ಭಟ್ಕಳ : ಟ್ಯಾಕ್ಸಿ ಚಾಲಕನ ಮೇಲೆ ಸಬ್ ಇನ್ಸ್ ಪೆಕ್ಟರ್ ಹಲ್ಲೆ : ಸೂಕ್ತ ಕ್ರಮಕ್ಕೆ ಆಗ್ರಹ
Team Udayavani, Jun 16, 2022, 9:00 PM IST
ಭಟ್ಕಳ : ಮಂಕಿ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಅಶೋಕ್ ಎನ್ನುವವರು ಟ್ಯಾಕ್ಸಿ ಚಾಲಕನೋರ್ವನ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದು ತಕ್ಷಣ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಟ್ಯಾಕ್ಸಿ ಚಾಲಕರ ಸಂಘದ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಡಿ.ವೈ.ಎಸ್.ಪಿ. ಕೆ.ಯು. ಬೆಳ್ಳಿಯಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಟ್ಯಾಕ್ಸಿ ಚಾಲಕ ಗಣಪತಿ ಹರೀಶ ನಾಯ್ಕ ಎನ್ನುವವರು ತಮ್ಮ ಟ್ಯಾಕ್ಸಿಯನ್ನು ಚಲಾಯಿಸಿಕೊಂಡು ಕುಮಟಾದಿಂದ ಧರ್ಮಸ್ಥಳಕ್ಕೆ ಬಾಡಿಗೆಗೆ ಹೋಗುತ್ತಿರುವಾಗ ರಾತ್ರಿ ಅನಂತವಾಡಿಯ ಸಮೀಪ ವಾಹನವನ್ನು ನಿಲ್ಲಿಸಲು ಸೂಚಿಸಿದ್ದಾರೆ ಆದರೆ ಟ್ಯಾಕ್ಸಿ ಚಾಲಕ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ್ದಕ್ಕೆ ಕುಪಿತಗೊಂಡ ಸಬ್ ಇನ್ಸಪೆಕ್ಟರ್ ಅಶೋಕ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ.
ಅಲ್ಲದೇ ಅವರ ವಾಹನದಲ್ಲಿರುವ ಪ್ಯಾಸೆಂಜರ್ ಎದುರಿಗೇ ಅವಾಚ್ಯ ಶಬ್ದಗಳಿಂದ ಬೈದು ಅವಮಾನಿಸಿದ್ದು ತೀವ್ರ ಖಂಡನೀಯವಾಗಿದೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಇದನ್ನೂ ಓದಿ : ರೇಣುಕಾ ಚೌಧರಿ ವಿರುದ್ಧ ಪ್ರಕರಣ ದಾಖಲು; ಕೊರಳಪಟ್ಟಿ ಹಿಡಿದ ಕೈ ನಾಯಕಿಯ ಹೊಸ ರಾಗ
ಮನವಿಯನ್ನು ಸ್ವೀಕರಿಸಿದ ಡಿ.ವೈ.ಎಸ್.ಪಿ. ಕೆ.ಯು. ಬೆಳ್ಳಿಯಪ್ಪ ಅವರು ಕ್ರಮ ಕೈಗೊಳ್ಳುವ ಭರವಸೆಯನ್ನ ನೀಡಿದರು.
ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ನವೀನ ನಾಯ್ಕ ಕುಮಟಾ, ನ್ಯಾಯವಾದಿ ಸಂತೋಷ ಎಂ. ನಾಯ್ಕ, ರಕ್ಷಾಣಾಧಿಕಾರಿ ಮಜೀದ್ ಭಟ್ಕಳ, ಕಾರ್ಯದರ್ಶಿ ಮೋಹನ ಭಟ್ಕಳ, ಶ್ರೀಕಾಂತ ಹೊನ್ನಾವರ, ರಂಜನ್ ದೇವಾಡಿಗ ಮುರ್ಡೇಶ್ವರ, ಸಂದೀಪ್ ಹೊನ್ನಾವರ, ಫಾರೂಕ್ ಮುರ್ಡೇಶ್ವರ, ಶ್ರೀಕಾಂತ ಹೊನ್ನಾವರ, ಸಂದೀಪ ಯಲ್ಲಾಪುರ, ಶ್ರೀನಿವಾಸ ಅಂಕೋಲ, ಸುಬ್ಬು ಕುಮಟಾ, ಫ್ರಾನ್ಸಿಸ್ ಕಾರವಾರ, ಫೈಸಲ್ ಭಟ್ಕಳ, ಮಂಜು ಭಟ್ಕಳ, ಫೈರೋಜ್ ಭಟ್ಕಳ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pendrive; ಪ್ರಜ್ವಲ್ ದೌರ್ಜನ್ಯ ಮಾಡುವಾಗ ಅಪ್ಪ,ಅಮ್ಮ ಕತ್ತೆ ಕಾಯುತ್ತಿದ್ದರೆ..: ಶಿವರಾಮೇಗೌಡ
Mangaluru; ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸ್ ಭದ್ರತೆ
Pen drive case; ಪ್ರಜ್ವಲ್ ರೇವಣ್ಣ ಹಾಸನ ನಿವಾಸದಲ್ಲಿ ಎಸ್ಐಟಿ ಪರಿಶೀಲನೆ
ಸಮರ್ಥ ರಾಷ್ಟ್ರ – ಸಮಗ್ರ ಅಭಿವೃದ್ಧಿಗಾಗಿ ಮತ್ತೂಮ್ಮೆ ಸಂಸತ್ಗೆ ಕಳುಹಿಸಿ: B.Y. ರಾಘವೇಂದ್ರ
Lok Sabha Election: ಗೆಲುವು ಸಾಧಿಸಿ ಮೋದಿ ಕೈ ಬಲಪಡಿಸುವೆ: ಗಾಯತ್ರಿ ಸಿದ್ದೇಶ್ವರ