ಮೂರ್ತಿ ತಯಾರಿಕೆಗೆ ಜೇಡಿ ಮಣ್ಣು, ನೈಸರ್ಗಿಕ ಬಣ್ಣ ಕೊರತೆ

ಕೆರೆಗಳು ಭರ್ತಿಯಿಂದ ಜೇಡಿ ಮಣ್ಣು ಸಿಗುತ್ತಿಲ್ಲ

Team Udayavani, Aug 28, 2022, 3:15 PM IST

ಮೂರ್ತಿ ತಯಾರಿಕೆಗೆ ಜೇಡಿ ಮಣ್ಣು, ನೈಸರ್ಗಿಕ ಬಣ್ಣ ಕೊರತೆ

ಬೆಂಗಳೂರು: ರಾಜ್ಯದಲ್ಲಿ ಪ್ಲಾಸ್ಟರ್‌ ಆಫ್ ಪ್ಯಾರೀಸ್‌ (ಪಿಒಪಿ) ಗಣಪತಿ ಮೂರ್ತಿ ಗಳನ್ನು ಸಂಪೂರ್ಣವಾಗಿ ನಿಷೇಧಿಸಿ ರುವ ಪರಿಣಾಮ, ಈ ಬಾರಿ ಮಣ್ಣಿನ ಗಣಪತಿ ಮೂರ್ತಿಗಳ ರಚನೆಗೆ ಅವಶ್ಯವಿರುವ ಜೇಡಿ ಮಣ್ಣು, ನೈಸರ್ಗಿಕ ಬಣ್ಣಗಳ ಕೊರತೆ ಎದುರಾಗಿದೆ. ಅಷ್ಟೇ ಅಲ್ಲದೆ ಜೇಡಿ ಮಣ್ಣು ಹಾಗೂ ನೈಸರ್ಗಿಕ ಬಣ್ಣ ಸೇರಿದಂತೆ ಕಚ್ಚಾ ವಸ್ತುಗಳ ದರವೂ ಹೆಚ್ಚಳವಾಗಿ, ಮೂರ್ತಿ ತಯಾರಕರ ಕೈ ಸುಡುವಂತಾಗಿದೆ.

ಕೊರೊನಾದಿಂದ 2 ವರ್ಷಗಳಿಂದ ವಹಿವಾಟು ಇಲ್ಲದೆ ಪರದಾಡಿದ್ದ ಗಣೇಶ ಮೂರ್ತಿಗಳ ತಯಾರಕರಲ್ಲಿ ಈ ಬಾರಿ ಮಂದಹಾಸ ಬೀರಿತ್ತು. ಸಾರ್ವಜನಿಕರು ಮಣ್ಣಿನ ಗಣಪತಿ ಮೂರ್ತಿಗಳಿಗೆ ಮೊರೆ ಹೋಗಿ ದ್ದಾರೆ. ಆದರೆ, ಕಚ್ಚಾ ಪದಾರ್ಥಗಳ ಸರಬರಾಜು ದಾರರು ಬೆಲೆ ಏರಿಸಿರುವುದು ತಲೆಬಿಸಿ ತಂದಿದೆ. ಬೆಂಗಳೂರಿನಲ್ಲಿ ಮಾರಾಟವಾಗುವ ಗಣಪತಿ ಮೂರ್ತಿಗಳ ರಚನೆಗೆ ಮಂಡ್ಯ, ರಾಮನಗರ, ಚನ್ನ ಪಟ್ಟಣದ ಕಡೆಯಿಂದ ಜೇಡಿಮಣ್ಣನ್ನು ತರಲಾಗುತ್ತದೆ. ಕೆರೆಗಳಿಂದ ಜೇಡಿಮಣ್ಣು ತರುತ್ತಿದ್ದೆವು. ಇದೀಗ ಕೆರೆಗಳು ಭರ್ತಿ ಹಿನ್ನೆಲೆ ಜೇಡಿಮಣ್ಣು ದೊರೆಯುತ್ತಿಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ಮೂರ್ತಿಗಳ ತಯಾರಕ ಸುನೀಲ್‌, ತಾವು ಕಳೆದ 16 ವರ್ಷಗಳಿಂದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ಆದರೆ, ಈ ವರ್ಷ ಮಣ್ಣಿನ ಗಣಪತಿಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಕೇಳುತ್ತಿದ್ದಾರೆ. ಇದು ಪರಿಸರದ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ಆದರೆ, ಬೇಡಿಕೆ ಹೆಚ್ಚಾಗಿರುವುದರಿಂದ ಬೆಲೆ ಕೂಡ ಹೆಚ್ಚಾಗಿದೆ. ಹಿಂದಿನ ವರ್ಷ ಒಂದು ಲೋಡ್‌ ಮಣ್ಣಿಗೆ 50 ಸಾವಿರ ರೂ. ಇತ್ತು. ಇದೀಗ 75-80 ಸಾವಿರ ರೂ. ಕೇಳುತ್ತಿದ್ದಾರೆ. ನೈಸರ್ಗಿಕ ಬಣ್ಣಗಳ ಬೆಲೆ ಕೂಡ ಹೆಚ್ಚಳವಾಗಿದೆ. ಇದರಿಂದ ಮೂರ್ತಿಗಳ ರಚನೆ ಮೇಲಿನ ದರ ಕೂಡ ಶೇ.20ರಷ್ಟು ಹೆಚ್ಚಳವಾಗಿದೆ ಎಂದು ಹೇಳುತ್ತಾರೆ.

