ಕನ್ನಡಿಗರಿಗೆ ಉದ್ಯೋಗ: ರಾಜ್ಯ ಸರಕಾರದಿಂದ ಹೊಸ ನೀತಿ
Team Udayavani, Jul 22, 2022, 2:38 PM IST
ಬೆಂಗಳೂರು: ಕನ್ನಡಿಗರಿಗೆ ಉದ್ಯೋಗ ನೀಡುವ ವಿಚಾರಕ್ಕೆ ಸಂಬಂಧಟ್ಟಂತೆ ರಾಜ್ಯ ಸರಕಾರ ಪ್ರತ್ಯೇಕ ನೀತಿ ರೂಪಿಸಿದ್ದು, ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳು ಇನ್ನು ಮುಂದೆ ಬಂಡವಾಳ ಹೂಡಿಕೆ ವಿಸ್ತರಣೆ ಮಾಡುವಾಗ ಹೆಚ್ಚುವರಿ ಉದ್ಯೋಗ ಸೃಷ್ಟಿಯ ಭರವಸೆ ನೀಡುವುದು ಕಡ್ಡಾಯಗೊಳಿಸಲಾಗಿದೆ.
ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 2022 ರಿಂದ 2025ಕ್ಕೆ ಅನ್ವಯವಾಗುವಂತೆ ಈ ನೀತಿ ಜಾರಿಗೆ ತರಲಾಗಿದೆ.
ಕೈಗಾರಿಕೆಗಳನ್ನು ಬಂಡವಾಳ ಹೂಡಿಕೆ ಆಧಾರದ ಮೇಲೆ ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳು ಎಂದು ವರ್ಗೀಕರಿಸಲಾಗಿದೆ.
ಇದನ್ನೂ ಓದಿ:”ಶಿಕಾರಿಪುರಕ್ಕಿನ್ನು ವಿಜಯೇಂದ್ರ”: ಮಹತ್ವದ ಘೋಷಣೆ ಮಾಡಿದ ಯಡಿಯೂರಪ್ಪ
25 ಕೋಟಿಗೆ ಮೇಲ್ಪಟ್ಟ ಮಧ್ಯಮ ಕೈಗಾರಿಕೆಗಳು ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡುವಾಗ 20 ಹೆಚ್ಚುವರಿ ಉದ್ಯೋಗ ಸೃಷ್ಟಿ ಮಾಡಬೇಕಾಗುತ್ತದೆ. 100 ಕೋಟಿ ರೂ. ಮೇಲ್ಪಟ್ಟ ಕೈಗಾರಿಕೆಗಳು ಹೂಡಿಕೆ ಮಾಡುವಾಗ 35 ಹೊಸ ಹುದ್ದೆ ಸೃಷ್ಟಿ ಮಾಡಬೇಕಾಗುತ್ತದೆ.
ಆದರೆ ಆಗ ಸೃಷ್ಟಿಸುವ ಹೊಸ ಹುದ್ದೆಗಳು ಎ, ಬಿ ದರ್ಜೆಯ ಉದ್ಯೋಗವಾಗಿರಬೇಕು. ಮತ್ತು ಸ್ಥಳೀಯರಿಗೆ ಉದ್ಯೋಗ ನೀಡಬೇಕಾಗುತ್ತದೆ. ಈ ನೀತಿಯನ್ನು ಕೆಐಎಡಿಬಿ ಸಂಸ್ಥೆ ಕಾಲಕಾಲಕ್ಕೆ ಪರಿಶೀಲನೆ ನಡೆಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga: ಪೊಲೀಸರ ಮೇಲೆ ಹಲ್ಲೆ ಯತ್ನ… ರೌಡಿ ಶೀಟರ್ ಶೋಹಿಬ್ ಕಾಲಿಗೆ ಗುಂಡೇಟು
ಆನೆ ಕಂಡು ಚರಂಡಿಗೆ ಇಳಿದ ಬೊಲೆರೋ… ರಸ್ತೆ ಕಾಣದೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಟಿಟಿ
Legislative Council Elections: ಬಿಜೆಪಿ-ಜೆಡಿಎಸ್ ಮೈತ್ರಿ 5:1 ಅಲ್ಲ, 4:2
Prajwal Revanna ವಿಮಾನ ಟಿಕೆಟ್ ರದ್ದು; ಸಂಸದನ ನಡೆ ಕುತೂಹಲ, ಸಿಗದ ಸುಳಿವು
ತೀರ್ಪು ತಿದ್ದಿದ ಪ್ರಕರಣ: ಡಾ| ಸಿದ್ಧಲಿಂಗ ಸ್ವಾಮೀಜಿಗೆ ಸುಪ್ರೀಂ ನೋಟಿಸ್ ಜಾರಿ