ತಮಿಳುನಾಡಿಗೆ ಹರಿದ ಕಾವೇರಿ ನೀರಿನ ವಿವರ ನೀಡಿದ ಸಚಿವ ಕಾರಜೋಳ
Team Udayavani, Sep 15, 2022, 5:16 PM IST
ಬೆಂಗಳೂರು: ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪನ್ನು ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ತಮಿಳುನಾಡಿಗೆ ಹರಿಸಬೇಕಾಗಿದ್ದ ನೀರಿನ ಪ್ರಮಾಣ 177.25.ಟಿಎಂಸಿ ಆಗಿದ್ದು, ಪ್ರಸಕ್ತ ಸಾಲಿನಲ್ಲಿ ಸಮೃದ್ಧವಾದ ಮಳೆಯಿಂದ ಹರಿದುಹೋಗಿರುವ ಒಟ್ಟು ನೀರಿನ ಪ್ರಮಾಣ 416.65 ಟಿಎಂಸಿ ಎಂದು ಜಲಸಂಪನ್ಮೂಲ ಸಚಿವರಾದ ಗೋವಿಂದ ಎಂ. ಕಾರಜೋಳ ಅವರು ವಿವರಗಳನ್ನು ನೀಡಿದ್ದಾರೆ.
ಗುರುವಾರ ವಿಧಾನ ಪರಿಷತ್ತಿನಲ್ಲಿ ಶಾಸಕರಾದ ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಸಚಿವ ಗೋವಿಂದ ಎಂ. ಕಾರಜೋಳ ರವರು ತಮಿಳುನಾಡಿಗೆ ನೀರಿನ ಹರಿವಿನ ಪ್ರಮಾಣದ ಬಗ್ಗೆ ಉತ್ತರಿಸಿದರು.
ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನಂತೆ ಕರ್ನಾಟಕದಿಂದ ತಮಿಳುನಾಡಿಗೆ ಮಾಸಿಕವಾಗಿ ಹರಿಸಬೆಕಾದ ನೀರಿನ ಪ್ರಮಾಣ ಒಟ್ಟು 177.25 ಟಿಎಂಸಿ ಆಗಿದ್ದು, 2007 ರ ಫೆಬ್ರವರಿ 05 ರ ಅಂತಿಮ ತೀರ್ಪನ್ನು ಸರ್ವೋಚ್ಛ ನ್ಯಾಯಾಲಯವು 2018 ಫೆಬ್ರವರಿ 17ರ ಆದೇಶದಲ್ಲಿ ಮಾರ್ಪಡಿಸಿರುವಂತೆ ತಮಿಳುನಾಡಿಗೆ ಕೇಂದ್ರ ಜಲ ಆಯೋಗದ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಪ್ರತಿ ಜಲ ವರ್ಷದಲ್ಲಿ ಹರಿಸಬೇಕಾದ ತಿಂಗಳ ಹರಿವಿನ ಪ್ರಮಾಣವು ಈ ಕೆಳಕಂಡಂತಿದೆ.
1) ಜನವರಿ ತಿಂಗಳಿನಲ್ಲಿ – 2.76 ಟಿಎಂಸಿ
2) ಫೆಬ್ರವರಿ – 2.50 ಟಿಎಂಸಿ
3) ಮಾರ್ಚ್ – 2.50 ಟಿಎಂಸಿ
4) ಏಪ್ರಿಲ್ – 2.50 ಟಿಎಂಸಿ
5) ಮೇ – 2.50 ಟಿಎಂಸಿ
6) ಜೂನ್ – 9.19 ಟಿಎಂಸಿ
7) ಜುಲೈ – 31.24 ಟಿಎಂಸಿ
8) ಆಗಸ್ಟ್ – 45.95 ಟಿಎಂಸಿ
9) ಸೆಪ್ಟೆಂಬರ್ – 36.76 ಟಿಎಂಸಿ
10) ಅಕ್ಟೋಬರ್ – 20.22 ಟಿಎಂಸಿ
11) ನವೆಂಬರ್ – 13.78 ಟಿಎಂಸಿ
12) ಡಿಸೆಂಬರ್ – 7.35 ಟಿಎಂಸಿ
ಒಟ್ಟು – 177.25 ಟಿಎಂಸಿ
2022ನೇ ಸಾಲಿನಲ್ಲಿ ಇಲ್ಲಿಯವರೆಗೆ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ 12-09-2022 ರವರೆಗೆ ತಮಿಳುನಾಡಿಗೆ ಹರಿಸಬೇಕಾಗಿರುವ ನೀರಿನ ಪ್ರಮಾಣ 101.08 ಟಿಎಂಸಿ ಆಗಿದ್ದು, ಆದರೆ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ 416.65 ಟಿಎಂಸಿ ಹೆಚ್ಚುವರಿ ನೀರು ಹರಿದು ದಾಖಲಾಗಿರುತ್ತದೆ.
ಕಾವೇರಿ ನ್ಯಾಯಾಧೀಕರಣದ ತೀರ್ಪಿನನ್ವಯ ಪ್ರತಿ ವರ್ಷ ತಮಿಳುನಾಡಿಗೆ ಹರಿಸಬೇಕಾಗಿರುವ ನೀರಿನ ಪ್ರಮಾಣ ಈ ಕೆಳಕಂಡಂತಿದೆ.
1) ಜೂನ್ ತಿಂಗಳಿನಲ್ಲಿ – 9.19 ಟಿಎಂಸಿ
2) ಜುಲೈ – 31.24 ಟಿಎಂಸಿ
3) ಆಗಸ್ಟ್ – 45.95 ಟಿಎಂಸಿ
4) ಸೆಪ್ಟೆಂಬರ್ – 14.70 ಟಿಎಂಸಿ
(12-09-2022 ರವರೆಗೆ)
ಒಟ್ಟು – 101.08 ಟಿಎಂಸಿ
ಬಿಳಿಗುಂಡ್ಲುವಿನಲ್ಲಿ ತಮಿಳುನಾಡಿಗೆ ಹರಿದಿರುವ ನೀರಿನ ಪ್ರಮಾಣ ಈ ಕೆಳಕಂಡಂತಿದೆ.
1) ಜೂನ್ ತಿಂಗಳಿನಲ್ಲಿ – 16.46 ಟಿಎಂಸಿ
2) ಜುಲೈ – 106.93 ಟಿಎಂಸಿ
3) ಆಗಸ್ಟ್ – 223.57 ಟಿಎಂಸಿ
4) ಸೆಪ್ಟೆಂಬರ್ – 69.69 ಟಿಎಂಸಿ
(12-09-2022 ರವರೆಗೆ)
ಒಟ್ಟು – 416.65 ಟಿಎಂಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
MUST WATCH
ಹೊಸ ಸೇರ್ಪಡೆ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್