ಮಂಡಿಯುದ್ದ ಗುಂಡಿಬಿದ್ದು ಕೆರೆಯಂತಾದ ರಸ್ತೆ


Team Udayavani, Jul 17, 2022, 3:51 PM IST

ಮಂಡಿಯುದ್ದ ಗುಂಡಿಬಿದ್ದು ಕೆರೆಯಂತಾದ ರಸ್ತೆ

ರಾಮನಗರ: ನಗರದ ಮಾಗಡಿ ಮುಖ್ಯರಸ್ತೆಯ ಅವ್ಯವಸ್ಥೆ ಹಾಗೂ ಮಂಡಿಯುದ್ದ ಗುಂಡಿ ಬಿದ್ದಿದ್ದು, ನೀರು ತುಂಬಿದ್ದರಿಂದ ಆಗುತ್ತಿರುವ ಅವಾಂತರ ಖಂಡಿಸಿ, ಸಾರ್ವಜನಿಕರು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.

ನಗರದ ಕೆಂಪೇಗೌಡ ಸರ್ಕಲ್‌ ಬಳಿಯ ಮಾಗಡಿ ಮುಖ್ಯರಸ್ತೆಯಾದ ರಾಜ್ಯ ಹೆದ್ದಾರಿ. ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವರಸ್ತೆಯಾಗಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಆರಸ್ತೆಯಲ್ಲಿ ಸಂಚಾರಿಸುತ್ತವೆ. ಆದರೆ, ರಾಜ್ಯ ಹೆದ್ದಾರಿಸಂಪೂರ್ಣವಾಗಿ ಗುಂಡಿ ಬಿದ್ದಿದ್ದು, ವಾಹನ ಸವಾರರುಪ್ರಾಣವನ್ನ ಕೈಯಲ್ಲಿ ಹಿಡಿದು ಸಂಚಾರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ನೀರು ತುಂಬಿದ ಮಂಡಿಯುದ್ದ ಗುಂಡಿ: ತಾಲೂಕು ಕೇಂದ್ರಕ್ಕೆ ಸಂಪರ್ಕಿಸುವ ರಸ್ತೆಯಲ್ಲೇ ಮಂಡಿಯುದ್ದ ಗುಂಡಿ ಬಿದ್ದಿದೆ. ಅಲ್ಲದೆ, ಕಳೆದ ಮೂರ್‍ನಾಲ್ಕು ದಿನಗಳಿಂದ ಎಡೆಬಿಡದ ಜಿಟಿಜಿಟಿ ಮಳೆಯ ಪರಿಣಾಮ ಗುಂಡಿ ತುಂಬಾ ನೀರು ನಿಂತಿದ್ದು, ರಸ್ತೆಕಾಣದಾಗಿದೆ. ಕರೆಯೋ, ರಸ್ತೆಯೋ ಎನ್ನುವಅನುಮಾನ ಹುಟ್ಟ ತೊಡಗಿದೆ. ಇದರಿಂದ ಇಲ್ಲಿ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿದೆ.

ಅಕ್ಕಪಕ್ಕದಲ್ಲೇ ಮೂರ್‍ನಾಲ್ಕು ಶಾಲೆಗಳಿದ್ದು, ಅಲ್ಲಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಇದೇ ರಸ್ತೆಯಲ್ಲಿ ನಡೆದು ಹೋಗಬೇಕಿದೆ. ಕೆಲವರು ಬೈಕ್‌ಗಳಲ್ಲಿ ಸಂಚರಿಸುತ್ತಾರೆ, ಅದೇ ವೇಳೆಗೆ ಬಸ್‌ ಅಥವಾ ದೊಡ್ಡ ಯಾವುದೇ ವಾಹನ ಬಂದರೂ ಅದು ಸಾಗುವರಭಸಕ್ಕೆ ಕೊಳಚೆ ನೀರು ಮೈಮೇಲೆ ಬಿದ್ದು ಸಮವಸ್ತ್ರಗಲೀಜಾಗುವ ಸಾಧ್ಯತೆ ಹೆಚ್ಚಾಗಿದೆ. ಕೆಲವೊಮ್ಮೆ ಗುಂಡಿಯ ಆಳ ತಿಳಿಯದ ಬೈಕ್‌ ಸವಾರರು ಬಿದ್ದು ಗಾಯಗೊಂಡಿದ್ದಾರೆ.

