ಹುಬ್ಬಳ್ಳಿ: ಗ್ರಾಮೀಣ ವಿವಿ ಸ್ವಗ್ರಾಮ ಫೆಲೋಶಿಪ್‌

ಸಲಹೆ-ಸೂಚನೆ ಕ್ರೋಢಿಕರಿಸಿ ದೀರ್ಘಾವಧಿ ಚಿಂತನೆಯೊಂದಿಗೆ ರೂಪಿಸಲಾಗಿದೆ.

Team Udayavani, Nov 2, 2022, 12:08 PM IST

ಹುಬ್ಬಳ್ಳಿ: ಗ್ರಾಮೀಣ ವಿವಿ ಸ್ವಗ್ರಾಮ ಫೆಲೋಶಿಪ್‌

ಹುಬ್ಬಳ್ಳಿ: ಗ್ರಾಮ ಸಬಲೀಕರಣ, ಸ್ವಾವಲಂಬಿ ಬದುಕಿನ ಚಿಂತನೆಗಳ ಜತೆಗೆ ಗ್ರಾಮ ಭಾರತಕ್ಕೆ ಬಲ ತುಂಬುವ ಮಹತ್ವಾಕಾಂಕ್ಷೆ ಹೊಂದಿರುವ “ಸ್ವಗ್ರಾಮ ಫೆಲೋಶಿಪ್‌’ಗೆ ಗದುಗಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ಬುಧವಾರ ಚಾಲನೆ ನೀಡುತ್ತಿದೆ.

ಗ್ರಾಮೀಣ ಬದುಕಿನ ಸಮಷ್ಟಿ ಅಭಿವೃದ್ಧಿ ಪರಿಕಲ್ಪನೆ, ಭವಿಷ್ಯದ ಸುಸ್ಥಿರತೆ ಚಿಂತನೆ ಹೊಂದಿರುವ ದೇಶದ ಮೊದಲ ಗುಂಪು ಫೆಲೋಶಿಪ್‌ ಇದಾಗಿದೆ. ಮೂರು ವರ್ಷಗಳ ಈ ಫೆಲೋಶಿಪ್‌ ಅನ್ನು ಅಕಾಡೆಮಿಕ್‌ ದೃಷ್ಟಿ ಹೊರತಾಗಿ ವಿವಿಧ ಕ್ಷೇತ್ರಗಳ ಸಾಧಕರು, ಸಾಧಕ ರೈತರು, ತಜ್ಞರು, ಸಂಘಟಕರು, ವೃತ್ತಿಪರರು, ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸಿ, ಅಭಿಪ್ರಾಯ, ಸಲಹೆ-ಸೂಚನೆ ಕ್ರೋಢಿಕರಿಸಿ ದೀರ್ಘಾವಧಿ ಚಿಂತನೆಯೊಂದಿಗೆ ರೂಪಿಸಲಾಗಿದೆ.

ಏನಿದು ಫೆಲೋಶಿಪ್‌?: ಗ್ರಾಮಗಳು ಉಳಿದರೆ ಭಾರತ ಉಳಿದೀತು ಎಂಬ ಪರಿಕಲ್ಪನೆಯಡಿ ಆತ್ಮನಿರ್ಭರತೆ ಒತ್ತಿನೊಂದಿಗೆ ಸ್ವಾವಲಂಬಿ ಗ್ರಾಮಗಳ ಬಲವರ್ಧನೆ, ಗ್ರಾಮ ವಿಕಾಸ ನಿಟ್ಟಿನಲ್ಲಿ ಗ್ರಾಮಸ್ಥರೇ ಚಿಂತಿಸಿ, ಸಮಾಲೋಚಿಸಿ, ನಿರ್ಣಯಿಸಿ ಕ್ರಿಯಾನ್ವಯಗೊಳಿಸುವ ಪ್ರಕ್ರಿಯೆಯೇ ಈ ಫೆಲೋಶಿಪ್‌ನ ಮೂಲ ಆಶಯವಾಗಿದೆ.

ಗ್ರಾಮೀಣ ವಿವಿ ಇದಕ್ಕಾಗಿ ವಿವಿಧ ಮಾದರಿಗಳನ್ನು ರೂಪಿಸಲು, ಯೋಜನೆ-ಚಿಂತನೆಗಳನ್ನು ಕೈಗೊಳ್ಳಲು ಯೂತ್‌ ಫಾರ್‌ ಸೇವಾ, ಚಾಣಕ್ಯ ವಿಶ್ವವಿದ್ಯಾಲಯ, ಪ್ರಜ್ಞಾಪ್ರವಾಹ, ಕುವೆಂಪು ವಿವಿಯ ಅಬ್ದುಲ್‌ ನಜೀರ್‌ಸಾಬ್‌ ಅಧ್ಯಯನ ಪೀಠ ಸಹಯೋಗದೊಂದಿಗೆ ಮಹತ್ವದ ಕಾರ್ಯಕ್ಕೆ ಮುಂದಾಗಿದೆ.

