ಜಾಗತಿಕ ಹೂಡಿಕೆ ಸಮಾವೇಶ: ಮೊದಲ ದಿನವೇ ಹರಿದುಬಂತು 5.64 ಲಕ್ಷ ಕೋಟಿ ರೂ.
Team Udayavani, Nov 3, 2022, 6:50 AM IST
ಬೆಂಗಳೂರು: ಜಾಗತಿಕ ಹೂಡಿಕೆ ಸಮಾವೇಶದಲ್ಲಿ ನಿರೀಕ್ಷೆಗೂ ಮೀರಿದ ಹೂಡಿಕೆ ಹರಿದುಬರಲಾರಂಭಿಸಿದೆ. ಸರ್ಕಾರ ನಿರೀಕ್ಷಿಸಿದ 5 ಲಕ್ಷ ಕೋಟಿ ರೂ.ಗಳ ಹೂಡಿಕೆ ಸಂಬಂಧ ಮೊದಲ ದಿನವೇ ಒಡಂಬಡಿಕೆಯಾಗಿದೆ.
ಈ ಮೂಲಕ ಸರ್ಕಾರ ನಿರೀಕ್ಷಿಸಿದ ಹೂಡಿಕೆ ಮೊದಲ ದಿನವೇ ಯಶಸ್ಸು ಕಂಡಿದೆ. ಅಂದಾಜು 5.64 ಲಕ್ಷ ಕೋಟಿ ರೂ.ಗಳ ಹೂಡಿಕೆಯಾಗಿದ್ದು, 50 ಕಂಪನಿಗಳು ಒಡಂಬಡಿಕೆಗೆ ಸಹಿ ಮಾಡಿವೆ ಎಂದು ತಿಳಿದು ಬಂದಿದೆ.
ಕೊರೊನಾ ಕಾಲಘಟ್ಟದ ಬಳಿಕ ಜಾಗತಿಕವಾಗಿ ದೊಡ್ಡ ಮಟ್ಟದ ಸಮಾವೇಶವನ್ನು ಸರ್ಕಾರ ನಡೆಸುತ್ತಿದೆ. ಇದಕ್ಕಾಗಿ ಕಳೆದ 3 ತಿಂಗಳಿನಿಂದಲೇ ಸಿದ್ಧತೆ ನಡೆಸಿತ್ತು. ದುಬೈ, ಸ್ವಿಜರ್ಲೆಂಡ್ನ ದಾವೋಸ್ ಸಮಾವೇಶ ಸೇರಿ ಹಲವೆಡೆ ಸಾಕಷ್ಟು ಒಪ್ಪಂದಗಳನ್ನು ಮಾಡಿಕೊಂಡು ರಾಜ್ಯಕ್ಕೆ ಹೂಡಿಕೆ ತರುವಲ್ಲಿ ಯಶಸ್ವಿಯಾಗಿದೆ.
ಅದರ ಫಲವೆಂಬಂತೆ ಮೊದಲ ದಿನವೇ 5.64 ಕೋಟಿ ರೂ. ಹೂಡಿಕೆಯಾಗಿರುವುದರಿಂದ ಉಳಿದ ಎರಡು ದಿನಗಳಲ್ಲಿ ತಲಾ 2 ಲಕ್ಷ ಕೋಟಿ ರೂ.ಗಳಂತೆ ಹೂಡಿಕೆಯಾದರೂ ದುಪ್ಪಟ್ಟು ಬಂಡವಾಳ ಹರಿದು ಬಂದಂತಾಗಲಿದೆ. ಆದರೆ, ಸರ್ಕಾರವು ಅಧಿಕೃತವಾಗಿ ನ.4ರಂದು ಸಮಾವೇಶದ ಸಮಾರೋಪದಲ್ಲಿ ಒಟ್ಟಾರೆ ಹೂಡಿಕೆಯ ಸ್ಪಷ್ಟ ಚಿತ್ರಣ ನೀಡಲಿದೆ.
ಪ್ರಮುಖ ಒಡಂಬಡಿಕೆಗಳು ಮತ್ತು ಹೂಡಿಕೆ ವಿವರ
– ಗ್ರೀನ್ ಹೈಡ್ರೋಜನ್ನ 7 ಕಂಪನಿಗಳು- 2.91 ಲಕ್ಷ ಕೋಟಿ ರೂ.
– ನವೀಕರಿಸಬಹುದಾದ ಇಂಧನದ 9 ಕಂಪನಿಗಳು – 1.29 ಕೋಟಿ ರೂ.
– ಉದಯೋನ್ಮುಖ 16 ಕಂಪನಿಗಳು – 70,381 ಕೋಟಿ ರೂ.
– ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ ಪಾರ್ಕ್ ನಲ್ಲಿ 8 ಕಂಪನಿಗಳು- 43,500 ಕೋಟಿ ರೂ.
– ಜವಳಿ, ಸಕ್ಕರೆ, ಜೈವಿಕ ಇಂಧನ ಮುಂತಾದ ಕ್ಷೇತ್ರಗಳ 4 ಕಂಪನಿಗಳು- 4,704 ಕೋಟಿ ರೂ.
– ವಿವಿಧ ಕೋರ್ ವಲಯಗಳಲ್ಲಿ 6 ಕಂಪನಿಗಳು- 25,024 ಕೋಟಿ ರೂ. ಹೂಡಿಕೆ
ವಿವಿಧ ಕಂಪನಿಗಳು ಸರ್ಕಾರದ ಜೊತೆ ಮಾಡಿಕೊಂಡಿರುವ ಒಪ್ಪಂದದ ವಿಸ್ತೃತ ವಿವರ ಹಾಗೂ ಸ್ಪಷ್ಟ ಚಿತ್ರಣವನ್ನು ನ.4ರಂದು ಸಮಾವೇಶದ ಸಮಾರೋಪದಲ್ಲಿ ಅಧಿಕೃತವಾಗಿ ಪ್ರಕಟಿಸಲಿದ್ದೇವೆ.
– ಮುರುಗೇಶ ನಿರಾಣಿ, ಕೈಗಾರಿಕಾ ಸಚಿವ
ಕರ್ನಾಟಕದಲ್ಲಿ ಉದ್ಯಮಿಗಳಿಗೆ ಅತ್ಯಂತ ಪೂರಕ ವಾತಾವರಣ ಇದ್ದು, ಮುಂದಿನ 5 ವರ್ಷಗಳಲ್ಲಿ ಇನ್ನೂ ಒಂದು ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುವುದು.
– ಸಜ್ಜನ್ ಜಿಂದಾಲ್, ಉದ್ಯಮಿ
ವಿದ್ಯುತ್, ಅನಿಲ ಕೊಳವೆ ಮಾರ್ಗ, ಲಾಜಿಸ್ಟಿಕ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುಂದಿನ ಏಳು ವರ್ಷಗಳಲ್ಲಿ ರಾಜ್ಯದಲ್ಲಿ ಒಂದು ಲಕ್ಷ ಕೋಟಿ ಹೂಡಿಕೆ ಮಾಡಲು ಉದ್ದೇಶಿಸಲಾಗಿದೆ.
– ಕರಣ್ ಅದಾನಿ, ಗೌತಮ್ ಅದಾನಿ ಪುತ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್
Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್
Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್
Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ
Prajwal Revanna ಬಂಧನಕ್ಕೆ ಕೇಂದ್ರ ಸರಕಾರದಿಂದ ಅಸಹಕಾರ: ಸಚಿವ ತಂಗಡಗಿ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್
Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ
Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!
Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