ವಿದ್ಯಾರ್ಥಿಗಳ ಕೈಯಿಂದ ರಕ್ಷಾ ಬಂಧನ ತೆಗೆಸಿದ ಪ್ರಕರಣ : ಕ್ಷಮೆ ಬಳಿಕ ಸುಖಾಂತ್ಯ
Team Udayavani, Aug 13, 2022, 2:03 PM IST
ಸುರತ್ಕಲ್ : ಕಾಟಿಪಳ್ಳದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಗುರುವಾರ ವಿದ್ಯಾರ್ಥಿಗಳ ಕೈಯ್ಯಲ್ಲಿದ್ದ ರಕ್ಷಾ ಬಂಧನ ತೆಗೆಸಿದ ವಿವಾದ ಕ್ಷಮೆ ಯಾಚನೆಯೊಂದಿಗೆ ಸುಖಾಂತ್ಯಗೊಂಡಿತು.
ಕೆಲವೊಂದು ಶಾಲಾ ನಿಯಮಾವಳಿ ಪಾಲಿಸಬೇಕೆಂದು ಹೇಳಿ ರಕ್ಷಾ ಬಂಧನ ಧರಿಸುವಂತಿಲ್ಲ ಎಂದು ತೆಗೆಯುವಂತೆ ಸೂಚಿಸಿದ್ದರು. ಇದರಿಂದ ಅಸಮಾಧಾನಗೊಂಡ ಪೋಷಕರು, ಹಿಂದೂ ಸಂಘಟನೆಗಳ ಪ್ರಮುಖರು, ಸ್ಥಳೀಯ ಬಿಜೆಪಿ ಮುಖಂಡರು ಶುಕ್ರವಾರ ಶಾಲೆಗೆ ಆಗಮಿಸಿ ರಕ್ಷಾ ಬಂಧನ ತೆಗೆಸಿದ ಶಿಕ್ಷಕರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಪಟ್ಟು ಹಿಡಿದರು.
ಸುರತ್ಕಲ್ ಪೊಲೀಸ್ ಠಾಣೆಯ ಆಧಿಕಾರಿ ಚಂದ್ರಪ್ಪ ಹಾಗೂ ಎಸ್ಐ ಪುನೀತ್ ಅವರ ಸಮ್ಮುಖದಲ್ಲಿ ಶಾಲೆಯ ಸಂಚಾಲಕ ವಂ| ಸಂತೋಷ್ ಲೋಬೋ ಅವರು ಸ್ಥಳಕ್ಕೆ ಆಗಮಿಸಿ ತಿಳಿಯದೆ ಆದ ತಪ್ಪಿನಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇವೆ. ಪೋಷಕರ ಸಭೆಯಲ್ಲಿಯೂ ಮಾತುಕತೆ ನಡೆಸಿ ಭಿನ್ನಾಭಿಪ್ರಾಯವಿದ್ದರೆ ಪರಿಹಾರ ಮಾಡಿಕೊಳ್ಳುತ್ತೇವೆ. ಎಲ್ಲ ಧರ್ಮದವರನ್ನು ನಾವು ಸಮಾನವಾಗಿ ಗೌರವಿಸುತ್ತೇವೆ ಎಂದು ಹೇಳಿದರು. ಆ ಬಳಿಕ ರಕ್ಷಾ ಬಂಧನ ತೆಗೆಸಿದ ಶಿಕ್ಷಕಿಯೂ ಕ್ಷಮೆಯಾಚಿಸಿದ್ದರಿಂದ ಪ್ರಕರಣ ಸುಖಾಂತ್ಯಗೊಂಡಿತು.
ಇದನ್ನೂ ಓದಿ : ಮಂಗಳೂರು : ಅಪಾಯಕಾರಿ ಕಾಲುಸಂಕಗಳ ಪಟ್ಟಿ ನೀಡಲು ಡಿಸಿ ಆದೇಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