ನೇರ ನಗದು ವರ್ಗಕ್ಕೆ ಆಧಾರ್‌ ಸೀಡಿಂಗ್‌ ಸಮಸ್ಯೆ! ಕೆವೈಸಿ ಬೇರೆ, ಸೀಡಿಂಗ್‌ ಬೇರೆ

ಎಷ್ಟು ಖಾತೆಗಳಿದ್ದರೂ ಒಂದು ಖಾತೆಗೆ ಮಾತ್ರ ಸೀಡಿಂಗ್‌ ಸಾಧ್ಯ

Team Udayavani, Sep 29, 2022, 7:05 AM IST

ನೇರ ನಗದು ವರ್ಗಕ್ಕೆ ಆಧಾರ್‌ ಸೀಡಿಂಗ್‌ ಸಮಸ್ಯೆ! ಕೆವೈಸಿ ಬೇರೆ, ಸೀಡಿಂಗ್‌ ಬೇರೆ

ಕುಂದಾಪುರ: ಸರಕಾರದ ವಿವಿಧ ಯೋಜನೆಗಳ ಫ‌ಲಾನುಭವಿಗಳು ಮತ್ತು ಅರೆಕಾಲಿಕ ನೌಕರಿಯ ವೇತನ ಪಡೆಯುವವರಿಗೆ ಬ್ಯಾಂಕ್‌ ಖಾತೆಗೇ ನೇರ ನಗದು ವರ್ಗಾವಣೆ ನಡೆಯುತ್ತಿದೆ. ಆದರೆ ಆಧಾರ್‌ ಸೀಡಿಂಗ್‌ ಸಮಸ್ಯೆಯ ಕಾರಣ ಪ್ರಸ್ತುತ ಎಲ್ಲೆಡೆ ಗೊಂದಲ ಉಂಟಾಗಿದೆ.

ನಕಲಿ ಫಲಾನುಭವಿಗಳನ್ನು ತಡೆಯಲು, ಸರಕಾರದ ಕಲ್ಯಾಣ ಯೋಜನೆಗಳ ಫಲಾನುಭವಿಗಳಿಗೆ ಆಧಾರ್‌ ಆಧಾರಿತ ನೇರ ನಗದು ವರ್ಗಾವಣೆಯ ಮೂಲಕ ತಲುಪಿಸುವಂತೆ ಕೇಂದ್ರ ಸರಕಾರ ಸೂಚನೆ ನೀಡಿದೆ.
ಯಾರಿಗೆಲ್ಲ ಕಾರ್ಮಿಕ ಯೋಜನೆಗಳು, ವಸತಿ ಯೋಜನೆಗಳು, ಸಬ್ಸಿಡಿಗಳು, ಕಂದಾಯ ಇಲಾಖೆಯ ವಿವಿಧ ಸೌಲಭ್ಯ, ಪಿಂಚಣಿ, ಅಡುಗೆ ಅನಿಲ, ತೋಟಗಾರಿಕೆ, ಕೃಷಿ ಇಲಾಖೆ ಸೌಲಭ್ಯದ ರೈತರು, ಆರೋಗ್ಯ ಕಾರ್ಯಕರ್ತರು (ಆಶಾ), ಅಂಗನವಾಡಿ ಕಾರ್ಯಕರ್ತರು, ಶಾಲಾ ಅಡುಗೆ ಸಿಬಂದಿ, ಪೌರ ಕಾರ್ಮಿಕರು ಮೊದಲಾದವರಿಗೆ ಇದು ಅನ್ವಯ ಪಾವತಿ ದೇಶದಲ್ಲಿ 77 ಕೋಟಿಗೂ ಹೆಚ್ಚು ಬ್ಯಾಂಕ್‌ ಖಾತೆಗಳು ಆಧಾರ್‌ನೊಂದಿಗೆ ಲಿಂಕ್‌ ಆಗಿವೆ. ಕಳೆದ 3 ವರ್ಷಗಳಲ್ಲಿ 20 ಇಲಾಖೆಗಳಲ್ಲಿ 117 ಯೋಜನೆಗಳ ಪ್ರಯೋಜನಗಳನ್ನು, 500 ಲಕ್ಷಕ್ಕೂ ಹೆಚ್ಚು ವಹಿವಾಟಿನಲ್ಲಿ 13,200 ಕೋ. ರೂ.ಗಳನ್ನು ಡಿಬಿಟಿ ಮೂಲಕ ವಿತರಿಸಲಾಗಿದೆ.

