ಪತ್ರಿಕಾಗೋಷ್ಠಿಯಿಂದ ಎರಡು ಸುದ್ದಿ ವಾಹಿನಿಗಳನ್ನು ನಿರ್ಬಂಧಿಸಿದ ಕೇರಳ ರಾಜ್ಯಪಾಲ
Team Udayavani, Nov 8, 2022, 7:40 AM IST
ಕೊಚ್ಚಿ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಸೋಮವಾರ ತಮ್ಮ ಪತ್ರಿಕಾಗೋಷ್ಠಿಗೆ ಎರಡು ಮಲಯಾಳಂ ಸುದ್ದಿ ವಾಹಿನಿಗಳನ್ನು ನಿರ್ಬಂಧಿಸಿದ್ದಾರೆ.
ಈ ಕುರಿತು ಮಾತನಾಡಿದ ಆರಿಫ್, “ನಾನು ಮಾಧ್ಯಮವನ್ನು ಅತ್ಯಂತ ಮುಖ್ಯವೆಂದು ಪರಿಗಣಿಸಿದ್ದೇನೆ. ಯಾವಾಗಲು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದೇನೆ. ಆದರೆ ಮುಖವಾಡ ಧರಿಸಿರುವ ಮಾಧ್ಯಮವನ್ನು ನಾನು ಪ್ರೋತ್ಸಾಹಿಸುವುದಿಲ್ಲ,’ ಎಂದರು.
“ಮಲಯಾಳಂ ಚಾನಲ್ಗಳಾದ ಕೈರಾಲಿ ಮತ್ತು ಮೀಡಿಯಾ ಒನ್ನ ವರದಿಗಾರರು ಪತ್ರಿಕಾಗೋಷ್ಠಿಯಿಂದ ಹೊರಹೋಗಬಹುದು. ಇವು ಮಾಧ್ಯಮವಲ್ಲ. ಮುಖವಾಡ ಧರಿಸಿದ ಮಾಧ್ಯಮ. ಇವು ಮೂಲತಃ ರಾಜಕೀಯ ಸಂಸ್ಥೆಗಳು. ಹೀಗಾಗಿ ನಾನು ಇವುಗಳಿಗೆ ಪ್ರತಿಕ್ರಿಯಿಸುವುದಿಲ್ಲ,’ ಎಂದು ಖಾರವಾಗಿ ಹೇಳಿದರು.
ಅ.24ರಂದು ಈ ಎರಡು ಚಾನೆಲ್ಗಳು ಸೇರಿದಂತೆ ಒಟ್ಟು ನಾಲ್ಕು ಮಲಯಾಳಂ ಚಾನಲ್ಗಳನ್ನು ಸುದ್ದಿಗೋಷ್ಠಿಗೆ ಹಾಜರಾಗದಂತೆ ಕೇರಳ ರಾಜಭವನ ನಿಷೇಧಿಸಿತ್ತು. ಕೈರಾಲಿ ನ್ಯೂಸ್ ಚಾನೆಲ್ ಮಾಲೀಕ ಸಿಪಿಎಂ ನಾಯಕರಾಗಿದ್ದಾರೆ. ಅಲ್ಲದೇ ಸೆಕ್ಯೂರಿಟಿ ಕ್ಲಿಯರೆನ್ಸ್ ಸಮಸ್ಯೆ ಹಿನ್ನೆಲೆಯಲ್ಲಿ ಮೀಡಿಯಾ ಒನ್ ಚಾನೆಲ್ ಕೇಂದ್ರ ಸರ್ಕಾರದಿಂದ ನಿಷೇಧ ಎದುರಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral News: ಕಳ್ಳತನಕ್ಕೆಂದು ಮನೆಗೆ ನುಗ್ಗಿ ಎಸಿಯ ಗಾಳಿಗೆ ಗಾಢವಾಗಿ ನಿದ್ರಿಸಿದ ಕಳ್ಳ.!
ಮದುವೆ ಮೆರವಣಿಗೆಯ ಟ್ರಾಕ್ಟರ್ ಟ್ರಾಲಿ ಪಲ್ಟಿ: ನಾಲ್ವರು ಮಕ್ಕಳು ಸೇರಿದಂತೆ 13 ಮಂದಿ ದುರ್ಮರಣ
Highway toll ಹೆಚ್ಚಳ; ಲೋಕಸಭೆ ಚುನಾವಣೆ ಹಿನ್ನೆಲೆ ಮುಂದೂಡಿಕೆಯಾಗಿದ್ದ ದರ ಏರಿಕೆ
Exit poll ವರದಿಗಳ ಬೆನ್ನಲ್ಲೇ ಷೇರು ಮಾರುಕಟ್ಟೆ ಏರಿಕೆ ನಿರೀಕ್ಷೆ!
Again ವಿಮಾನಕ್ಕೆ ಬಾಂಬ್ ಬೆದರಿಕೆ: ವಾರದಲ್ಲಿ 4ನೇ ಘಟನೆ