ರೈತ ಸಂಘ-ಮೈಷುಗರ್ ಕಾರ್ಖಾನೆ ಅಧಿಕಾರಿಗಳ ಸಭೆ
Team Udayavani, May 29, 2022, 1:33 PM IST
ಮದ್ದೂರು: ತಾಲೂಕಿನ ಭಾರತೀನಗರ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಸ್ಥಳೀಯ ರೈತರ ಸಮಾಲೋಚನಾ ಸಭೆ ಪಟ್ಟಣದ ಲೀಲಾವತಿ ಬಡಾವಣೆ ಚಾಂಷುಗರ್ ಕಬ್ಬು ವಿಭಾಗದ ಉಪ ಕಚೇರಿಯಲ್ಲಿ ಜರುಗಿತು.
ಸಭೆ ವೇಳೆ ಜೂನ್ ಮೊದಲ ವಾರದಲ್ಲಿ ಪ್ರಸಕ್ತಹಂಗಾಮಿನ ಕಬ್ಬು ಅರೆಯುವ ಸಂಬಂಧ ರೈತ ಸಂಘದಸದಸ್ಯರೊಡನೆ ಚರ್ಚಿಸಿದ ಕಾರ್ಖಾನೆ ಅಧಿಕಾರಿಗಳುಹಿಂದಿನಂತೆ ಪ್ರಸಕ್ತ ಸಾಲಿನಲ್ಲಿಯೂ ಸಹಕರಿಸುವಂತೆ ಮನವಿ ಮಾಡಿದರು.
ವಿವಿಧ ಸಲಹೆ: ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ ಮಾತನಾಡಿ, ರೈತರು ಸರಬರಾಜು ಮಾಡುವ ಟನ್ ಕಬ್ಬಿಗೆ ಕಾರ್ಖಾನೆವತಿಯಿಂದ 300 ರೂ. ಪ್ರೋತ್ಸಾಹಧನ, ಕಟಾವು ದರ ನಿಗದಿ, ಕಾರ್ಖಾನೆಯೇ ಕಟಾವು ಹಣ ಪಾವತಿಸಂಬಂಧ ಜವಾಬ್ದಾರಿ ಹೊರುವ ಕಬ್ಬು ಸರಬರಾಜುಮುಗಿದ ತಿಂಗಳೊಳಗೆ ರೈತರಿಗೆ ಹಣ ಪಾವತಿಸುವುದೂ ಸೇರಿ ವಿವಿಧ ಸಲಹೆ ಮುಂದಿಟ್ಟರು.
ಭರವಸೆ: ರೈತರ ಸಲಹೆ ಆಲಿಸಿದ ಕಾರ್ಖಾನೆ ಉಪಾಧ್ಯಕ್ಷ ಮಣಿ, ಕೆಲ ಬೇಡಿಕೆಗಳನ್ನು ಆಡಳಿತ ಮಂಡಳಿಗಮನಕ್ಕೆ ತರುವ ಜತೆಗೆ ಕಬ್ಬು ಕಟಾವು ಮೇಸ್ತ್ರಿಗಳ ಹಣಬಟವಾಡೆಗೆ ರೈತರ ಕಬ್ಬಿನ ಹಣದಲ್ಲಿ ನಿಗದಿತ ಹಣನೀಡುವ ಕುರಿತಾಗಿ ಸಮ್ಮತಿಸಿದರಲ್ಲದೇ ಒಂದುತಿಂಗಳೊಳಗೆ ಅಂತಿಮ ಬಟವಾಡೆ ನೀಡುವುದಾಗಿಭರವಸೆ ನೀಡಿದರು.
ರೈತರ ಕಬ್ಬು ಸಾಗಿಸುವ ಲಾರಿ ಮತ್ತು ಟ್ರ್ಯಾಕ್ಟರ್ ದರ ನಿಗದಿ ಕುರಿತಾಗಿ ಉತ್ತರಿಸಿದ ಉಪಾಧ್ಯಕ್ಷ ಮಣಿ,ಮುಂದಿನ ತಿಂಗಳು ಲಾರಿ ಮಾಲಿಕರು ಮತ್ತು ರೈತಮುಖಂಡರ ಸಭೆ ಕರೆದು ಚರ್ಚಿಸಿ ಕ್ರಮ ವಹಿಸುವ ಕುರಿತಾಗಿ ಹೇಳಿದರು.
ಸಹಕರಿಸಿ: ರೈತರು ಗುಣಮಟ್ಟದ ಕಬ್ಬು ಸರಬರಾಜು ಮಾಡುವ ಜತೆಗೆ ಕಾರ್ಖಾನೆ ಆಡಳಿತ ಮಂಡಳಿಯೊಡನೆ ಸಹಕರಿಸುವಂತೆ ಸಭೆ ವೇಳೆ ಮನವಿ ಮಾಡಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜಿ.ಎ.ಶಂಕರ್, ಗೌರವಾಧ್ಯಕ್ಷ ಪುಟ್ಟಸ್ವಾಮಿ, ತಾಲೂಕು ಅಧ್ಯಕ್ಷ ಜಿ.ಕೆ.ರಾಮಕೃಷ್ಣ, ಪದಾಧಿಕಾರಿಗಳಾದ ಸಿದ್ದೇಗೌಡ,ವಿನೋದ್ಬಾಬು, ವೆಂಕಟೇಶ, ಗೊಲ್ಲರದೊಡ್ಡಿ ಅಶೋಕ್, ಕಾರ್ಖಾನೆಯ ಹಿರಿಯ ವ್ಯವಸ್ಥಾಪಕ ಮಹದೇವ ಪ್ರಸಾದ್, ಅಧಿಕಾರಿಗಳಾದ ಕೆ.ನಾಗರಾಜು, ನಿತಿಶ್, ಮಂಜು ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