ಬಾಂಗ್ಲಾಕ್ಕೆ ಮೊದಲ ಸೂಪರ್‌-12 ಗೆಲುವು; ತಸ್ಕಿನ್‌ ಅಹ್ಮದ್‌ ಜೀವನಶ್ರೇಷ್ಠ ಬೌಲಿಂಗ್‌

ನೆದರ್ಲೆಂಡ್ಸ್‌ ವಿರುದ್ಧ 9 ರನ್‌ ಜಯ

Team Udayavani, Oct 24, 2022, 10:13 PM IST

ಬಾಂಗ್ಲಾಕ್ಕೆ ಮೊದಲ ಸೂಪರ್‌-12 ಗೆಲುವು; ತಸ್ಕಿನ್‌ ಅಹ್ಮದ್‌ ಜೀವನಶ್ರೇಷ್ಠ ಬೌಲಿಂಗ್‌

ಹೋಬರ್ಟ್: ಪೇಸ್‌ ಬೌಲರ್‌ ತಸ್ಕಿನ್‌ ಅಹ್ಮದ್‌ ಅವರ ಜೀವನಶ್ರೇಷ್ಠ ಬೌಲಿಂಗ್‌ ಸಾಧನೆಯಿಂದಾಗಿ ಬಾಂಗ್ಲಾದೇಶ ಟಿ20 ವಿಶ್ವಕಪ್‌ ಸೂಪರ್‌-12 ಹಂತದಲ್ಲಿ ಮೊದಲ ಗೆಲುವನ್ನು ಕಂಡಿತು. ಸೋಮವಾರ ಮುಖಾಮುಖಿಯಲ್ಲಿ ಬಾಂಗ್ಲಾ ಪಡೆ 9 ರನ್ನುಗಳಿಂದ ನೆದರ್ಲೆಂಡ್ಸ್‌ಗೆ ಸೋಲುಣಿಸಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ ದೊಡ್ಡ ಮೊತ್ತವನ್ನೇನೂ ದಾಖಲಿಸಲಿಲ್ಲ. 8 ವಿಕೆಟಿಗೆ ಗಳಿಸಿದ್ದು 144 ರನ್‌ ಮಾತ್ರ. ಆದರೆ ಡಚ್‌ ಪಡೆ ತಸ್ಕಿನ್‌ ಅಹ್ಮದ್‌ ಅವರ ಘಾತಕ ಸ್ಪೆಲ್‌ಗೆ ತತ್ತರಿಸಿತು. ಕೊನೆಯಲ್ಲಿ ಹೋರಾಟ ಸಂಘಟಿಸಿತಾದರೂ ಗೆಲುವು ಸ್ವಲ್ಪದರಲ್ಲೇ ದೂರ ಉಳಿಯಿತು. ಸರಿಯಾಗಿ 20 ಓವರ್‌ಗಳಲ್ಲಿ 135ಕ್ಕೆ ಆಲೌಟ್‌ ಆಯಿತು. ಬಾಂಗ್ಲಾದೇಶವಿನ್ನು ಗುರುವಾರ ದಕ್ಷಿಣ ಆಫ್ರಿಕಾ ಸವಾಲನ್ನು ಎದುರಿಸಲಿದೆ.

ಅಷ್ಟೇನೂ ಕಠಿನವಲ್ಲದ ಗುರಿಯನ್ನು ಬೆನ್ನಟ್ಟಿದ ನೆದರ್ಲೆಂಡ್ಸ್‌ 3.2 ಓವರ್‌ಗಳಲ್ಲೇ 15 ರನ್ನಿಗೆ 4 ವಿಕೆಟ್‌ ಉದುರಿಸಿಕೊಂಡಿತು. ಒಂದೆಡೆ ತಸ್ಕಿನ್‌ ಅಹ್ಮದ್‌ ಘಾತಕವಾಗಿ ಎರಗಿದರೆ, ಇನ್ನೊಂದೆಡೆ ಫೀಲ್ಡಿಂಗ್‌ ಮೂಲಕವೂ ಬಾಂಗ್ಲಾ ಮ್ಯಾಜಿಕ್‌ ಮಾಡಿತು. ಈ ಹಂತದಲ್ಲಿ ತಸ್ಕಿನ್‌ 2 ವಿಕೆಟ್‌ ಕೆಡವಿದರು. ಇಬ್ಬರು ರನೌಟಾದರು.

ಮಧ್ಯಮ ಕ್ರಮಾಂಕದ ಬ್ಯಾಟರ್‌ ಕಾಲಿನ್‌ ಆ್ಯಕರ್‌ಮನ್‌ ಒಂದೆಡೆ ಕ್ರೀಸಿಗೆ ಅಂಟಿಕೊಂಡು ನಿಂತರು. ಬಾಂಗ್ಲಾ ಬೌಲಿಂಗ್‌ ದಾಳಿಗೆ ದಿಟ್ಟ ರೀತಿಯಲ್ಲಿ ಜವಾಬು ನೀಡತೊಡಗಿದರು. ಆದರೆ ಇನ್ನೊಂದೆಡೆ ಅವರಿಗೆ ಸೂಕ್ತ ಬೆಂಬಲ ಲಭಿಸಲಿಲ್ಲ. 100 ರನ್‌ ಆಗುವಷ್ಟರಲ್ಲಿ 8 ವಿಕೆಟ್‌ ಉರುಳಿತು. ಸ್ಕೋರ್‌ 101ಕ್ಕೆ ಏರಿದಾಗ ಸ್ವತಃ ಆ್ಯಕರ್‌ಮನ್‌ ಔಟಾದರು. ಫ್ರೆಡ್‌ ಕ್ಲಾಸೆನ್‌ ಮತ್ತು ಅಂತಿಮ ಆಟಗಾರ ಪಾಲ್‌ ವಾನ್‌ ಮೀಕೆರನ್‌ ಸೇರಿಕೊಂಡು ಮೊತ್ತವನ್ನು 135ರ ತನಕ ತಂದರು. ಆ್ಯಕರ್‌ಮನ್‌ ಪಂದ್ಯದಲ್ಲೇ ಸರ್ವಾಧಿಕ 62 ರನ್‌ ಹೊಡೆದರು (48 ಎಸೆತ, 6 ಬೌಂಡರಿ, 2 ಸಿಕ್ಸರ್‌).

