4 ದಿನ ಹಾವಿನ ಜೊತೆ ಅಜ್ಜಿ ವಾಸ! ಮೃತ ಪತಿಯೇ ಹಾವಿನ ರೂಪದಲ್ಲಿ ಬಂದಿದ್ದಾರೆಂದ ಅಜ್ಜಿ
Team Udayavani, Jun 6, 2022, 6:29 PM IST
ರಬಕವಿ-ಬನಹಟ್ಟಿ: ಕುಲಹಳ್ಳಿ ಗ್ರಾಮದ ಅಜ್ಜಿ ಶಾರದಾ ಮೋನೇಶ ಕಂಬಾರ ತನ್ನ ಪತಿಯನ್ನು ಕಳೆದುಕೊಂಡು 2 ವರ್ಷಗಳಾಗಿವೆ. ಸದಾ ಆತನನ್ನು ಜಪಿಸುತ್ತಲೇ ಬದುಕುತ್ತಿರುವ ಶಾರದಾ ಹಾವಿನ ರೂಪದಲ್ಲಿ ನನ್ನ ಮನೆಗೆ ಬಂದಿದ್ದಾನೆ ಎಂದು ಕಳೆದ ನಾಲ್ಕು ದಿನಗಳಿಂದ ಅದರ ಜೊತೆಗೆ ವಾಸವಾಗಿರುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸುವಂತಹ ಘಟನೆ ನಡೆದಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಹಾವೊಂದು ಶಾರದಾ ಕಂಬಾರ ಅವರ ಮನೆಯಲ್ಲಿ ಬಂದಿದೆ. ಮಲಗಿದ ಚಾಪೆ ಮೇಲೆ ಕಂಡ ಹಾವನ್ನು ಯಾವುದೇ ಆತಂಕಗೊಳ್ಳದೆ ತನ್ನ ಪತಿ ಹಾವಿನ ರೂಪದಲ್ಲಿ ಬಂದಿರುವುದಾಗಿ ನಂಬಿ, ಅದರ ಜೊತೆಗೆ ನಾಲ್ಕು ದಿನ ಕಳೆದಿದ್ದಾಳೆ.
ಅಕ್ಕಪಕ್ಕದ ಜನ ಹಾವನ್ನು ಹೊರಗೆ ಬಿಟ್ಟು ಬರೋಣಾವೆಂದಾಗ, ಮೃತಪಟ್ಟಿರುವ ನನ್ನ ಪತಿ ಈ ಹಾವಿನ ರೂಪದಲ್ಲಿ ಬಂದು ನನ್ನ ಹತ್ತಿರ ಇದ್ದಾರೆ. ಅದಕ್ಕೆ ಯಾರೂ ತೊಂದರೆ ಮಾಡಬಾರದು, ಹಿಡಿಯಬಾರದು ಎಂದು ಅದನ್ನು 4 ದಿನಗಳಿಂದ ಅಜ್ಜಿ ಶಾರದಾ, ತಾನು ಮಲಗುವ ಚಾಪೆ ಮೇಲೆ ಇರಿಸಿ, ಅದನ್ನು ಜೋಪಾನ ಮಾಡುತ್ತಿದ್ದರು. ಹೀಗಾಗಿ ಅಜ್ಜಿಯ ನಂಬಿಕೆ ಹಾಗು ಹಾವನ್ನು ನೋಡಲು ಸುತ್ತಮುತ್ತಲಿನ ಜನ ಮುಗಿ ಬಿದ್ದಿದ್ದರು.
ಇದನ್ನೂ ಓದಿ: 2006ರ ವಾರಾಣಸಿ ಸರಣಿ ಸ್ಫೋಟ : ಉಗ್ರ ವಲಿಯುಲ್ಲಾಗೆ ಮರಣ ದಂಡನೆ
ನಾಲ್ಕು ದಿನಗಳಿಂದ ಹಾವಿಗೆ ಊಟ, ಹಾಲು ಏನು ಇಲ್ಲದ ಕಾರಣ ಅಸ್ವಸ್ಥಗೊಂಡು ಸುಸ್ತಾಗಿ ಬಿದ್ದಿದೆ ಎಂದು ಹೇಳಲಾಗಿತ್ತಾದರೂ, ಸುತ್ತಲಿನ ಜನ ಅದಕ್ಕೆ ಹಾಲು ನೀಡಿದರೂ ಕುಡಿಯದೆ ಬಾಯಿ ಹತ್ತಿರ ಸ್ವಲ್ಪ ಗಾಯವಿತ್ತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸೋಮವಾರ ಅಜ್ಜಿಯ ಮನವೊಲಿಸಿ ಸಮೀಪದ ಕೃಷ್ಣಾ ನದಿ ತಟದ ಅರಣ್ಯ ಭಾಗದಲ್ಲಿ ಹಾವನ್ನು ಸ್ಥಳೀಯರು ಬಿಟ್ಟು ಬಂದ ಪ್ರಕರಣ ನಡೆದಿದೆ.
ನನ್ನ ಪತಿಯು ಹಾವಿನ ರೂಪದಲ್ಲಿ ಬಂದಿದ್ದಾನೆ. ಅದಕ್ಕಾಗಿಯೇ ಜೋಪಾನವಾಗಿ ನನ್ನ ಹತ್ತಿರ ಇತ್ತು. ಓಣಿಯವರು ಇಂದು ಹೊರಗೆ ಬಿಟ್ಟು ಬಂದಿದ್ದಾರೆ. -ಶಾರದಾ ಮೋನೇಶ ಕಂಬಾರ
ಶಾರದಾ ಎಂಬ ಅಜ್ಜಿಯು ತನ್ನ ಗಂಡ ರೂಪದಲ್ಲಿ ಹಾವು ಮನೆಗೆ ಬಂದಿದೆ ಎಂದು ತಿಳಿದುಕೊಂಡಿದ್ದಾಳೆ. ಸುತ್ತಲಿನ ಕುಟುಂಬಗಳಿಗೆ ತೊಂದರೆಯಾಗಿ ಭಯದಲ್ಲಿದ್ದರು. ಈ ಕಾರಣದಿಂದ ಹೊಳೆಯ ನಿಸರ್ಗದತ್ತ ಬಿಟ್ಟು ಬಂದೇವು.-ಹೊಳೆಬಸು ತಳವಾರ, ಹಿರಿಯರು, ಕುಲಹಳ್ಳಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್
Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್