ಹಾಸನದಲ್ಲಿ ಕಾರು ಅಪಘಾತ; ಮರ್ದಂಬೈಲು ನಿವಾಸಿ ಸಾವು
Team Udayavani, Aug 9, 2022, 12:00 AM IST
ಕುಂಬಳೆ: ನೀರ್ಚಾಲು ಕಲ್ಲಕಟ್ಟ ಮರ್ದಂಬೈಲು ದಿ| ರಾಜೀವ ಅವರ ಪುತ್ರ ಆದರ್ಶ್ (26) ಅವರು ಹಾಸನದಲ್ಲಿ ನಡೆದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಐಟಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಆದರ್ಶ್ ಅವರು 4 ಮಂದಿ ಸೇ°ಹಿತ ರೊಂದಿಗೆ ಕಾರಿನಲ್ಲಿ ಬೇಲೂರಿನಲ್ಲಿ ನಡೆದ ಮಿತ್ರನ ವಿವಾಹ ಸಮಾರಂಭಕ್ಕೆ ತೆರಳಿ ಹಿಂದಿರುಗುತ್ತಿರುವಾಗ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದಿದೆ.
ಪರಿಣಾಮ ಗಂಭೀರ ಗಾಯಗೊಂಡ ಆದರ್ಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜತೆಯಲ್ಲಿದ್ದವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತ ಆದರ್ಶ್ ಅವಿವಾಹಿತರಾಗಿದ್ದು ತಾಯಿ, ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.