಇದೆ. ಭವಿಷ್ಯದಲ್ಲಿ ಯುವ ನಾಯಕರಾಗಿ ಬೆಳೆಯುವ ಎಲ್ಲ ಅವಕಾಶ ಇರುವ ವಿಜಯೇಂದ್ರ ಅವರು, ಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಿ, ಗೆದ್ದು ಶಾಸಕರಾಗಲಿದ್ದಾರೆ ಎಂದರು.

ಮೂರು ಬಾರಿ ಮುಖ್ಯಮಂತ್ರಿ ಆಗಿರುವ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತ ಜನಮನದಲ್ಲಿದೆ. ತಂದೆಯಂತೆ ಪಕ್ಷ ಸಂಘಟಿಸಿ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಪಕ್ಷ ಮತ್ತಷ್ಟು ಬಲಿಷ್ಠವಾಗಿ ಕಟ್ಟುವ ವಿಶ್ವಾಸವಿದೆ ಎಂದರು.

ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಮುಂದಿನ ಚುನಾವಣೆಯಲ್ಲಿ ನಮ್ಮ ಕ್ಷೇತ್ರದಲ್ಲೇ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಮತ್ತೆ ಗೆದ್ದು ಬರುತ್ತೇನೆ ಎಂದರು.

ಇದನ್ನೂ ಓದಿ : ಪುತ್ತೂರು: ಮರ ಕಡಿಯುವ ವೇಳೆ ವಿದ್ಯುತ್‌ ಸ್ಪರ್ಶಿಸಿ ಕಾರ್ಮಿಕ ಸಾವು

ಪಠ್ಯಕ್ರಮದಲ್ಲಿ ಹೆಡ್ಗೆವಾರ್ ಭಾಷಣ ಸೇರ್ಪಡೆಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಅಂತಿಮ ನಿರ್ಮಾನ ಶಿಕ್ಷಣ ಸಚಿವ ನಾಗೇಶ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಟ್ಟದ್ದು ಎಂದರು.

ಬಿಜೆಪಿ ಪಕ್ಷದಲ್ಲಿ ಯಡಿಯೂಪ್ಪ ಹಾಗೂ ಬಿ.ಎಲ್.ಸಂತೋಷ ಮಧ್ಯೆ ಗುಂಪುಗಾರಿಕೆ, ಬಣ ರಾಜಕಾರಣವಿಲ್ಲ. ಎಲ್ಲರೂ ಬಿಜೆಪಿ ಪಕ್ಷದವರೇ, ಇದೆಲ್ಲ ಊಹಾಪೋಹ ಮಾತ್ರ ಎಂದರು.

ಸಂಘಟನಾ ಚತುರರಾಗಿರುವ ಕೇಂದ್ರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಪಕ್ಷದ ಹಿರಿಯ ಶಾಸಕರಾಗಿರುವ ಬಸನಗೌಡ ಪಾಟೀಲ ಅವರಿಗೆ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಬೇಕಿತ್ತು. ಸಂಪುಟ ವಿಸ್ತರಣೆ ವೇಳೆ ವರಿಷ್ಠರು ಅವಕಾಶ ನೀಡುವ ನಿರೀಕ್ಷೆ ಇದೆ ಎಂದರು.

ಟಾಪ್ ನ್ಯೂಸ್

Bantwal ವರ್ಷದ ಮೊದಲ ಮಳೆ; ಕುದ್ರೆಬೆಟ್ಟು ಹೆದ್ದಾರಿಯಲ್ಲಿ ಕಾರು ಪಲ್ಟಿ

Bantwal ವರ್ಷದ ಮೊದಲ ಮಳೆ; ಕುದ್ರೆಬೆಟ್ಟು ಹೆದ್ದಾರಿಯಲ್ಲಿ ಕಾರು ಪಲ್ಟಿ

Rain ಅಬ್ಬರದ ಮಳೆ ಜತೆ ಅನಾಹುತಗಳ ಸುರಿಮಳೆ; ಕೃಷಿಗೆ ಹಾನಿ, ಉರುಳಿದ ಮರಗಳು

Rain ಅಬ್ಬರದ ಮಳೆ ಜತೆ ಅನಾಹುತಗಳ ಸುರಿಮಳೆ; ಕೃಷಿಗೆ ಹಾನಿ, ಉರುಳಿದ ಮರಗಳು

Bommai BJP

Basavaraj Bommai; ಕಟುಸತ್ಯ ಹೇಳಲು ಇವತ್ತಿನ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ

rain-1

Rain; ಮತ್ತೆ 10 ಜಿಲ್ಲೆಗಳಲ್ಲಿ ಮಳೆ ಆರ್ಭಟ: 2 ಸಾವು

ಕರಾವಳಿಗೆ ಮುಂದುವರಿದ ಪ್ರವಾಸಿಗರ ಪ್ರವಾಹ; ದೇಗುಲ, ಬೀಚ್‌ಗಳಲ್ಲಿ ಜನಸಂದಣಿ

ಕರಾವಳಿಗೆ ಮುಂದುವರಿದ ಪ್ರವಾಸಿಗರ ಪ್ರವಾಹ; ದೇಗುಲ, ಬೀಚ್‌ಗಳಲ್ಲಿ ಜನಸಂದಣಿ

Mangaluru ಮೂಲದ ಫಾ| ವಿಲ್ಫ್ರೆಡ್‌ ; ಝಾನ್ಸಿ ಧರ್ಮಪ್ರಾಂತದ ಸಹಾಯಕ ಬಿಷಪ್‌ ಆಗಿ ನೇಮಕ

Mangaluru ಮೂಲದ ಫಾ| ವಿಲ್ಫ್ರೆಡ್‌ ; ಝಾನ್ಸಿ ಧರ್ಮಪ್ರಾಂತದ ಸಹಾಯಕ ಬಿಷಪ್‌ ಆಗಿ ನೇಮಕ

1-weqwqe

Babaleshwar: ಸಾಲ ಬಾಧೆಯಿಂದ ರೈತ ಮಹಿಳೆ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme Court

ತೀರ್ಪು ತಿದ್ದಿದ ಪ್ರಕರಣ: ಡಾ| ಸಿದ್ಧಲಿಂಗ ಸ್ವಾಮೀಜಿಗೆ ಸುಪ್ರೀಂ ನೋಟಿಸ್‌ ಜಾರಿ

Bommai BJP

Basavaraj Bommai; ಕಟುಸತ್ಯ ಹೇಳಲು ಇವತ್ತಿನ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ

rain-1

Rain; ಮತ್ತೆ 10 ಜಿಲ್ಲೆಗಳಲ್ಲಿ ಮಳೆ ಆರ್ಭಟ: 2 ಸಾವು

1-weqwqe

Babaleshwar: ಸಾಲ ಬಾಧೆಯಿಂದ ರೈತ ಮಹಿಳೆ ಆತ್ಮಹತ್ಯೆ

police crime

Bidar; 15 ಕೋಟಿ ರೂ. ಮೌಲ್ಯದ ಗಾಂಜಾ ಪೊಲೀಸರಿಂದ ಜಪ್ತಿ: ಇಬ್ಬರ ಬಂಧನ

MUST WATCH

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

ಹೊಸ ಸೇರ್ಪಡೆ

Bantwal ವರ್ಷದ ಮೊದಲ ಮಳೆ; ಕುದ್ರೆಬೆಟ್ಟು ಹೆದ್ದಾರಿಯಲ್ಲಿ ಕಾರು ಪಲ್ಟಿ

Bantwal ವರ್ಷದ ಮೊದಲ ಮಳೆ; ಕುದ್ರೆಬೆಟ್ಟು ಹೆದ್ದಾರಿಯಲ್ಲಿ ಕಾರು ಪಲ್ಟಿ

Supreme Court

ತೀರ್ಪು ತಿದ್ದಿದ ಪ್ರಕರಣ: ಡಾ| ಸಿದ್ಧಲಿಂಗ ಸ್ವಾಮೀಜಿಗೆ ಸುಪ್ರೀಂ ನೋಟಿಸ್‌ ಜಾರಿ

accident

Sakaleshpura ಪಿಕಪ್‌ ಪಲ್ಟಿ: ಕಕ್ಯಪದವಿನ ಯುವಕ ಸಾವು

Rain ಅಬ್ಬರದ ಮಳೆ ಜತೆ ಅನಾಹುತಗಳ ಸುರಿಮಳೆ; ಕೃಷಿಗೆ ಹಾನಿ, ಉರುಳಿದ ಮರಗಳು

Rain ಅಬ್ಬರದ ಮಳೆ ಜತೆ ಅನಾಹುತಗಳ ಸುರಿಮಳೆ; ಕೃಷಿಗೆ ಹಾನಿ, ಉರುಳಿದ ಮರಗಳು

Bommai BJP

Basavaraj Bommai; ಕಟುಸತ್ಯ ಹೇಳಲು ಇವತ್ತಿನ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.