ಬಾಕಿ
ರಾಜ್ಯದಲ್ಲಿ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ  ಯೋಜನೆಯಡಿ ರೈತರಿಗೆ 91.99 ಕೋಟಿ ರೂ. ಡಿಬಿಟಿಯಲ್ಲಿ ಪಾವತಿಯಾಗದೆ ಮೂರು ವರ್ಷಗಳಿಂದ ಬಾಕಿಯಿದೆ. “ಕ್ಷೀರಸಿರಿ ಯೋಜನೆ’ಯಲ್ಲೂ 8,464 ಮಂದಿ ಹಾಲು ಉತ್ಪಾದಕರಿಗೆ 56.08 ಲಕ್ಷ ರೂ. ಪಾವತಿಯಾಗಿಲ್ಲ ಎಂದು ಸಿಎಜಿ ಕಳೆದ ವಾರ ಎಚ್ಚರಿಸಿದೆ. ಡಿಬಿಟಿ ಮೂಲಕ ನಡೆಸಿದ ವಹಿವಾಟುಗಳಲ್ಲಿ ಶೇ. 83ರಷ್ಟು ಯಶಸ್ವಿಯಾಗಿ, ಶೇ. 14ರಷ್ಟು ತಿರಸ್ಕೃತವಾಗಿವೆ. ವಿಫಲವಾದ ವಹಿವಾಟು ಸರಿಪಡಿಸಿ ಪುನಾರಂಭಿಸುವಲ್ಲಿ ಸಂಬಂಧಿ ಸಿದ ಇಲಾಖೆಗಳು ಹಿಂದುಳಿದು 91,283 ವಹಿವಾಟುಗಳು ಪುನಾರಂಭಕ್ಕೆ ಕಾಯುತ್ತಿವೆ.

ಹಳೆ ಬಾಕಿ
2018-19 ಹಾಗೂ 2019-20ರ ಅವಧಿ ಯಲ್ಲಿ 6.67 ಲಕ್ಷ ಫಲಾನುಭವಿಗಳು 153.30 ಕೋಟಿ ರೂ.ಗಳಷ್ಟು ಡಿಬಿಟಿ ಮೂಲಕ ಹಣ ಬಾರದೇ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಆ ವರ್ಷ ಡಿಬಿಟಿ ಸಾಧ್ಯವಾಗದೇ 22 ಇಲಾಖೆಗಳ 168 ಯೋಜನೆಗಳ 12,829.02 ಕೋ.ರೂ. ನಗದಿನಲ್ಲಿ ಪಾವತಿಸಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಮಿಷನ್‌ ಮತ್ತು ರೈತ ಸಿರಿ ಯೋಜನೆಗಳನ್ನು ಡಿಬಿಟಿ ಪೋರ್ಟಲ್‌ಗೆ ಅಳವಡಿಸಿದ್ದರೂ 145.94 ಕೋ.ರೂ. ಡಿಬಿಟಿ ಪಾವತಿಗಳನ್ನು ಮಾಡಲು ಸಾಧ್ಯವಾಗಿಲ್ಲ.

ಯಾಕಾಗಿ ಬಾಕಿ
ನಿಮ್ಮ ಗ್ರಾಹಕರನ್ನು ಅರಿಯಿರಿ (ಕೆವೈಸಿ) ಪ್ರಕ್ರಿಯೆಯಲ್ಲಿ ಆಧಾರ್‌, ಪಾನ್‌ ಇತ್ಯಾದಿ ಪಡೆದು ದಾಖಲಿಸಿದ್ದರೂ ಆಧಾರ್‌ ಸೀಡಿಂಗ್‌ ಮಾಡದ ಹೊರತು ಯಾರದ್ದೇ ಬ್ಯಾಂಕ್‌ ಖಾತೆಗೆ ನೇರ ನಗದು ವರ್ಗಾವಣೆ ಸಾಧ್ಯವಿಲ್ಲ.

ಏನಿದು ಸೀಡಿಂಗ್‌
ಕೆವೈಸಿಯ ಹೊರತಾಗಿ ವ್ಯಕ್ತಿಯೊಬ್ಬರ ಒಂದು ಬ್ಯಾಂಕ್‌ ಖಾತೆಗೆ ಆಧಾರ್‌ ಸೀಡಿಂಗ್‌ ಮಾಡಬೇಕಾಗುತ್ತದೆ. ಇದನ್ನು ಬ್ಯಾಂಕ್‌ಗಳೇ ಮಾಡಬೇಕು. ಒಬ್ಬರೇ ವ್ಯಕ್ತಿ ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದರೆ ಯಾವುದಾದರೂ ಒಂದು ಖಾತೆಗೆ ಮಾತ್ರ ಸೀಡಿಂಗ್‌ ಸಾಧ್ಯವಾಗುತ್ತದೆ. ಕೆವೈಸಿ ಎಲ್ಲ ಖಾತೆಗೂ ಬೇಕಾಗುತ್ತದೆ.

