ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಸಮಿತಿಯು ಎಡವಿದೆ… : ಸಂಸದ ಶ್ರೀನಿವಾಸಪ್ರಸಾದ್
Team Udayavani, Jun 7, 2022, 7:13 PM IST
ಚಾಮರಾಜನಗರ : ಪಠ್ಯ ಪುಸ್ತಕ ಪರಿಷ್ಕರಣೆ ವಿಷಯದಲ್ಲಿ ಎಡವಿದ್ದಾರೆ, ಡಾ. ಅಂಬೇಡ್ಕರ್, ಬಸವಣ್ಣನವರ ವಿಚಾರಗಳಲ್ಲಿ ಲೋಪಗಳಾಗಿವೆ ಎಂದು ಬಿಜೆಪಿ ಸಂಸದ ವಿ. ಶ್ರೀನಿವಾಸಪ್ರಸಾದ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗೆ ಉತ್ತರಿಸಿದ ಅವರು, ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಆಗಿರುವ ತಪ್ಪಿಗೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಪರ ವಿರೋಧ ವ್ಯಕ್ತವಾಗಿದೆ. ಸಮಿತಿಯು ಎಡವಿದೆ. ಈ ಸಂಬಂಧ ಪುನರ್ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ. ಪರಿಷ್ಕೃತ ಪಠ್ಯಪುಸ್ತಕ ಇನ್ನೂ ಓದಿಲ್ಲ. ಲೋಪದೋಷಗಳಿರುವುದು ಗೊತ್ತಾಗಿದೆ. ಪಠ್ಯಪುಸ್ತಕದಲ್ಲಿ ವಾಸ್ತವವನ್ನು ತಿಳಿಸಿ ಮಕ್ಕಳಿಗೆ ಅರ್ಥವಾಗುವ ರೀತಿ ಮಾಡಬೇಕು ಎಂದು ಹೇಳಿದರು.
ನಾನು ಮೊದಲ ಬಾರಿ ಲೋಕಸಭೆಗೆ ಗೆದ್ದಿದ್ದ ಸಂದರ್ಭದಲ್ಲೇ ಹೇಳಿದ್ದೆ. ಪಠ್ಯಪುಸ್ತಕಗಳಲ್ಲಿ ಮಕ್ಕಳ ಮನಸ್ಸಿಗೆ ನೋವಾಗುವಂತಹ ವಿಷಯಗಳಿರಬಾರದು. ಆಗ ಪಠ್ಯಪುಸ್ತಕವೊಂದರಲ್ಲಿ ಗಣೇಶನ ಹಬ್ಬ ಆಚರಣೆ ಕುರಿತ ಪಾಠವಿತ್ತು. ಗಣೇಶನ ಹಬ್ಬಕ್ಕೆ ಹೊಸಬಟ್ಟೆ ಹಾಕಿಕೊಂಡು ಸಂಭ್ರಮಿಸುತ್ತಾರೆ. ಮನೆಗಳಲ್ಲಿ ಕಾಯಿಕಡುಬು ಮಾಡುತ್ತಾರೆ ಎಂಬ ವಿವರಣೆಗಳಿದ್ದವು. ಈ ಪಾಠವನ್ನು ಓದಿದ ಬಡ ಮಕ್ಕಳಿಗೆ ಇದರಿಂದ ಬೇಸರವಾಗುತ್ತದೆ. ತಮಗೆ ಹಬ್ಬಕ್ಕೆ ಹೊಸಬಟ್ಟೆಯಿಲ್ಲ, ನಮ್ಮ ಮನೆಯಲ್ಲಿ ಕಾಯಿಕಡುಬು ಮಾಡುವುದಿಲ್ಲ ಎಂದು ನಿರಾಶೆ ಹೊಂದುತ್ತಾರೆ. ಹಾಗಾಗಿ ಇಂಥ ವಿಷಯಗಳು ಪಠ್ಯದಲ್ಲಿ ಬೇಡ ಎಂದು ಹೇಳಿದ್ದೆ ಎಂದರು.
ಇದನ್ನೂ ಓದಿ : ಇನ್ನೂ ಹತ್ತು ವರ್ಷ ಸಕ್ರೀಯ ರಾಜಕೀಯದಲ್ಲಿ ಇರುತ್ತೇನೆ: ಯಡಿಯೂರಪ್ಪ
ಧಾರ್ಮಿಕ-ಭಾವನಾತ್ಮಕ ವಿಷಯಗಳಿಂದ ಜನರನ್ನು ಕೆರಳಿಸುವುದು ತಪ್ಪು:
ಸರ್ಕಾರಗಳು ಅಭಿವೃದ್ಧಿ ಕಾರ್ಯದತ್ತ ಗಮನ ಕೇಂದ್ರೀಕರಿಸಬೇಕೇ ಹೊರತು, ಧಾರ್ಮಿಕ, ಭಾವನಾತ್ಮಕ ವಿಷಯಗಳನ್ನು ಎಳೆದುತಂದು ಜನರನ್ನು ಕೆರಳಿಸುವುದು ತಪ್ಪು. ಇದು ಅಫೀಮು ಇದ್ದಂತೆ. ಧರ್ಮವನ್ನು ಮನುಷ್ಯನ ಒಳಿತಿಗಾಗಿ ಬಳಸಬೇಕು ಎಂದು ಸಂಸದ ಶ್ರೀನಿವಾಸಪ್ರಸಾದ್ ಹೇಳಿದರು.
ಇಂದು ಧರ್ಮವನ್ನು ವೈಭವೀಕರಿಸಲಾಗುತ್ತಿದೆ. ಈ ಭಾವನಾತ್ಮಕ ವಿಷಯಗಳನ್ನೇ ಹಿಡಿದುಕೊಂಡು ಬಹಳ ಕಾಲದವರೆಗೆ ಆಡಳಿತ ನಡೆಸಲು ಸಾಧ್ಯವಿಲ್ಲ. ಇದು ಸೋಡಾಗ್ಯಾಸ್ ನಂತೆ. ಅಭಿವೃದ್ಧಿ ಕೆಲಸಗಳನ್ನು ಮಾಡುವುದು ಮುಖ್ಯ. ಬೆಲೆಯೇರಿಕೆಯಿಂದ ತತ್ತರಿಸಿದ್ದರೂ ಜನರು ಸರ್ಕಾರವನ್ನು ಬೆಂಬಲಿಸಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಂಡು ಅಭಿವೃದ್ದಿ ಕೆಲಸಗಳನ್ನು ಮಾಡಬೇಕು ಎಂದು ಶ್ರೀನಿವಾಸಪ್ರಸಾದ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು
Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
MUST WATCH
ಹೊಸ ಸೇರ್ಪಡೆ
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು
Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ
Puneeth Rajkumar: ಮರು ಬಿಡುಗಡೆಯತ್ತ ಅಂಜನಿಪುತ್ರ
T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್
ಮಹಾತ್ಮರ ಸಮಾಜಮುಖಿ ಸಂದೇಶ ಸಾರ್ವಕಾಲಿಕ: ಗುರುಮೂರ್ತಿ ಶ್ರೀ