ಶೇ.30ರಷ್ಟು ವಹಿವಾಟು ಚೇತರಿಕೆ: ಸಾರ್ವಜನಿಕವಾಗಿ ಗಣಪತಿ ಪ್ರತಿಷ್ಠಾಪಿಸುವಂತಿಲ್ಲವೆಂದು ಹಿಂದಿನ ಎರಡು ವರ್ಷ, ಗಣೇಶೋತ್ಸವ ಸಂಪೂರ್ಣವಾಗಿ ನಿರಾಸದಾಯಕವಾಗಿತ್ತು. ಇದು ನಮ್ಮ ಬದುಕಿನ ಮೇಲೆಯೂ ಪರಿಣಾಮ ಬೀರಿತ್ತು. ಈ ವರ್ಷ ಹಬ್ಬ ಆಚರಣೆಗೆ ಇಂದಿಷ್ಟು ಕಳೆ ಬಂದಿದ್ದು, ಜನರು ಕೂಡ ಆಚರಣೆಗೆ ಮುಂದಾಗು ತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಶೇ.30ರಷ್ಟು ವಹಿವಾಟಿನಲ್ಲಿ ಹೆಚ್ಚಳವಾಗಿದೆ. ಕೊರೊನಾ ದಿಂದ ಜನರು ಇನ್ನೂ ಚೇತರಿಸಿಕೊಳ್ಳ ಬೇಕಿದ್ದು, ಕೊರೊನಾ ಪೂರ್ವ ವರ್ಷಗಳಿಗೆ ಹೋಲಿಸಿಕೊಂಡರೆ, ಹಿಂದಿನ ಸಂಭ್ರಮದ ದಾರಿಗೆ ಇನ್ನೂ ಮರಳಿಲ್ಲವೆನ್ನಬಹುದು ಎನ್ನುತ್ತಾರೆ ಮತ್ತೂಬ್ಬ ಗಣೇಶ ಮೂರ್ತಿ ತಯಾರಕ ಶಿವಕುಮಾರ್‌.

ಮಣ್ಣಿನ ಮೂರ್ತಿಗಳ ನಿರ್ವಹಣೆ ಕಷ್ಟ: ಹಿಂದಿನ ವರ್ಷಗಳಲ್ಲಿ 10 ರಿಂದ 15 ಸಾವಿರದಷ್ಟು ಮೂರ್ತಿಗಳನ್ನು ರಚನೆ ಮಾಡುತ್ತಿದ್ದೇವು. ಈಗ 5 ಸಾವಿರವಷ್ಟೇ ರಚನೆ ಮಾಡುತ್ತಿದ್ದೇವೆ. ಪಿಒಪಿ ಮೂರ್ತಿಗಳಿಗೆ ಹೋಲಿಸಿಕೊಂಡರೆ ಮಣ್ಣಿನ ಮೂರ್ತಿಗಳ ನಿರ್ವಹಣೆ ಬಹಳ ಕಷ್ಟ. ಮಣ್ಣಿನ ಮೂರ್ತಿಗಳು ಸೀಳು ಬಿಡುವುದು, ಸ್ವಲ್ಪ ತಗುಲಿಸಿದರೆ ಮುರಿದು ಹೋಗುತ್ತವೆ. ಪಿಒಪಿ ಮೂರ್ತಿಗಳನ್ನು ಮತ್ತೂಂದು ವರ್ಷಕ್ಕೆ ಹಾಗೆಯೇ ಸಂಗ್ರಹಿಸಿ ಇಡಬಹುದಿತ್ತು. ಮಣ್ಣಿನ ಮೂರ್ತಿಗಳನ್ನು ವರ್ಷಾನುಗಟ್ಟಲೆ ನಿರ್ವಹಣೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಜನರು ಮುಂಗಡವಾಗಿ ಆರ್ಡರ್‌ ಮಾಡಿದ ನಂತರ ಮೂರ್ತಿಗಳ ರಚನೆ ಮಾಡುತ್ತಿದ್ದೇವೆ ಎನ್ನುತ್ತಾರೆ ಭಾಗ್ಯ.