ಅವಧಿ ಎಷ್ಟು?: ಮೂರು ವರ್ಷಗಳ (2022-2025) ಸ್ವಗ್ರಾಮ ಫೆಲೋಶಿಪ್‌ ಗ್ರಾಮ ಸ್ವಭಾವಕ್ಕೆ ಅನುಗುಣವಾಗಿ ಗ್ರಾಮ ಅಭಿವೃದ್ಧಿಯ ಮಾದರಿಗಳನ್ನು ರೂಪಿಸುವ, ಸಹಕಾರ ಮನೋಭಾವದಡಿ ಸ್ವಾವಲಂಬಿ ಗ್ರಾಮ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಹಲವು ಪ್ರಯೋಗಳನ್ನು ಮಾಡುವ ಮೂಲಕ ಫಲಿತಾಂಶವನ್ನು ರಾಷ್ಟ್ರಮಟ್ಟದಲ್ಲಿ ವಿಸ್ತರಣೆಯಾಗುವಂತೆ ಮಾಡುವ ಮಹದಾಸೆಯನ್ನು ಹೊಂದಿದೆ. ಮುಖ್ಯವಾಗಿ ಸಮಗ್ರ ಗ್ರಾಮೀಣ ವಿಕಾಸದ ಪರಿಕಲ್ಪನೆ ಚೌಕಟ್ಟು, ಸಾಧನೆಗಳನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಉತ್ತೇಜನ ನೀಡಲಿದೆ.

ಗುಂಪು ಮಾದರಿಯ ಫೆಲೋಶಿಪ್‌ ಸ್ವ ಆಧಾರಿತ ಗ್ರಾಮ ಅಭಿವೃದ್ಧಿ ಮಾದರಿ ನಿರ್ಮಾಣಕ್ಕೆ ಯತ್ನಿಸುವ ವೇದಿಕೆಯಾಗಿದೆ. ಗ್ರಾಮೀಣ ಸಮಗ್ರ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ ಯತ್ನಿಸುವ ಪ್ರತಿಯೊಂದು ತಂಡಕ್ಕೂ ಅಗತ್ಯ ಮಾರ್ಗದರ್ಶನ, ಜ್ಞಾನ, ಕೌಶಲ, ಸಲಹೆಗಳನ್ನು ನೀಡಲಾಗುತ್ತದೆ. ಗ್ರಾಮದಲ್ಲಿ ಪರಿವರ್ತನೆ, ಸಹಕಾರ, ಸಮಷ್ಟಿ ಚಿಂತನೆ, ಭವಿಷ್ಯದ ಪರಿಕಲ್ಪನೆಯನ್ನು ಮನವರಿಕೆ ಮಾಡುವ ವಾಸ್ತವಿಕ ನೆಲೆಗಟ್ಟಿನಲ್ಲಿ ಇದೆಲ್ಲವುಗಳನ್ನು ಅನುಷ್ಠಾನಕ್ಕೆ ಪ್ರಮಾಣಿಕವಾಗಿ ಯತ್ನಿಸುವ, ಜನತೆ ಸ್ವಯಂ ಸಂತೋಷದಿಂದ ಪಾಲ್ಗೊಳ್ಳುವಿಕೆ, ಪಾಲುದಾರರನ್ನಾಗಿಸುವ ಯತ್ನವನ್ನು ಸ್ವಗ್ರಾಮ ಫೆಲೋಶಿಪ್‌ ಮಾಡಲಿದೆ.

ಭವಿಷ್ಯದ ಸುಸ್ಥಿರ-ಸ್ವಾವಲಂಬಿ ಗ್ರಾಮೀಣ ಭಾರತ ನಿರ್ಮಾಣ ನಿಟ್ಟಿನಲ್ಲಿ “ಸ್ವಗ್ರಾಮ ಫೆಲೋಶಿಪ್‌’ ದೇಶದಲ್ಲಿಯೇ ಹೊಸ ಪ್ರಯೋಗ. ಗ್ರಾಮಕ್ಕಾಗಿ ಏನಾದರೂ ಮಾಡಬೇಕು ಎಂದುಕೊಂಡವರಿಗೆ ನಿರಂತರ ಅಭಿವೃದ್ಧಿ, ಹೊಸತನ ಚಿಂತನೆ, ಸಮಗ್ರ ಅಭಿವೃದ್ಧಿ ಪರಿಕಲ್ಪನೆಗಳ ಪ್ರಯೋಗ-ಅನುಷ್ಠಾನಕ್ಕೆ ಸೂಕ್ತ ವೇದಿಕೆ ಕಲ್ಪಿಸುವ ಕೆಲಸ ಇದಾಗಿದೆ.
ವಿಷ್ಣುಕಾಂತ ಚಟಪಲ್ಲಿ, ಕುಲಪತಿ,
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌

*ಅಮರೇಗೌಡ ಗೋನವಾರ

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.