ವಿವಾದಾತ್ಮಕ ಹೇಳಿಕೆ: ನಟ ಚೇತನ್ ಅಹಿಂಸಾಗೆ ಪೊಲೀಸ್ ನೋಟಿಸ್
Team Udayavani, Oct 23, 2022, 7:16 PM IST
ಬೆಂಗಳೂರು: ‘ಭೂತ ಕೋಲ’ ಕುರಿತ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಕನ್ನಡ ನಟ ಚೇತನ್ ಅಹಿಂಸಾ ಅವರಿಗೆ ಪೊಲೀಸ್ ನೋಟಿಸ್ ಜಾರಿ ಮಾಡಲಾಗಿದೆ.
ಈ ನಂತರ ಕರ್ನಾಟಕ ಪೊಲೀಸರು ಚೇತನ್ಗೆ ನೋಟಿಸ್ ಜಾರಿ ಮಾಡಿದ್ದಾರೆ. ಅವರು ಭಾನುವಾರ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರ ಮುಂದೆ ಹಾಜರಾಗುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.
ಸೂಪರ್ಹಿಟ್ ‘ಕಾಂತಾರ’ ಸಿನಿಮಾದಲ್ಲಿ ತೋರಿಸುವ ‘ಭೂತ ಕೋಲ’ ಆಚರಣೆ ಹಿಂದೂ ಧರ್ಮದ ಭಾಗವಲ್ಲ ಎಂದು ಚೇತನ್ ಹೇಳಿ ಆಕ್ರೋಶಕ್ಕೆ ಗುರಿಯಾದ್ದರು.
ಭೂತ ಕೋಲವು ಈ ನೆಲದ ಸ್ಥಳೀಯರು ಆಚರಿಸುವ ಆಚರಣೆಯಾಗಿದೆ ಮತ್ತು ಭಾರತದಲ್ಲಿ ಹಿಂದೂ ಧರ್ಮವು ಅಸ್ತಿತ್ವಕ್ಕೆ ಬರುವ ಮೊದಲು ಅಸ್ತಿತ್ವದಲ್ಲಿತ್ತು ಎಂದಿದ್ದರು. ಹೇಳಿಕೆ ನೀಡಿದ್ದಕ್ಕಾಗಿ ಪೊಲೀಸರಿಗೆ ಹಲವು ದೂರುಗಳು ಬಂದಿವೆ. ಚೇತನ್ ಹಿಂದೂ ಧರ್ಮವನ್ನು ಅವಮಾನಿಸಿದ್ದಾರೆ ಮತ್ತು ಅವರ ಹೇಳಿಕೆಗಳು ವಿವಿಧ ಜಾತಿಗಳ ನಡುವೆ ಬಿರುಕು ಮೂಡಿಸುವ ಉದ್ದೇಶವನ್ನು ಹೊಂದಿವೆ ಎಂದು ದೂರುದಾರರು ಆರೋಪಿಸಿದ್ದಾರೆ.