9 ಜನರನ್ನು ಬಲಿ ಪಡೆದ ನರಭಕ್ಷಕ ಹುಲಿಯ ಬೇಟೆಗೆ ಕಾರ್ಯಾಚರಣೆ
Team Udayavani, Oct 8, 2022, 4:06 PM IST
ಪಾಟ್ನಾ : ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಗಾಹಾದಲ್ಲಿ ಒಂಬತ್ತು ಜನರ ಹತ್ಯೆಗೆ ಕಾರಣವಾದ ‘ನರಭಕ್ಷಕ’ ಹುಲಿಯನ್ನು ಕೊಲ್ಲಲು ಆದೇಶ ಹೊರಡಿಸಲಾಗಿದೆ.
ಹುಲಿಯು ಮಾನವ ವಾಸಸ್ಥಳದಲ್ಲಿ ವಾಸಿಸಲು ಒಗ್ಗಿಕೊಂಡಿದೆ ಎಂದು ದೃಢಪಡಿಸಿದ್ದು, ಕಾರ್ಯವಿಧಾನದ ಪ್ರಕಾರ ಹುಲಿಯನ್ನು ಕೊಲ್ಲಲು ಆದೇಶಗಳನ್ನು ನೀಡಲಾಗುತ್ತದೆ. ಕಳೆದ 3 ದಿನಗಳಲ್ಲಿ ಹುಲಿ 4 ಜನರನ್ನು ಹತ್ಯೆಗೈದಿದೆ ಎಂದು ಡಿಎಫ್ಒ ಹೇಳಿದ್ದಾರೆ.
ಇದನ್ನೂ ಓದಿ : ನಾಳೆ ಬೆಂಗಳೂರಿನಲ್ಲಿ ನಡೆಯಲಿದೆ ಫಿಲ್ಮ್ ಫೇರ್ ಅವಾರ್ಡ್ಸ್: ಇಲ್ಲಿದೆ ಕನ್ನಡ ನಾಮಿನೇಶನ್ಸ್
ಹುಲಿಯು ಕಳೆದ 3 ದಿನಗಳಲ್ಲಿ 4 ಜನರನ್ನು ಬಲಿಪಡೆದಿದೆ. ಈಗಾಗಲೆ ಗ್ರಾಮದ ಜನರು ಭಯಭೀತರಾಗಿ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಅರಣ್ಯ ಇಲಾಖೆ ಸಿಬಂದಿಗಳು ಹುಲಿಯ ಅಂತ್ಯಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.