ಬಾಲಿವುಡ್ ಇಷ್ಟ, ಆದರೆ ಮಿಸ್ ವರ್ಲ್ಡ್ ಒಂದೇ ಗುರಿ: ಸಿನಿ ಶೆಟ್ಟಿ ಮನದಾಳದ ಮಾತು
Team Udayavani, Jul 19, 2022, 7:25 AM IST
ಮಂಗಳೂರು: ಫೆಮಿನಾ ಮಿಸ್ ಇಂಡಿಯಾ ಪ್ರಶಸ್ತಿ ಗೆದ್ದಿರುವುದಕ್ಕೆ ಖುಷಿ ಇದೆ, ಮುಂದೆ ಮಿಸ್ ವರ್ಲ್ಡ್ಆಗುವ ಗುರಿ ಹೊಂದಿದ್ದೇನೆ. ಇದಕ್ಕೆ ತಯಾರಿ ನಡೆಸು ತ್ತಿದ್ದೇನೆ ಎಂದು ಫೆಮಿನಾ ಮಿಸ್ ಇಂಡಿಯಾ ಸಿನಿ ಶೆಟ್ಟಿ ಹೇಳಿದ್ದಾರೆ.
ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿದ ಬಳಿಕ ಮೊದಲ ಬಾರಿಗೆ ತಮ್ಮೂರಿಗೆ ಆಗಮಿಸಿದ ಅವರನ್ನು ವಿಮಾನ ನಿಲ್ದಾಣದಲ್ಲಿ ಅವರ ಕುಟುಂಬ ವರ್ಗದವರು ಆರತಿ ಎತ್ತಿ ಸ್ವಾಗತಿಸಿ ಸಂಭ್ರಮಿಸಿದರು. ಆ ಬಳಿಕ ಇತರ ಪ್ರಯಾಣಿಕರು, ಸ್ಥಳೀಯರು ಅವರೊಂದಿಗೆ ಫೋಟೋ, ಸೆಲ್ಫಿ ತೆಗೆದುಕೊಂಡು ಸಂತಸಪಟ್ಟರು.
ಬಾಲಿವುಡ್ನಲ್ಲಿ ನಟಿಸುವುದೂ ಇಷ್ಟ, ಉತ್ತಮ ಕಥೆ, ಸ್ಕ್ರಿಪ್ಟ್ ಇದ್ದರೆ ಅಭಿನಯಿಸುವ ಇರಾದೆ ಇದೆ, ಆದರೆ ಸದ್ಯಕ್ಕೆ ಮಿಸ್ ವರ್ಲ್ಡ್ ಬಗ್ಗೆ ಮಾತ್ರ ಆದ್ಯತೆ ಎಂದು ಇದೇ ವೇಳೆ ಸಿನಿ ಶೆಟ್ಟಿ ಸುದ್ದಿಗಾರರಿಗೆ ತಿಳಿಸಿದರು.
ನಾನು ಬದುಕಿನ ವಿದ್ಯಾರ್ಥಿನಿ. ಕಾಮರ್ಸ್ ಕಲಿಯುತ್ತಿದ್ದೆ, ಆ ಬಳಿಕ ನೃತ್ಯ ಕಲಿಯುವಾಗ ಸೃಜನ ಶೀಲತೆಯ ಬಗ್ಗೆ ಅರಿತುಕೊಂಡೆ, ಫೆಮಿನಾ ಮಿಸ್ ಇಂಡಿಯಾ ಒಂದು ಬಹುದೊಡ್ಡ ಪ್ರಯಾಣ. ಇದು ನನಗೆ ಜೀವನದಲ್ಲಿ ಭರವಸೆ ಹಾಗೂ ವಿಶ್ವಾಸವನ್ನು ದೊರಕಿಸಿಕೊಟ್ಟಿತು ಎಂದರು.
ನನ್ನ ಹೆತ್ತವರ ಊರು ಉಡುಪಿ. ನನ್ನ ರಜಾದಿನ ಗಳನ್ನು ಉಡುಪಿಯ ಅಜ್ಜಿ ಮನೆಯಲ್ಲಿ ಕಳೆದಿದ್ದೆ, ಅಲ್ಲಿ ನನ್ನ ಕಸಿನ್ಸ್ ಜತೆ ವಾರಗಟ್ಟಲೆ ಇದ್ದು ಆಟವಾಡಿ ಕೊಂಡಿದ್ದ ನೆನಪು ಅವಿಸ್ಮರಣೀಯ. ಈಗ ಮತ್ತೆ ಅಲ್ಲಿಗೆ ಬರುತ್ತಿರುವುದರಿಂದ ಸಂತಸಗೊಂಡಿದ್ದೇನೆ ಎಂದರು.
ಐಶ್ವರ್ಯಾ ರೈ ಇಷ್ಟ, ಹೆತ್ತವರೇ ಆದರ್ಶ
ಚಿಕ್ಕವಳಿದ್ದಾಗಲೇ ಐಶ್ವರ್ಯಾ ರೈ ಅವರ ರ್ಯಾಂಪ್ ವಾಕ್ ನೋಡಿ ಬೆಳೆದವಳು, ಅವರಿಂದ ಸ್ಫೂರ್ತಿ ಪಡೆದಿದ್ದೇನೆ ಎನ್ನುವ ಸಿನಿ ಅವರಿಗೆ ಅವರ ಹೆತ್ತವರೇ ಆದರ್ಶವಂತೆ. ಅವರಿಂದಲೇ ಜೀವನ ಮೌಲ್ಯಗಳನ್ನು ಕಲಿತಿದ್ದೇನೆ ಎಂದೂ ಹೇಳಿಕೊಂಡರು.
ಉಡುಪಿ ತುಳುವಿನಲ್ಲಿ ಮಾತನಾಡಿ, ನನ್ನನ್ನು ಈ ರೀತಿಯಲ್ಲಿ ಎಲ್ಲರೂ ಸ್ವಾಗತಿಸಿರುವುದು ಬಹಳ ಖುಷಿ ತಂದಿದೆ. ನಾನು ಮಿಸ್ ಮಿಸ್ ವರ್ಲ್ಡ್ ಗೆ ತಯಾರಿ ನಡೆಸುತ್ತಿದ್ದೇನೆ. ಹಾಗಾಗಿ ನನಗೆ ಎಲ್ಲರ ಆಶೀರ್ವಾದ ಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !