ಕುಡಿಯಿರಿ, ಕುಡಿಸಿರಿ; ಆರ್ಥಿಕತೆಯನ್ನು ಬೆಳೆಸಿರಿ…!ಇದು ಜಪಾನ್ ಸರಕಾರದ ಹೊಸ ಮಂತ್ರ
ಆಲ್ಕೋಹಾಲ್ ಸೇವಿಸುವಂತೆ ಯುವಜನತೆಗೆ ಕರೆ ; ಆರ್ಥಿಕತೆ ಹಳಿಗೆ ತರಲು ಯತ್ನ
Team Udayavani, Aug 20, 2022, 7:15 AM IST
ಟೋಕಿಯೋ: ನಮ್ಮ ದೇಶದಲ್ಲಿ “ಹೆಂಡ- ಸಾರಾಯಿ ಸಹವಾಸ, ಹೆಂಡತಿ ಮಕ್ಕಳ ಉಪವಾಸ’ ಎಂಬ ಉದ್ಘೋಷಗಳನ್ನು ನೀವು ಸಾಕಷ್ಟು ಬಾರಿ ಕೇಳಿರಬಹುದು. ಆದರೆ, “ಕುಡಿಯಿರಿ, ಕುಡಿಸಿರಿ; ಆರ್ಥಿಕತೆಯನ್ನು ಬೆಳೆಸಿರಿ’ ಎಂದು ಹೇಳುವುದನ್ನು ಎಲ್ಲಾದರೂ ಕೇಳಿದ್ದೀರಾ?
ಜಪಾನ್ನಲ್ಲಿ ಈಗ ಇದೇ ಉದ್ಘೋಷ ಸದ್ದು ಮಾಡುತ್ತಿದೆ. ಸ್ವತಃ ಸರಕಾರವೇ ಮುಂದೆ ನಿಂತು “ಯುವಜನರನ್ನು ಮದ್ಯದಾಸರನ್ನಾಗಿ’ ಮಾಡುತ್ತಿದೆ !
ಅಚ್ಚರಿಯಾದರೂ ಇದು ಸತ್ಯ. ಹೆಚ್ಚು ಹೆಚ್ಚು ಆಲ್ಕೋಹಾಲ್ ಸೇವಿಸುವಂತೆ ಅಲ್ಲಿನ ಸರಕಾರ ಯುವಜನತೆಗೆ ಕರೆ ನೀಡಿದೆ. ಇದಕ್ಕೆ ಕಾರಣವೇನಿರಬಹುದು ಎಂದು ಯೋಚಿಸುತ್ತಿದ್ದೀರಾ? ಆರ್ಥಿಕ ಬಿಕ್ಕಟ್ಟು.
ಹೌದು, ಕೊರೊನಾ ಸೋಂಕಿನ ಅನಂತರ ಬಹುತೇಕ ಎಲ್ಲ ದೇಶಗಳೂ ಆರ್ಥಿಕ ಬಿಕ್ಕಟ್ಟಿ ನಿಂದ ನರಳುತ್ತಿವೆ. ಜಪಾನ್ ಕೂಡ ಇದೇ ರೀತಿಯ ಸಂಕಷ್ಟವನ್ನು ಎದುರಿಸುತ್ತಿದೆ. ಕುಸಿಯುತ್ತಿರುವ ಆರ್ಥಿಕತೆಯನ್ನು ಹಳಿಗೆ ತರಬೇಕೆಂದರೆ ಸರಕಾರದ ಬೊಕ್ಕಸಕ್ಕೆ ಹಣ ಹರಿದುಬರಬೇಕು. ಎಲ್ಲ ದೇಶಗಳಲ್ಲೂ ಆದಾ ಯದ ದೊಡ್ಡ ಪಾಲುದಾರನೆಂದರೆ ಅಬಕಾರಿ ಇಲಾಖೆ. ಹೀಗಾಗಿ ಜನರು ಹೆಚ್ಚು ಮದ್ಯ ಸೇವಿಸಲು ಆರಂಭಿಸಿದರೆ ತನ್ನಿಂತಾನಾಗಿಯೇ ಅಬಕಾರಿ ಆದಾಯ ಹೆಚ್ಚುತ್ತದೆ ಎನ್ನುವುದು ಜಪಾನ್ ಸರಕಾರದ ಲೆಕ್ಕಾಚಾರ.