ತಸ್ಕಿನ್‌ ಅಹ್ಮದ್‌ ಸಾಧನೆ 25ಕ್ಕೆ 4 ವಿಕೆಟ್‌. ಇದು ಅವರ ಜೀವನಶ್ರೇಷ್ಠ ಬೌಲಿಂಗ್‌. ಇವರ ಜತೆಗಾರ ಹಸನ್‌ ಮಹ್ಮದ್‌ ಕೂಡ ಅಪಾಯಕಾರಿಯಾಗಿ ಗೋಚರಿಸಿದರು. ಒಂದು ಮೇಡನ್‌ ಓವರ್‌ ಜತೆಗೆ, 15 ರನ್ನಿತ್ತು 2 ವಿಕೆಟ್‌ ಕೆಡವಿದರು. ಶಕಿಬ್‌ ಅಲ್‌ ಹಸನ್‌ ಮತ್ತು ಸೌಮ್ಯ ಸರ್ಕಾರ್‌ ಒಂದೊಂದು ವಿಕೆಟ್‌ ಕಿತ್ತರು.

ಪವರ್‌ ಪ್ಲೇ ಪವರ್‌
ಬಾಂಗ್ಲಾ ಪವರ್‌ ಪ್ಲೇಯಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿತು. ನಜ್ಮುಲ್‌ ಹುಸೇನ್‌ (25)- ಸೌಮ್ಯ ಸರ್ಕಾರ್‌ (14) 5.1 ಓವರ್‌ಗಳಿಂದ 43 ರನ್‌ ಒಟ್ಟುಗೂಡಿಸಿದರು. ಇಲ್ಲಿಂದ ಮುಂದೆ ಡಚ್‌ ಬೌಲಿಂಗ್‌ ದಾಳಿ ಹರಿತಗೊಳ್ಳತೊಡಗಿತು. ಇಬ್ಬರು ಯುವ ಸ್ಪಿನ್ನರ್‌ಗಳನ್ನು ಆಡಿಸುವ ಗ್ಯಾಂಬ್ಲಿಂಗ್‌ ನಡೆಸಿದ ನೆದರ್ಲೆಂಡ್ಸ್‌, ಇದರಲ್ಲಿ ಬಹುತೇಕ ಯಶಸ್ಸು ಕಂಡಿತು. 19 ವರ್ಷದ ಲೆಗ್‌ಸ್ಪಿನ್ನರ್‌ ಶರಿಝ್ ಅಹ್ಮದ್‌, ಎಡಗೈ ಸ್ಪಿನ್ನರ್‌ ಟಿಮ್‌ ಪ್ರಿಂಗ್ಲ್ “ಟೈಡಿ ಸ್ಪೆಲ್‌’ ಮೂಲಕ ಗಮನ ಸೆಳೆದರು. ನಾಯಕ ಶಕಿಬ್‌ (7), ಆರಂಭಕಾರ ನಜ್ಮುಲ್‌ ಇವರಿಬ್ಬರ ಮೋಡಿಗೆ ಸಿಲುಕಿದರು.

38 ರನ್‌ ಮಾಡಿದ ಆಫಿಫ್ ಹುಸೇನ್‌ ಬಾಂಗ್ಲಾ ಸರದಿಯ ಟಾಪ್‌ ಸ್ಕೋರರ್‌ (27 ಎಸೆತ, 2 ಬೌಂಡರಿ, 2 ಸಿಕ್ಸರ್‌). ಕೊನೆಯಲ್ಲಿ ಮೊಸದ್ದೆಕ್‌ ಹುಸೇನ್‌ ಮಿಂಚಿನ ಗತಿಯಲ್ಲಿ ಅಜೇಯ 20 ರನ್‌ ಹೊಡೆದರು.

ಸಂಕ್ಷಿಪ್ತ ಸ್ಕೋರ್‌
ಬಾಂಗ್ಲಾದೇಶ-8 ವಿಕೆಟಿಗೆ 144 (ಆಫಿಫ್ 38, ನಜ್ಮುಲ್‌ 25, ಮೊಸದ್ದೆಕ್‌ ಔಟಾಗದೆ 20. ಮೀಕರನ್‌ 21ಕ್ಕೆ 2, ಬಾಸ್‌ ಡಿ ಲೀಡ್‌ 29ಕ್ಕೆ 2). ನೆದರ್ಲೆಂಡ್ಸ್‌-20 ಓವರ್‌ಗಳಲ್ಲಿ 135 (ಆ್ಯಕರ್‌ಮನ್‌ 62, ಮೀಕರನ್‌ 24, ಎಡ್ವರ್ಡ್ಸ್‌ 16, ಟಸ್ಕಿನ್‌ ಅಹ್ಮದ್‌ 25ಕ್ಕೆ 4, ಹಸನ್‌ ಮಹ್ಮದ್‌ 15ಕ್ಕೆ 2).

ಪಂದ್ಯಶ್ರೇಷ್ಠ: ತಸ್ಕಿನ್‌ ಅಹ್ಮದ್‌.

 

ಟಾಪ್ ನ್ಯೂಸ್

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.