ಏಷ್ಯಾ ಕಪ್ ಕ್ರಿಕೆಟ್: ಲಕ್ಷ್ಮಣ್ ಪ್ರಭಾರ ಮುಖ್ಯ ಕೋಚ್
Team Udayavani, Aug 25, 2022, 5:55 AM IST
ಹೊಸದಿಲ್ಲಿ: ರಾಹುಲ್ ದ್ರಾವಿಡ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆ ಯಲ್ಲಿ ಮುಂಬರುವ ಏಷ್ಯಾ ಕಪ್ ಕ್ರಿಕೆಟ್ ಕೂಟ ಕ್ಕಾಗಿ ವಿ.ವಿ.ಎಸ್. ಲಕ್ಷ್ಮಣ ಅವರು ಭಾರತೀಯ ತಂಡದ ಪ್ರಭಾರ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಲಕ್ಷ್ಮಣ್ ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯ ಮುಖ್ಯಸ್ಥರಾಗಿದ್ದಾರೆ.
ದ್ರಾವಿಡ್ ಸದ್ಯ ಐಸೋಲೇಶನ್ನಲ್ಲಿದ್ದಾರೆ. ಕೋವಿಡ್ ವರದಿ ನೆಗೆಟಿವ್ ಬಂದ ಬಳಿಕ ದ್ರಾವಿಡ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಯುಎಇಯಲ್ಲಿ ನಡೆಯ ಲಿರುವ ಎಸಿಸಿ ಏಷ್ಯಾ ಕಪ್ಕ್ಕಾಗಿ ವಿವಿಎಸ್ ಲಕ್ಷ್ಮಣ್ ಅವರು ಭಾರತೀಯ ತಂಡದ ಪ್ರಭಾರ ಮುಖ್ಯ ಕೋಚ್ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜಿಂಬಾಬ್ವೆಯಲ್ಲಿ ನಡೆದ ಏಕದಿನ ಸರಣಿಯಲ್ಲಿ ಭಾಗವಹಿಸಿದ್ದ ಭಾರತೀಯ ತಂಡದ ಜತೆ ಲಕ್ಷ್ಮಣ್ ಅವರಿದ್ಧರು. ಇದೀಗ ದ್ರಾವಿಡ್ ಅವರ ಅನುಪಸ್ಥಿತಿಯಲ್ಲಿ ತಂಡದ ಸಿದ್ಧತೆಯನ್ನು ಅವರು ಪರಿಶೀಲಿಸಲಿದ್ದಾರೆ.
ಲಕ್ಷ್ಮಣ್ ಅವರು ದುಬಾೖಯಲ್ಲಿ ಉಪನಾಯಕ ಕೆಎಲ್ ರಾಹುಲ್, ದೀಪಕ್ ಹೂಡಾ ಮತ್ತು ಆವೇಶ್ ಖಾನ್ ಜತೆ ಸೇರಿಕೊಳ್ಳಲಿದ್ದಾರೆ.