2.5ರಿಂದ 3 ಅಡಿ ಗಣೇಶ ಮೂರ್ತಿಗಳಿಗೆ ಬೇಡಿಕೆ: ಮೊದಲು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲು 5 ಅಡಿ, 10 ಅಡಿ ಗಣೇಶ ಮೂರ್ತಿ ಗಳನ್ನು ಕೇಳುತ್ತಿದ್ದ ಜನರು, ಈಗ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಿದ್ದಾರೆ. ಜಾಸ್ತಿ ಎಂದರೆ 5 ಅಡಿ ಉದ್ದವನ್ನು ಕೇಳುತ್ತಾರೆ. 2.5ರಿಂದ 3 ಅಡಿ ಗಣೇಶ ಮೂರ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಇದರಿಂದ ಜನರಲ್ಲಿಯೂ ಪರಿಸರ ಜಾಗೃತಿ ಮೂಡಿದೆ. ಈ ಬಾರಿ ಸಾರ್ವಜನಿಕ ಪ್ರತಿಷ್ಠಾಪನೆಗಿಂತ ವೈಯಕ್ತಿಕವಾಗಿ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡುವವರೇ ಭಾಗಶಃ ಮುಂಗಡವಾಗಿ ಬುಕ್‌ ಮಾಡಿದ್ದಾರೆ ಎಂದು ಮೂರ್ತಿ ತಯಾ ರಕ ಮಹೇಶ್‌ ತಿಳಿಸಿದ್ದಾರೆ.

-ಎನ್‌.ಎಲ್‌.ಶಿವಮಾದು

ಟಾಪ್ ನ್ಯೂಸ್

Revanna 2

Parappana Agrahara Central Prison; ಸಾಮಾನ್ಯರಂತೆ ದಿನ ಕಳೆದ ರೇವಣ್ಣ

sensex

Election result ಅನಿಶ್ಚಿತತೆ: 1,062 ಅಂಕ ಕುಸಿದ ಸೆನ್ಸೆಕ್ಸ್‌

1-wqeeqw

K. Vasantha Bangera; ಬೆಳ್ತಂಗಡಿಯ ಬಂಗಾರ ಕೇದೆಯ ಮಣ್ಣಲ್ಲಿ ಲೀನ; ಸಕಲ ಸರಕಾರಿ ಗೌರವ

1-qwewqwqe

IPL;ಪಂಜಾಬ್ ವಿರುದ್ಧ 60 ರನ್ ಗಳ ಗೆಲುವು ಸಾಧಿಸಿದ ಆರ್ ಸಿಬಿ: ಪ್ಲೇ ಆಫ್ ಆಸೆ ಜೀವಂತ

suicide

Heatstroke; ಬಸವಕಲ್ಯಾಣದಲ್ಲಿ ಬಿಸಿಲಿನ ಝಳಕ್ಕೆ ಕಾರ್ಮಿಕ‌ ಸಾವು‌?

1-ww-ewq

SSLC Result; ಜ್ಞಾನಸುಧಾ ಕಾರ್ಕಳ ಶೇ. 100 ಫ‌ಲಿತಾಂಶ: ಸಹನಾ ರಾಜ್ಯಕ್ಕೆ ತೃತೀಯ

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-14

ಹಬ್ಬದ ಮೂಡ್‌ನ‌ಲ್ಲಿ ಸ್ಯಾಂಡಲ್‌ವುಡ್‌ ತಾರೆಯರು

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

tdy-7

ಗಂಗಾವತಿಯಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಸಡಗರದ ಗಣೇಶ ಚತುರ್ಥಿ ಆಚರಣೆ

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Revanna 2

Parappana Agrahara Central Prison; ಸಾಮಾನ್ಯರಂತೆ ದಿನ ಕಳೆದ ರೇವಣ್ಣ

1-wqewee

Saudi Arabia; ಭೂಮಿ ನೀಡಲು ಒಪ್ಪದಿದ್ದರೆ ಹತ್ಯೆ: ಬಿಬಿಸಿ ವರದಿ

MOdi (3)

Hate speech ಪ್ರಚಾರ: ಮೋದಿ ವಿರುದ್ಧ ಕ್ರಮಕ್ಕೆ ಸುಪ್ರೀಂನಲ್ಲಿ ರಿಟ್‌ ಅರ್ಜಿ

sensex

Election result ಅನಿಶ್ಚಿತತೆ: 1,062 ಅಂಕ ಕುಸಿದ ಸೆನ್ಸೆಕ್ಸ್‌

Himanth-Bisw

BJP ಗೆದ್ದರೆ 5 ಲಕ್ಷ ಜನರಿಗೆ ಅಯೋಧ್ಯೆ ರಾಮನ ದರ್ಶನ: ಹಿಮಂತ್‌ ಬಿಸ್ವಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.