ಗೊಂದಲ
ಬೇರೆ ಬೇರೆ ಖಾತೆಗಳನ್ನು ಹೊಂದಿ ಯಾವುದಾದರೂ ಒಂದು ಖಾತೆ ಸೀಡಿಂಗ್‌ ಆಗಿದ್ದರೆ ಆ ಖಾತೆಗೆ ಡಿಬಿಟಿ ಹಣ ಪಾವತಿಯಾಗುತ್ತದೆ. ನಿತ್ಯ ಬಳಸುವ ಖಾತೆಗೆ ಹಣ ಜಮೆಯಾಗಿಲ್ಲ ಎಂದು ಗಾಬರಿಯಾಗುವ ಬದಲು ಯಾವ ಖಾತೆಗೆ ಹಣ ಬಂದಿದೆ ಎಂದು ಪರಿಶೀಲಿಸದಿದ್ದರೆ ಗೊಂದಲ ಸಹಜ. ಬ್ಯಾಂಕ್‌ಗಳು ಈ ವಿಚಾರದಲ್ಲಿ ಗ್ರಾಹಕರ ಜತೆ ನಿರಾಸಕ್ತಿ ತೋರಿಸುತ್ತಿವೆ.

ನಾವೇ ನೋಡಬಹುದು
ಆಧಾರ್‌ ಪೋರ್ಟಲ್‌ಗೆ ಹೋಗಿ (https://www.uidai.gov.in/) ಭಾಷೆಯನ್ನು ಆಯ್ಕೆ ಮಾಡಿ, ಮೈ ಆಧಾರ್‌ (ನನ್ನ ಆಧಾರ್‌) ಕ್ಲಿಕ್‌ ಮಾಡಬೇಕು. ಆಧಾರ್‌ ಸರ್ವಿಸಸ್‌ (ಆಧಾರ್‌ ಸೇವೆಗಳು) ಆಯ್ಕೆ ಮಾಡಿ. ಆಧಾರ್‌ ಲಿಂಕಿಂಗ್‌ ಸ್ಟೇಟಸ್‌ (ಆಧಾರ್‌ ಸಂಪರ್ಕ ಸ್ಥಿತಿಯಲ್ಲಿ ಬ್ಯಾಂಕ್‌ ಲಿಂಕ್‌ ಸ್ಥಿತಿ ಪರಿಶೀಲಿಸಿ) ಆಯ್ಕೆ ಮಾಡಿ ಆಧಾರ್‌ ನಂಬರ್‌ ದಾಖಲಿಸಿ ಒಟಿಪಿ ಕೊಟ್ಟರೆ ಯಾವ ಖಾತೆಗೆ ಆಧಾರ್‌ ಸೀಡಿಂಗ್‌ ಆಗಿದೆ ಎಂಬ ಮಾಹಿತಿ ದೊರೆಯುತ್ತದೆ.

ಆಧಾರ್‌ ಸೀಡಿಂಗ್‌ ಡಿಬಿಟಿ ಗೊಂದಲ ಗಮನಕ್ಕೆ ಬಂದಿದೆ. ಆಯಾ ಇಲಾಖೆಗಳೇ ತಮ್ಮ ಫ‌ಲಾನುಭವಿಗಳಿಗೆ ಸ್ಪಷ್ಟ ಮಾಹಿತಿ, ಜಾಗೃತಿ ಮೂಡಿಸಬೇಕೆಂದು ಸೂಚಿಸಲಾಗಿದೆ. ಬ್ಯಾಂಕ್‌ಗಳಲ್ಲಿ ಆಧಾರ್‌ ಸೀಡಿಂಗ್‌ಗೆ ನಿರ್ಲಕ್ಷ್ಯ ಮಾಡದಂತೆ ಸೂಚಿಸಲಾಗುವುದು.
– ಕೂರ್ಮಾ ರಾವ್‌ ಎಂ.,
ಜಿಲ್ಲಾಧಿಕಾರಿ, ಉಡುಪಿ

– ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.