ಅಭಿಷೇಕ್ ಗೆ ನಾಯಕಿಯಾದರಾ ಕಾಂತಾರದ ಲೀಲಾ? ಏನಿದು ಹೊಸ ಸುದ್ದಿ
Team Udayavani, Nov 19, 2022, 10:55 AM IST
ಸದ್ಯ ದಕ್ಷಿಣದಿಂದ ಉತ್ತರದವರೆಗೂ ಎಲ್ಲರ ಬಾಯಲ್ಲೂ ಇರುವ ಹೆಸರು “ಕಾಂತಾರ’. ಕನ್ನಡ ಚಿತ್ರವೊಂದು ತನ್ನ ಕಂಟೆಂಟ್ನಿಂದ ಇಡೀ ದೇಶದ ಜನರ ಮನ ಗೆದ್ದಿದೆ. ಈ ಚಿತ್ರದ ಮೂಲಕ ಕನ್ನಡಕ್ಕೆ ಭರವಸೆಯ ನಟಿಯೂ ದೊರೆತಿದ್ದಾರೆ. ಅದು ಸಪ್ತಮಿ ಗೌಡ. “ಕಾಂತಾರ’ ಮೂಲಕ ಪ್ರೇಕ್ಷಕರ ಮನ ಕದ್ದ ಮೂಗುತ್ತಿ ಸುಂದರಿ ಸಪ್ತಮಿ ಗೌಡ ಈಗ ಹೊಸ ಸಿನಿಮಾ ಒಪ್ಪಿಕೊಂಡಿರುವ ಸುದ್ದಿಯೊಂದು ಸಿನಿ ಅಂಗಳದಿಂದ ಕೇಳಿಬಂದಿದೆ.
ಅದು “ಕಾಳಿ’. ಅಭಿಷೇಕ್ ಅಂಬರೀಶ್ ನಾಯಕರಾಗಿರುವ “ಕಾಳಿ’ ಚಿತ್ರವನ್ನು ಕೃಷ್ಣ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ಕೂಡಾ ರಿಲೀಸ್ ಆಗಿದೆ.
ಇದನ್ನೂ ಓದಿ:ಮುಂಬೈ-ಗೋವಾ ಹೆದ್ದಾರಿ ಬದಿ ನಿಲ್ಲಿಸಿದ್ದ ಐಷಾರಾಮಿ ಕಾರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
ಈಗ ಈ ಸಿನಿಮಾದ ನಾಯಕಿಯ ಕುರಿತು ಅಪ್ ಡೇಟ್ ವೊಂದು ಹೊರಬಿದ್ದಿದೆ. ಸಪ್ತಮಿ ಗೌಡ “ಕಾಳಿ’ಗೆ ನಾಯಕಿಯಾಗಿದ್ದಾರಂತೆ. ಹೀಗೊಂದು ಸುದ್ದಿ ಚಿತ್ರರಂಗದಲ್ಲಿ ಕೇಳಿಬರುತ್ತಿದೆ. ಆದರೆ, ಚಿತ್ರತಂಡವಾಗಲೀ, ಸಪ್ತಮಿಯಾಗಲೀ ಅಧಿಕೃತವಾಗಿ ಹೇಳಿಕೊಂಡಿಲ್ಲ. “ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಮೂಲಕ ನಾಯಕಿಯಾಗಿ ಎಂಟ್ರಿಕೊಟ್ಟ ಸಪ್ತಮಿ “ಕಾಂತಾರ’ ನಂತರ ಸಾಕಷ್ಟು ಅವಕಾಶಗಳು ಬರುತ್ತಿವೆ.
“ಪೈಲ್ವಾನ್’ ಚಿತ್ರದ ನಂತರ ಕೃಷ್ಣ ನಿರ್ದೇಶಿಸುತ್ತಿರುವ ಸಿನಿಮಾ “ಕಾಳಿ’. ಈ ಚಿತ್ರವನ್ನು ಸ್ವಪ್ನ ಕೃಷ್ಣ ನಿರ್ಮಿಸುತ್ತಿದ್ದಾರೆ. ಹೆಸರಿಗೆ ತಕ್ಕಂತೆ “ಕಾಳಿ’ ಆ್ಯಕ್ಷನ್ ಸಿನಿಮಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