ಭಾರತಕ್ಕೆ “ಮಣ್ಣು ಉಳಿಸಿ’ ಅಭಿಯಾನ
Team Udayavani, May 29, 2022, 6:25 AM IST
“ಮಣ್ಣು ರಕ್ಷಣೆ ಅತೀ ಮುಖ್ಯ’- ಯಾರೂ ಗಮನಿಸದ ಈ ಅಂಶದ ವಿಚಾರದಲ್ಲಿ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿ ರುವುದು ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಅವರು. “ಮಣ್ಣು ಉಳಿಸಿ’ ಅಭಿಯಾನ ನಡೆಸುತ್ತಿರುವ ಅವರು ಬರೋಬ್ಬರಿ 26 ರಾಷ್ಟ್ರಗಳನ್ನು ಏಕಾಂಗಿಯಾಗಿ ಮೋಟಾರು ವಾಹನದಲ್ಲಿ ಸುತ್ತಿ ಇಂದು ಭಾರತಕ್ಕೆ ವಾಪಸಾಗುತ್ತಿದ್ದಾರೆ.
ಅಭಿಯಾನಕ್ಕೆ ಸಿಕ್ಕ ಬೆಂಬಲ
ಸದ್ಗುರು ಅವರ ಈ ಅಭಿಯಾನಕ್ಕೆ ವಿಶ್ವಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಎಲ್ಲ ರಾಷ್ಟ್ರಗಳು ಮಣ್ಣು ಉಳಿಸಲು ಸದ್ಗುರು ಜತೆ ಕೈ ಜೋಡಿಸಲು ಸಿದ್ಧವಾಗಿವೆ. ಅಭಿಯಾನ ಪ್ರಾರಂಭವಾದಾಗಿನಿಂದ ಒಟ್ಟು 74 ರಾಷ್ಟ್ರಗಳು ಮಣ್ಣನ್ನು ಉಳಿಸುವ ಕೆಲಸ ಮಾಡಲು ಒಪ್ಪಿಕೊಂಡಿವೆ. 7 ಕೆರೀಬಿಯನ್ ದೇಶಗಳು ಸೇರಿದಂತೆ ಅಜರ್ಬೈಜಾನ್, ರೊಮೇನಿಯ ಮತ್ತು ಯುಎಇ ರಾಷ್ಟ್ರಗಳು ಒಡಂಬಡಿಕೆಗೆ ಸಹಿ ಹಾಕಿವೆ. ಕಾಮನ್ವೆಲ್ತ್ನ 54 ರಾಷ್ಟ್ರಗಳು, ಯುರೋಪಿಯನ್ ಒಕ್ಕೂಟ, ಯುರೋಪಿಯನ್ ಸಂಸ್ಥೆಗಳು, ಫ್ರಾನ್ಸ್ ಸರಕಾರ ಮಣ್ಣು ಉಳಿಸಿ ಅಭಿಯಾನವನ್ನು ಬೆಂಬಲಿಸಿವೆ. ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಹಾಗೂ ಅತೀ ದೊಡ್ಡ ಪ್ರಭಾವಿ ಇಸ್ಲಾಮ್ ಸಂಸ್ಥೆಯಾದ “ಮುಸ್ಲಿಂ ವರ್ಲ್ಡ್ ಲೀಗ್’ ಕೂಡ ಬೆಂಬಲ ನೀಡಿವೆ.
ಉದ್ದೇಶವೇನು?
– ಮಣ್ಣು ನಾಶದ ಕಡೆಗೆ ಪ್ರಪಂಚದ ಗಮನ ಸೆಳೆಯುವುದು.
– ಮಣ್ಣು ರಕ್ಷಣೆಗೆ ನೀತಿ ನಿಯ ಮಾವಳಿ ರಚಿಸಲು 3.5 ಶತಕೋಟಿ ಜನರನ್ನು ಪ್ರೇರೇಪಿಸುವುದು.
