ಕನ್ನಡ ಬಾವುಟಕ್ಕೆ ಅಪಮಾನ : ಕರವೇ ಮಲ್ಲಕ್ಕಿ ರಾಘವೇಂದ್ರ ಆಕ್ರೋಶ
Team Udayavani, Jun 16, 2022, 1:39 PM IST
ತೀರ್ಥಹಳ್ಳಿ : ಪಠ್ಯ ಪುಸ್ತಕ ಪರಿಷ್ಕರಣೆ ವಿರುದ್ಧ ನೆಡೆದ ಬೃಹತ್ ಪ್ರತಿಭಟನಾ ಪಾದಯಾತ್ರೆಯಲ್ಲಿ ಕನ್ನಡ ಬಾವುಟಕ್ಕೆ ಅವಮಾನ ಮಾಡಿರುವುದು ತಪ್ಪು ಎಂದು ಕರವೇ ಪ್ರಧಾನ ಕಾರ್ಯದರ್ಶಿ ಮಲ್ಲಕ್ಕಿ ರಾಘವೇಂದ್ರ ಆಕ್ರೋಶ ಹೊರ ಹಾಕಿದ್ದಾರೆ.
ಕನ್ನಡ ಬಾವುಟಕ್ಕೆ ಅವಮಾನವಾದ ಕುರಿತು ಉದಯವಾಣಿ ವರದಿ ಮಾಡಿದ ಬೆನ್ನಲ್ಲೇ ಉದಯವಾಣಿ ತೀರ್ಥಹಳ್ಳಿ ವರದಿಗಾರರ ಜತೆ ಮಾತನಾಡಿದ ಕರವೇ ಪ್ರಧಾನ ಕಾರ್ಯದರ್ಶಿ ಮಲ್ಲಕ್ಕಿ ರಾಘವೇಂದ್ರರವರು, ಕಿಮ್ಮನೆ ರತ್ನಾಕರ್ ಈ ಪಾದಯಾತ್ರೆಯಲ್ಲಿ ಮುಂದಿರುತ್ತಾರೆ. ಹಿಂದೆ ಕಾರ್ಯಕರ್ತರು ಮಾಡಿದ ಎಡವಟ್ಟು ಇವರಿಗೆ ಗೊತ್ತಾಗಿರುವುದಿಲ್ಲ. ವಿಷಯ ತಿಳಿಯುತ್ತಿದ್ದಂತೆ ನಾವು ವಿರೋಧ ವ್ಯಕ್ತಪಡಿಸಿದರೂ, ಸಾವಿರ ಅಡಿ ಧ್ವಜ ಇತ್ತು ಎಂದು ಸಬೂಬು ಹೇಳಿದ್ದಾರೆ. ಧ್ವಜ ಒಂದು ಸಾವಿರ ಅಡಿ ಇರಲಿ ಅಥವಾ ಎರಡು ಸಾವಿರ ಅಡಿ ಉದ್ದ ಇರಲಿ ಅದು ನಮ್ಮ ಕನ್ನಡ ಧ್ವಜವೇ. ಆ ಧ್ವಜವನ್ನು ಕಾಪಾಡಲು ಸಾಧ್ಯವಾಗದೆ ಇದ್ದರೆ ಸಾವಿರಾರು ಅಡಿ ಉದ್ದದ ಧ್ವಜವನ್ನು ತರುವ ಅವಶ್ಯಕತೆ ಏನಿತ್ತು ಎಂದು ಪ್ರೆಶ್ನಿಸಿದರು.
ನಾವು ವಿರೋಧ ವ್ಯಕ್ತಪಡಿಸಿದರೂ ಕೂಡ ಧ್ವಜ ಉದ್ದ ಇದ್ದ ಕಾರಣ ಬಿದ್ದಿದೆ ಎಂದು ತಿಳಿಸಿದರು ಬಿಟ್ಟರೆ ಅದು ತಪ್ಪು ಎಂದು ಯಾರು ಒಪ್ಪಿಕೊಳ್ಳಲಿಲ್ಲ. ಈ ವಿಷಯ ವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಅವರು ಕನ್ನಡ ವಿಷಯಕ್ಕಾಗಿ, ಮಾಡಿದ ಹೋರಾಟ ಕನ್ನಡ ಬಾವುಟಕ್ಕೆ ಅವಮಾನವಾದಂತಾಗಿದೆ. ಕನ್ನಡ ಧ್ವಜ ವಾಹನ ದಟ್ಟಣೆಯ ಮಧ್ಯೆ ಬಿದ್ದಿದೆ. ಕನ್ನಡ ಧ್ವಜವನ್ನು ಕಾಪಾಡಲು ಆಗದ ಇವರಿಗೆ ಪಾದಯಾತ್ರೆಯಲ್ಲಿ ನೂರಾರು ಅಡಿ ಉದ್ದದ ಬಾವುಟ ತರುವ ಉದ್ದೇಶ ಏನಿತ್ತು ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