ಮುಳಿಯ ಜ್ಯುವೆಲ್ಸ್: ಚಿನ್ನಾಭರಣ, ಡೈಮಂಡ್ ಆಭರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ
Team Udayavani, Sep 8, 2022, 2:24 PM IST
ಮಂಗಳೂರು: ಎಪ್ಪತ್ತೆಂಟು ವರ್ಷಗಳ ಪರಂಪರೆ ಮತ್ತು ನಂಬಿಕೆಯ ಮುಳಿಯ ಜ್ಯುವೆಲ್ಸ್ನಿಂದ ಸೆ.8 ರಿಂದ 11ರ ವರೆಗೆ ಮಂಗಳೂರಿನ ಓಷಿಯನ್ ಪರ್ಲ್ನಲ್ಲಿ ಹೋಟೆಲ್ನಲ್ಲಿ ಆಯೋಜಿಸಲಾದ ಮುಳಿಯ ಚಿನ್ನಾಭರಣಗಳ ಹಾಗೂ ಕಿಸ್ನ ಡೈಮಂಡ್ ಆಭರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಎಕ್ಸಿಬಿಷನ್ ನಲ್ಲಿ ಇತ್ತೀಚೆಗೆ ಜಾಗತಿಕವಾಗಿ ಅನಾವರಣಗೊಳಿಸಲಾದ ಮತ್ತು ವಿನೂತನ ಶೈಲಿಯ ಆಭರಣಗಳನ್ನು ಸಂಗ್ರಹವಿದೆ. ಮಂಗಳೂರು ಶೈಲಿಯ ವಿವಿದ ವಿನ್ಯಾಸದ ಕರ ಕುಶಲದ ಕರಿಮಣಿಗಳು, ಕೊಡಗಿನ ಮತ್ತು ಕರಾವಳಿಯ ಪರಂಪರಾಗತ ಆಭರಣಗಳು ಇಲ್ಲಿ ಲಭ್ಯ. ಕಿಸ್ನ ಬ್ರ್ಯಾಂಡ್ ಡೈಮಂಡ್ ಆಭರಣಗಳು ಪ್ರದರ್ಶನದ ವಿಶೇಷವಾಗಿದೆ.
ಪ್ರದರ್ಶನದಲ್ಲಿ ಕೊಳ್ಳುವ ಡೈಮಂಡ್ ಆಭರಣಗಳಿಗೆ ಮಾನ್ಯತೆ ಪತ್ರ ಹಾಗೂ ಶೇ.೯೦ ಬೆಲೆಗೆ ಬೈ ಬಾಕ್ ಸೌಲವಿವಿದೆ. ೫ ಸಾವಿರದಿಂದ ೮ ಲಕ್ಷಕ್ಕೂ ಮೇಲಿನ ಡೈಮಂಡ್ ಆಭರಣಗಳು ಲಭ್ಯವಿದೆ. ಮುಳಿಯಯ ಆಭರಣ ಯುನಿಕ್ ಡಿಸೈನ್ಗಳಾಗಿದ್ದು, ಕೆಲಸಗಾರರ ಪರ್ಫೆಕ್ಷನ್ ಮತ್ತು ಗ್ರಾಹಕ ಸ್ನೇಹಿ ಮತ್ತು ಪಾರದರ್ಶಕ ವ್ಯವಹಾರವನ್ನೂ ನಂಬಿಕೆಯನ್ನು ಹೆಚ್ಚಿಸಿದೆ.
ನವನಾರಿಗಳಾದ ಡಾ| ಆಶಾ ಜ್ಯೋತಿ ರೈ, ಡಾ| ಮಾಲಿನಿ ಹೆಬ್ಬಾರ್, ದೀಪಾ ಕಾಮತ್, ಕೋಮಲ್ ಪ್ರಭು, ಶುಭಮಣಿ ಶೇಖರ್, ಮಮತಾ, ಚೇತನ, ಸುಮನ ಪೊಳಲಿ, ಪ್ರಜ್ಞಾ ಡಿ.ಎಸ್. ಕಾರ್ಯಕ್ರಮ ಉದ್ಘಾಟಿಸಿದರು.
ಈ ವೇಳೆ ಮುಳಿಯ ಸಂಸ್ಥೆಯ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೇಶವ ಪ್ರಸಾದ ಮುಳಿಯ, ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣ ನಾರಾಯಣ ಮುಳಿಯ, ಪ್ರಬಂಧಕ ನಾಮದೇವ ಮಲ್ಯ ಹಾಗೂ ಕಿಸ್ನ ಡೈಮಂಡ್ನ ಪ್ರಬಂಧಕ ಪ್ರಕಾಶ ಸಿಂತ್ರೆ, ಸಂಘಟಕ ವೇಣುಶರ್ಮ, ಈಶ ಸುಲೋಚನ ಸೇರಿದಂತೆ ಮುಳಿಯ ಕುಟುಂಬಸ್ಥರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್
Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ
Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!
Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