ಕಳಪೆ ಕಾಮಗಾರಿ ಅವಾಂತರ: ಇದೀಗ ಹದಗೆಟ್ಟ ರಸ್ತೆಯನ್ನ ಕೇವಲ ಆರು ತಿಂಗಳ ಹಿಂದೆ ಲಕ್ಷಾಂತರ ರೂ. ವೆಚ್ಚ ಮಾಡಿ ಡಾಂಬರೀಕರಣ ಸಹ ಮಾಡಲಾಗಿತ್ತು. ಆದರೆ, ಕಾಮಗಾರಿ ಮುಗಿದು ಆರು ತಿಂಗಳಲ್ಲೇ ಇಡೀ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ರಸ್ತೆಯಲ್ಲಿಗುಂಡಿಗಳು ಬಿದ್ದು ನೀರು ತುಂಬಿಕೊಂಡಿತ್ತು. ಕಳಪೆ ಕಾಮಗಾರಿಯಿಂದ ಇಂತಹ ಅವಾಂತರ ಸೃಷ್ಟಿಯಾಗಿದೆ ಎನ್ನುತ್ತಾರೆ ಸ್ಥಳೀಯರಾದ ಕುಮಾರ್‌ ಮತ್ತು ಗೋಪಾಲ್‌.

ಮೊಂಡು ಚರ್ಮದ ಅಧಿಕಾರಿಗಳು: ರಸ್ತೆ ಹದಗೆಟ್ಟಿದೆ ಎಂದು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಇತ್ತ ಚಿತ್ತ ಹರಿಸಿಲ್ಲ. ಇನ್ನು ಹೆದ್ದಾರಿಯಲ್ಲಿ ಕೇಬಲ್‌ ಲೈನ್‌ ಹಾಕಲು ಒಬ್ಬರು ಬಗೆದು ಗುಂಡಿಮಾಡ್ತಾರೆ, ಮತ್ತೂಬ್ಬರು ಯುಜಿಡಿ ನೆಪದಲ್ಲಿ ಬಗೀತಾರೆ. ಆದರೆ, ಸರಿಯಾಗಿ ಗುಂಡಿ ಮುಚ್ಚುವ ಕೆಲಸ ಮಾಡದ ಕಾರಣ ಇಂತಹ ಅವಾಂತರ ಸೃಷ್ಟಿಯಾಗಿದೆ. ಯಾರು ಏನೇ ಮಾಡಿದರೂ ಸಾರ್ವಜನಿಕರಿಗೆ ಮಾತ್ರ ತೊಂದರೆ ತಪ್ಪಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಬಿಸಿಗೆ ಕಾಮಗಾರಿ ಆರಂಭ: ಕಳೆದ ಹಲವು ತಿಂಗಳಿಂದ ರಸ್ತೆ ಹದಗೆಟ್ಟಿದ್ರು, ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು, ಜನರ ಪ್ರತಿಭಟನೆಗೆ ಹೆದರಿ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. ಪ್ರತಿಭಟನಾನಿರತರ ಮನವೊಲಿಕೆಗೆ ಹರಸಾಹಸ ಪಟ್ಟು ಕೊನೆಗೆ ಕಾಮಗಾರಿ ಆರಂಭಿಸುತ್ತಲೇ ಪ್ರತಿಭಟನೆ ಕೈಬಿಟ್ಟು ಸುಮ್ಮನಾಗಿದ್ದು ಸಾರ್ವಜನಿಕರಿಗಿದ್ದ ಆಕ್ರೋಶದ ಮಟ್ಟವನ್ನು ತಿಳಿಸಿತ್ತು.

ಬೇಸತ್ತು ಪ್ರತಿಭಟನೆ: ಒಂದೊಂದು ಇಲಾಖೆಗಳ ಮೇಲೆ ಒಬ್ಬರೊಬ್ಬರು ಬೊಟ್ಟು ಮಾಡುತ್ತಿರುವ ಅಧಿಕಾರಿಗಳು, ಕಳಪೆ ಕಾಮಗಾರಿ ಮಾಡುವಾಗ ತೆಪ್ಪಗಿದ್ದರು. ಹದಗೆಟ್ಟ ರಸ್ತೆ ಸರಿಪಡಿಸುವಂತೆ ನೂರಾರು ಮನವಿ ಮಾಡಿದರೂ, ಸ್ಥಳೀಯ ಜನಪ್ರತಿನಿಧಿ, ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದರು. ಬೇಸತ್ತು ಹೆದ್ದಾರಿಯನ್ನ ಬಂದ್‌ ಮಾಡಿ ಪ್ರತಿಭಟನೆ ನಡೆಸಬೇಕಾಯಿತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಇಲಾಖೆಗಳ ವೈಷಮ್ಯ :