ತಗ್ಗಿದ ಮದ್ಯ ಸೇವನೆ: ಇಲ್ಲಿನ ತೆರಿಗೆ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿಅಂಶದ ಪ್ರಕಾರ, 1995ಕ್ಕೆ ಹೋಲಿಸಿದರೆ 2020 ರಲ್ಲಿ ಜಪಾನ್ ನಾಗರಿಕರ ಮದ್ಯ ಸೇವನೆ ಪ್ರಮಾಣ ಗಣನೀಯವಾಗಿ ತಗ್ಗಿದೆ. ಹಿಂದೆ ವಾರ್ಷಿಕವಾಗಿ ಸರಾಸರಿ 100 ಲೀಟರ್ಗಳಷ್ಟು ಮದ್ಯ ಸೇವನೆಯಾಗುತ್ತಿದ್ದರೆ, ಈಗ ಅದು 75 ಲೀಟರ್ಗಳಿಗೆ ಇಳಿದಿದೆ. ಮೂರನೇ ಅತಿದೊಡ್ಡ ಆರ್ಥಿಕತೆಯಾದ ಜಪಾನ್ನಲ್ಲಿ ಆಲ್ಕೋಹಾಲ್ನಿಂದ ಬರುತ್ತಿದ್ದ ತೆರಿಗೆ ಆದಾಯವೂ ಕುಸಿತವಾಗಿದೆ. ಮದ್ಯ ಮಾರಾಟದಿಂದ 2020ರಲ್ಲಿ ಸುಮಾರು 6,505 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ. ಈ ಆದಾಯ ಇಷ್ಟೊಂದು ಇಳಿಕೆಯಾಗಿರು ವುದು ಕಳೆದ 31 ವರ್ಷಗಳಲ್ಲೇ ಇದೇ ಮೊದಲು.
ರಾಷ್ಟ್ರಮಟ್ಟದ ಸ್ಪರ್ಧೆ
ಹಿಂದಿನ ತಲೆಮಾರಿಗೆ ಹೋಲಿಸಿದರೆ ಇಂದಿನ ತಲೆಮಾರಿನ ಯುವಕರ “ಮದ್ಯ ಪ್ರೇಮ’ ಕಡಿಮೆಯಾಗಿದೆ. ಹೀಗಾಗಿ, ಜಪಾನ್ ಸರಕಾರ ಈಗ “ಸೇಕ್ ವಿವಾ’ ಎಂಬ ಅಭಿಯಾನ ಆರಂಭಿಸಿದೆ. ಜಪಾನ್ನ ಅಕ್ಕಿಯ ವೈನ್, ಶೋಚು, ವಿಸ್ಕಿ, ಬಿಯರ್ ಅಥವಾ ಇತರ ವೈನ್ಗಳನ್ನು ಕುಡಿಯುವಂತೆ ಯುವಜನತೆಗೆ ಸರಕಾರ ಕರೆ ನೀಡಿದೆ. ಜತೆಗೆ, ರಾಷ್ಟ್ರಮಟ್ಟದ ಸೇಕ್ ವಿವಾ ಸ್ಪರ್ಧೆಯನ್ನೂ ಆಯೋಜಿಸಿದ್ದು, ಯುವಜನಾಂಗ ಹೆಚ್ಚು ಹೆಚ್ಚು ಕುಡಿಯುವಂತೆ ಪ್ರೇರೇಪಿಸಲು ಐಡಿಯಾಗಳನ್ನು ಕೊಡಿ ಎಂದೂ ಕೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡ್ರಗ್ಸ್ ಕೊಟ್ಟು, ಸಂಸದೆಗೇ ಲೈಂಗಿಕ ಕಿರುಕುಳ ಆರೋಪ; ಆಸ್ಟ್ರೇಲಿಯಾ ಎಂಪಿ
Nijjar ಕೇಸ್ ತನಿಖೆ ಮೂವರ ಬಂಧನಕ್ಕೆ ಮುಕ್ತಾಯವಾಗಿಲ್ಲ: ಕೆನಡಾ ಪ್ರಧಾನಿ
Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?
Pakistan; ಈಗ ಯೋಗ ತರಬೇತಿ ಅಧಿಕೃತವಾಗಿ ಆರಂಭ
Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ
MUST WATCH
ಹೊಸ ಸೇರ್ಪಡೆ
LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್
T20 World Cup; ಕ್ರಿಕೆಟ್ ಮೆಗಾ ಕೂಟಕ್ಕೆ ಪಾಕ್ ಉಗ್ರರಿಂದ ಬೆದರಿಕೆ
Bharamasagara: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಇಬ್ಬರು ಸ್ಥಳದಲ್ಲೇ ಸಾವು
ಡ್ರಗ್ಸ್ ಕೊಟ್ಟು, ಸಂಸದೆಗೇ ಲೈಂಗಿಕ ಕಿರುಕುಳ ಆರೋಪ; ಆಸ್ಟ್ರೇಲಿಯಾ ಎಂಪಿ
Paris Olympics: ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಭಾರತದ ಮಹಿಳಾ, ಪುರುಷರ ರಿಲೇ ತಂಡ