3,400 ವರ್ಷ ಹಿಂದಿನ ಪ್ರಾಚೀನ ನಗರ ಪತ್ತೆ
ಇರಾಕ್ನ ಕುರ್ದಿಶ್ ಪ್ರಾಂತ್ಯದ ಕೆಮುನ್ನಲ್ಲಿ ಕುತೂಹಲ ವಿದ್ಯಮಾನ
Team Udayavani, Jun 7, 2022, 7:00 AM IST
ಬಾಗ್ಧಾದ್: ಮೈಸೂರಿನ ಕೃಷ್ಣರಾಜ ಸಾಗರ ಅಣೆಕಟ್ಟಿನಲ್ಲಿ ನೀರು ಬರಿದಾದಾಗ ಅದರೊಳಗೆ ಮುಳುಗಿದ್ದ ಹಳೆಯ ಶ್ರೀ ವೇಣುಗೋಪಾಲ ದೇವಸ್ಥಾನ ಕಂಡುಬರುವಂತೆ, ಇರಾಕ್ನ ಕುರ್ದಿಶ್ ಪ್ರಾಂತ್ಯದಲ್ಲಿ, ವಿಶಾಲವಾದ ಜಲಾಶಯವೊಂದರಲ್ಲಿ ಮುಳುಗಿಹೋಗಿದ್ದ 3,400 ವರ್ಷಗಳ ಹಿಂದಿನ ನಗರವೊಂದು ಪುನಃ ಕಾಣಿಸಿಕೊಂಡಿದೆ. ಆದರೆ, ಈ ನಗರ ಕಾಣಿಸಿಕೊಂಡಿರುವುದು ಇದೇ ಮೊದಲು.
ಕುರ್ದಿಷ್ ಪ್ರಾಂತ್ಯದ ಕೆಮುನ್ ಎಂಬಲ್ಲಿ ಟಿಗ್ರಿಸ್ ಎಂಬ ನದಿಗೆ ಜಲಾಶಯವೊಂದನ್ನು ದಶಕಗಳ ಹಿಂದೆಯೇ ಕಟ್ಟಲಾಗಿದೆ. ಆಗಿನಿಂದ ಇಲ್ಲಿಯವರೆಗೆ ನದಿಯಲ್ಲಿ ನೀರು ಯಥೇತ್ಛವಾಗಿ ಹರಿಯುತ್ತಿತ್ತು. ಈಗ ಈ ಪ್ರಾಂತ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಮಳೆಯಿಲ್ಲದ ಕಾರಣ ಟ್ರಿಗ್ರಿಸ್ ನದಿಯಲ್ಲಿ ನೀರು ಬತ್ತಿ ಹೋಗಿದೆ. ಅದರ ಪರಿಣಾಮದಿಂದಾಗಿ ಜಲಾಶಯವೂ ಬರಿದಾಗಿದ್ದು ಅದರ ಹಿನ್ನೀರಿನಲ್ಲಿ ಮುಳುಗಿ ಹೋಗಿದ್ದ ಪುರಾತನ ನಗರ ಗೋಚರಿಸಿದೆ.
ವಿಷಯ ತಿಳಿದ ಕೂಡಲೇ, ಜರ್ಮನಿ ಹಾಗೂ ಕುರ್ದಿಶ್ ಪ್ರಾಂತ್ಯದ ಪ್ರಾಚ್ಯವಸ್ತು ತಜ್ಞರು ಆಗಮಿಸಿ ಸ್ಥಳದಲ್ಲಿ ಸಂಶೋಧನೆ ನಡೆಸಿದ್ದು, ಇದು ಕ್ರಿಸ್ತ ಪೂರ್ವ 1350ರಿಂದ 1550ರವರೆಗೆ ಅಸ್ತಿತ್ವದಲ್ಲಿದ್ದ ಮಿತ್ತಾನಿ ಸಾಮ್ರಾಜ್ಯದಲ್ಲಿ ಇದ್ದ ನಗರ ಇದಾಗಿತ್ತೆಂದು ತಿಳಿಸಿದ್ದಾರೆ.
ವ್ಯಾವಹಾರಿಕವಾಗಿ, ಸಾಂಸ್ಕೃತಿಕವಾಗಿ ಇದೊಂದು ಪ್ರಮುಖ ನಗರವಾಗಿತ್ತೆಂದೂ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್
PM Modi ಪತ್ರಿಕಾಗೋಷ್ಠಿ ಯಾಕೆ ನಡೆಸುವುದಿಲ್ಲ? ಉತ್ತರಿಸಿದ ಪ್ರಧಾನಿ ಮೋದಿ
Mumbai Hoarding Collapse; ರಾಜಸ್ಥಾನದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಪ್ರಮುಖ ಆರೋಪಿ
Covishield ಲಸಿಕೆಯಿಂದ ಮತ್ತೊಂದು ಸೈಡ್ಎಫೆಕ್ಟ್!
3rd Term; ನೂರಲ್ಲ, 125 ದಿನಗಳ ಯೋಜನೆ ಸಿದ್ಧ: ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ
Tollywood: ಪ್ರಶಾಂತ್ ನೀಲ್ – Jr. NTR ಸಿನಿಮಾಕ್ಕೆ ಈ ಟೈಟಲ್ ಫಿಕ್ಸ್?
Kannada Cinema; ‘ಸ್ವಪ್ನ ಮಂಟಪ’ದಲ್ಲಿ ವಿಜಯ ರಾಘವೇಂದ್ರ-ರಂಜನಿ; ಬರಗೂರು ನಿರ್ದೇಶನ
AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್
ಕಾರ್ತಿಕ್ – ಸೂರ್ಯ ಕಾಂಬಿನೇಷನ್ ನ ಬಹು ನಿರೀಕ್ಷಿತ ಸಿನಿಮಾಕ್ಕೆ ಪೂಜಾ ಹೆಗ್ಡೆ ನಾಯಕಿ?