ರಸ್ತೆಯ ಮೂಲಕ ಹಾದು ಬರಲು ಹರಸಾಹಸ ಪಡುತ್ತಿರುವ ವಾಹನ ಚಾಲಕ ಪಾಡು ಹೇಳತೀರದಾಗಿದ್ದು, ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದರೆ, ಈ ಹದಗೆಟ್ಟ ರಸ್ತೆಯಲ್ಲಿ ವಾಹನ ಸವಾರರು ಪ್ರಾಣವನ್ನ ಕೈಯಲ್ಲಿ ಹಿಡಿದು ಹೋಗುವ ಪರಿಸ್ಥಿತಿ ಇದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಲೋಕೋಪಯೋಗಿ ಇಲಾಖೆ ಇದು ನಗರಸಭೆಯವರ ಸಮಸ್ಯೆ ಅವರೇ ಸರಿಪಡಿಸಬೇಕು ಎನ್ನುವ ಹಾರಿಕೆ ಉತ್ತರ ನೀಡ್ತಾರೆ. ಆದರೆ, ನಗರಸಭೆ ಇದು ರಾಜ್ಯ ಹೆದ್ದಾರಿಯಾಗಿದ್ದು, ನಿಯಮಾನುಸಾರ ಲೋಕೋಪಯೋಗಿ ಇಲಾಖೆಯವರೇ ನಿರ್ವಹಣೆ ಮಾಡಬೇಕು ಎಂದು ಹೇಳುವ ಮೂಲಕ ರಸ್ತೆ ರಿಪೇರಿ ನಿರ್ಲಕ್ಷ್ಯ ಮಾಡುತ್ತಿದ್ದರು. ಇದರಿಂದ ರೊಚ್ಚಿಗೆದ್ದು ಜನ ಪ್ರತಿಭಟನೆ ನಡೆಸಬೇಕಾಯಿತು ಎನ್ನುತ್ತಾರೆ ಸ್ಥಳೀಯರು.

“ಅಕ್ಕಪಕ್ಕದಲ್ಲೇ ಮೂರ್‍ನಾಲ್ಕು ಪ್ರತಿಷ್ಠಿತ ಖಾಸಗಿ ಶಾಲೆಗಳಿದ್ದು, ಅಲ್ಲಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಇದೇ ರಸ್ತೆಯಲ್ಲಿ ನಡೆದು ಹೋಗಬೇಕಿದೆ.ಕೆಲವರು ಬೈಕ್‌ಗಳಲ್ಲಿ ಸಂಚರಿಸುತ್ತಾರೆ. ಅದೇ ವೇಳೆಗೆ ಬಸ್‌ ಅಥವಾ ದೊಡ್ಡಯಾವುದೇ ವಾಹನ ಬಂದರೂ, ಅದು ಸಾಗುವ ರಭಸಕ್ಕೆ ಕೊಳಚೆ ನೀರುಮೈಮೇಲೆ ಬಿದ್ದು ಸಮವಸ್ತ್ರ ಗಲೀಜಾಗುವ ಸಾಧ್ಯತೆ ಹೆಚ್ಚಾಗಿದೆ. ದುರಸ್ತಿ ಕಾರ್ಯ ಆರಂಭಿಸಿದ್ದಾರೆ. ಈಗಲಾದರೂ ಗುಣ ಮಟ್ಟದ ಕಾಮಗಾರಿ ಮಾಡಲಿ. – ಕೃಷ್ಣಪ್ಪ, ಸ್ಥಳೀಯ

ಟಾಪ್ ನ್ಯೂಸ್

Rain 2

Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

air india

Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Ramanagara: ಈಜಲು ಹೋಗಿ‌ದ್ದ ಮೂವರು ಮಕ್ಕಳು ನೀರುಪಾಲು

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ

Magadi; ಕಾರಿಗೆ ಅಡ್ಡ ಬಂದ ಕುದುರೆ, ವಾಹನಗಳ ಸರಣಿ ಅಪಘಾತ; ಐವರಿಗೆ ಗಂಭೀರ ಗಾಯ

Complaint: ಖಾಸಗಿ ಫೋಟೋ ತೋರಿಸಿ ಬೆದರಿಸಿದ ವೈದ್ಯನ ವಿರುದ್ಧ ದೂರು

Complaint: ಖಾಸಗಿ ಫೋಟೋ ತೋರಿಸಿ ಬೆದರಿಸಿದ ವೈದ್ಯನ ವಿರುದ್ಧ ದೂರು

Ramanagara: ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ… ಪೊಲೀಸ್ ಸಿಬ್ಬಂದಿಗಳಿಂದ ಪರಿಶೀಲನೆ

Ramanagara: ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ… ಪೊಲೀಸರಿಂದ ಪರಿಶೀಲನೆ

Ramanagara: ಬಿರುಗಾಳಿ ಮಳೆಯ ಅವಾಂತರ… ನೂರಾರು ಮರಗಳು ಧರೆಗೆ, ಹಾರಿ ಹೋದ ಮನೆಯ ಮೇಲ್ಛಾವಣಿ

Ramanagara: ಬಿರುಗಾಳಿ ಮಳೆಯ ಅವಾಂತರ… ನೂರಾರು ಮರಗಳು ಧರೆಗೆ, ಹಾರಿ ಹೋದ ಮನೆಯ ಮೇಲ್ಛಾವಣಿ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Rain 2

Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್‌

air india

Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.