ಪ್ರೊ ಕಬಡ್ಡಿ: ಮುನ್ನುಗ್ಗಿದ ಯು ಮುಂಬಾಗೆ ಬೆಂಗಳುರು ಬುಲ್ಸ್‌ ತಿವಿತ


Team Udayavani, Oct 22, 2022, 10:57 PM IST

ಪ್ರೊ ಕಬಡ್ಡಿ: ಮುನ್ನುಗ್ಗಿದ ಯು ಮುಂಬಾಗೆ ಬೆಂಗಳುರು ಬುಲ್ಸ್‌ ತಿವಿತ

ಬೆಂಗಳೂರು: ಆರಂಭದಲ್ಲಿ ಹಿನ್ನಡೆ ಅನುಭವಿಸಿ, ಕ್ರಮೇಣ ಬಿರುಸಿನ ಆಟಕ್ಕೆ ಮುಂದಾಗುವ ತನ್ನ ಕಾರ್ಯತಂತ್ರವನ್ನು ಇಲ್ಲಿಯೂ ಯಶಸ್ವಿಗೊಳಿಸಿದ ಬೆಂಗಳುರು ಬುಲ್ಸ್‌, ಶನಿವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ಯು ಮುಂಬಾವನ್ನು 42-32 ಅಂತರದಿಂದ ತಿವಿದಿದೆ.

ಆರಂಭದಲ್ಲಿ ಮುಂಬಾ ಬಹಳ ಮುನ್ನಡೆ ಯಲ್ಲಿತ್ತು. ವಿರಾಮದ ವೇಳೆಯಂತೂ ಮುಂಬಾ ಪಡೆಯದ್ದು 24-11 ಅಂಕಗಳ ಭರ್ಜರಿ ಲೀಡ್‌. ಆದರೆ ಕೋರ್ಟ್‌ ಬದಲಾದ ಬಳಿಕ ಬುಲ್ಸ್‌ ಆಟದ ಶೈಲಿಯೇ ಬದಲಾಯಿತು. ಮುಂಬಾ ಹಿನ್ನಡೆ ಕಾಣುತ್ತ ಹೋಯಿತು.

ರೈಡರ್‌ ಭರತ್‌ ಅಮೋಘ ಪ್ರದರ್ಶನ ನೀಡಿ ಬುಲ್ಸ್‌ ಜಯಭೇರಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ಗಳಿಸಿದ ಅಂಕ 16. ಇದರಲ್ಲಿ 14 ಟಚ್‌ ಪಾಯಿಂಟ್‌ಗಳಾದರೆ, 2 ಬೋನಸ್‌ ಅಂಕ. ಅವರ ಸೂಪರ್‌ ರೈಡ್‌ಗಳು ಬುಲ್ಸ್‌ಗೆ ವರವಾಗಿ ಪರಿಣಮಿಸಿತು. ಮತ್ತೋರ್ವ ರೈಡರ್‌ ವಿಕಾಸ್‌ ಕಂಡೋಲ ಕೂಡ ಅತ್ಯುತ್ತಮ ಆಟವಾಡಿ 8 ಅಂಕ ಗಳಿಸಿದರು. ಡಿಫೆಂಡರ್‌ ಸೌರಭ್‌ ನಂದಲ್‌ ಗಳಿಕೆ 4 ಅಂಕ.

ಮುಂಬಾ ರೈಡರ್‌ ಗುಮಾನ್‌ ಸಿಂಗ್‌ ಆಟ ಆಕರ್ಷಕವಾಗಿತ್ತು. ಅವರು 11 ಅಂಕ ಗಳಿಸಿ ಕೊಟ್ಟರು. ಡಿಫೆಂಡರ್‌ ರಾಹುಲ್‌ ಸತ್ಪಾಲ್‌ 4 ಅಂಕ ಸಂಪಾದಿಸಿದರು.

ಇದು 6 ಪಂದ್ಯಗಳಲ್ಲಿ ಬೆಂಗಳೂರು ಬುಲ್ಸ್‌ಗೆ ಒಲಿದ 4ನೇ ಜಯ. ಮುಂಬಾ ಇಷ್ಟೇ ಪಂದ್ಯಗಳಿಂದ 3ನೇ ಸೋಲನುಭವಿಸಿತು.

ಜೈಪುರ್‌ ವಿಜಯ
ದ್ವಿತೀಯ ಪಂದ್ಯದಲ್ಲಿ ಜೈಪುರ್‌ ಪಿಂಕ್‌ ಪ್ಯಾಂಥರ್ 51-27 ಅಂತರದಿಂದ ತೆಲುಗು ಟೈಟಾನ್ಸ್‌ಗೆ ಸೋಲುಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿತು. ಜೈಪುರ್‌ ಪರ ಅರ್ಜುನ್‌ ದೇಶ್ವಾಲ್‌ 12 ಅಂಕ ಗಳಿಸಿದರೆ, ಮರಳಿ ಫಾರ್ಮ್ ಕಂಡುಕೊಂಡಂತಿರುವ ರಾಹುಲ್‌ ಚೌಧರಿ 8 ಅಂಕ ಸಂಪಾದಿಸಿದರು.

 

ಟಾಪ್ ನ್ಯೂಸ್

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Uppinangady ಹೃದಯಾಘಾತ; ಯುವಕ ಸಾವು

Uppinangady ಹೃದಯಾಘಾತ; ಯುವಕ ಸಾವು

IND VS PAK

ಪಾಕ್‌ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weweqwe

IPL; ವಾಂಖೇಡೆಯಲ್ಲಿ ಬೌಲರ್‌ಗಳ ಮೇಲುಗೈ: ಮುಂಬೈ ವಿರುದ್ಧ ಕೆಕೆಆರ್ ಜಯಭೇರಿ

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

ICC Men’s Test Team Rankings; Team India slipped to second place

ICC Men’s Test Team Rankings; ಎರಡನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ

Thomas Cup: ಬ್ಯಾಡ್ಮಿಂಟನ್‌; ಭಾರತದ ಆಟಕ್ಕೆ ತೆರೆ

Thomas Cup: ಬ್ಯಾಡ್ಮಿಂಟನ್‌; ಭಾರತದ ಆಟಕ್ಕೆ ತೆರೆ

Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ

Hockey: ವನಿತಾ ಹಾಕಿ ನಾಯಕತ್ವದಲ್ಲಿ ಪರಿವರ್ತನೆ: ಸವಿತಾ ಬದಲು ಸಲೀಮಾ ಟೇಟೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Supreme Court

ಒಂದೇ ಹೆಸರಿರುವ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ ಇಲ್ಲ: ಸುಪ್ರೀಂ

1-ewqeqewq

Eknath Shinde ಬಣ ಶಿವಸೇನೆ ಸೇರಿದ ಮಾಜಿ ಸಂಸದ ಸಂಜಯ ನಿರುಪಮ್‌

2000

2,000 ರೂ.ನ 97.76% ನೋಟು ವಾಪಸ್‌: ಆರ್‌ಬಿಐ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.