– ಮಣ್ಣಿನ ಸಾವಯುವ ಅಂಶವನ್ನು ಶೇ.3 ರಿಂದ ಶೇ.6ಕ್ಕೆ ಏರಿಸಲು ರಾಷ್ಟ್ರೀಯ ನಿಯಮಾವಳಿಗಳಲ್ಲಿ ಬದಲಾವಣೆ ತರಲು ವಿಶ್ವವನ್ನು ಪ್ರೇರೇಪಿಸುವುದು.
ಭಾರತದಲ್ಲಿ ಕಾರ್ಯಕ್ರಮಗಳು
ಮೇ 29: ಜಾಮ್ನಗರ
ಜೂ. 3: ಜೈಪುರ
ಜೂ. 5: ದಿಲ್ಲಿ
ಜೂ. 7: ಲಕ್ನೋ
ಜೂ. 9: ಭೋಪಾಲ್
ಜೂ. 12: ಮುಂಬಯಿ
ಜೂ. 15: ಹೈದರಾಬಾದ್
ಜೂ. 19: ಬೆಂಗಳೂರು
ಜೂ. 20: ಮೈಸೂರು
ಜೂ. 21: ಕೊಯಂಬತ್ತೂರು
ಮಾ. 21: ಅಭಿಯಾನ ಆರಂಭ (ಯುನೈಟೆಡ್ ಕಿಂಗ್ಡಮ್ನಿಂದ)
ಜೂ. 21: ಅಭಿಯಾನ ಮುಕ್ತಾಯ(ಭಾರತದಲ್ಲಿ)
ಎಷ್ಟು ಕಿ.ಮೀ.? 30,000 ಕಿ.ಮೀ.
ಎಷ್ಟು ರಾಷ್ಟ್ರ? 26
ಎಷ್ಟು ದಿನ? 100
75 ದಿನಗಳು ವಿದೇಶಗಳಲ್ಲಿ
25 ದಿನಗಳು ಭಾರತದಲ್ಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ
POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್ ದಾಖಲು
ರಾಹುಲ್ ಸಾಮಾನ್ಯ ಜನರ ಕಷ್ಟ ಕೇಳಿದ್ದಾರೆ, ಆದರೆ ಮೋದಿ ಅರಮನೆಯಲ್ಲಿ ಕುಳಿತಿದ್ದಾರೆ:ಪ್ರಿಯಾಂಕಾ
Panaji: ದಾರಿ ಮಧ್ಯೆ ಹೊತ್ತಿ ಉರಿದ ಟ್ರಕ್… 32 ಲಕ್ಷ ಮೌಲ್ಯದ ಸೊತ್ತು ನಷ್ಟ
Hamida Banu: ಭಾರತದ ಮೊದಲ ಮಹಿಳಾ ಕುಸ್ತಿಪಟು ಹಮೀದಾ ಬಾನುಗೆ ಗೂಗಲ್ ಡೂಡಲ್ ಗೌರವ
MUST WATCH
ಹೊಸ ಸೇರ್ಪಡೆ
Tirunelveli; ನಾಪತ್ತೆಯಾಗಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ
POCSO Case: 9ನೇ ತರಗತಿ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿದ ಶಿಕ್ಷಕ; ಪೋಕ್ಸೋ ಕೇಸ್ ದಾಖಲು
ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ: ಶಿವರಾಜ್ ತಂಗಡಗಿ
Belagavi; ಶೆಟ್ಟರ್ ಅವರಿಗೆ ಆಶೀರ್ವಾದ ಮಾಡಿದ ವಿವಿಧ ಮಠಾಧೀಶರು
ರಾಹುಲ್ ಸಾಮಾನ್ಯ ಜನರ ಕಷ್ಟ ಕೇಳಿದ್ದಾರೆ, ಆದರೆ ಮೋದಿ ಅರಮನೆಯಲ್ಲಿ ಕುಳಿತಿದ್ದಾರೆ:ಪ್ರಿಯಾಂಕಾ