ಮೂವರು ಶೂಟರ್ಗಳು ನನ್ನನ್ನು ಮುಗಿಸಲು ಮುಂದಾಗಿದ್ದರು: ಇಮ್ರಾನ್ ಖಾನ್
ಮತ್ತೆ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿ ಸುದ್ದಿಯಾದ ಪಾಕ್ ಮಾಜಿ ಪ್ರಧಾನಿ
Team Udayavani, Nov 27, 2022, 5:12 PM IST
ರಾವಲ್ಪಿಂಡಿ : ಪಾಕಿಸ್ಥಾನದ ಉಚ್ಚಾಟಿತ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಈ ತಿಂಗಳ ಆರಂಭದಲ್ಲಿ ಪೂರ್ವ ನಗರವಾದ ವಜೀರಾಬಾದ್ನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ತನ್ನ ಮೇಲೆ ದಾಳಿಯಲ್ಲಿ ಮೂವರು ಶೂಟರ್ಗಳು ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ.
ದಾಳಿಯ ನಂತರ ನಡೆದ ನಡೆದ ಸೇನೆಯ ಪ್ರಧಾನ ಕಚೇರಿಯನ್ನು ಹೊಂದಿರುವ ರಾವಲ್ಪಿಂಡಿ ಗ್ಯಾರಿಸನ್ ಸಿಟಿಯಲ್ಲಿ ಶನಿವಾರ ರಾತ್ರಿ ತನ್ನ ಪಕ್ಷದ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಖಾನ್, ಈ ಹಿಂದೆ ಗುರುತಿಸಲಾದ ಇಬ್ಬರು ದಾಳಿಕೋರರು, ನನ್ನ ಮೇಲೆ ಮತ್ತು ಇತರ ಪಿಟಿಐ ನಾಯಕರ ಮೇಲೆ ಗುಂಡು ಹಾರಿಸಿದರು. ಎರಡನೆಯ ಶೂಟರ್ ಕಂಟೇನರ್ ಮುಂಭಾಗದಲ್ಲಿ ಗುಂಡು ಹಾರಿಸಿದ. ಮೂರನೇ ದಾಳಿಕೋರ ಮೊದಲ ಬಂದೂಕುಧಾರಿಯನ್ನು ಮುಗಿಸಿದ ಎಂದು ಹೇಳಿದ್ದಾರೆ.
70 ವರ್ಷದ ಖಾನ್, ಈ ಮೂರನೇ ಶೂಟರ್ ನಿಜವಾಗಿಯೂ ರ್ಯಾಲಿಯಲ್ಲಿ ಒಬ್ಬ ವ್ಯಕ್ತಿಯನ್ನು ಮುಗಿಸಲು ಪ್ರಯತ್ನಿಸುತ್ತಿರುವಾಗ ದಾಳಿಕೋರ ಅಂತ್ಯಗೊಂಡಿದ್ದಾನೆ ಎಂದು ಹೇಳಿದ್ದಾರೆ.
ದಾಳಿಯ ಒಂದು ದಿನದ ನಂತರ ಲಾಹೋರ್ನ ಶೌಕತ್ ಖಾನುಮ್ ಆಸ್ಪತ್ರೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಖಾನ್, ಇಬ್ಬರು ಶೂಟರ್ಗಳು ತಮ್ಮ ಬಲಗಾಲಿಗೆ ನಾಲ್ಕು ಗುಂಡುಗಳನ್ನು ಹೊಡೆದಿದ್ದಾರೆ ಎಂದು ಹೇಳಿದ್ದರು.
ಮೊದಲ ಪ್ರತಿಭಟನಾ ಮೆರವಣಿಗೆ ವಿಶ್ವಾದ್ಯಂತ ಮುಖ್ಯ ಸುದ್ದಿಯಾಗಿದ್ದು, ಪಾಕ್ ನ ಎಲ್ಲಾ ಅಸೆಂಬ್ಲಿಗಳಿಂದ ತನ್ನ ಪಕ್ಷದ ಶಾಸಕರನ್ನು ಹಿಂತೆಗೆದುಕೊಳ್ಳುವ ಇಮ್ರಾನ್ ಖಾನ್ ಅವರ ನಿರ್ಧಾರವು ಮತ್ತೊಮ್ಮೆ ಅವರ ರಾಜಕೀಯ ನಡೆಗಳನ್ನು ಕೇಂದ್ರೀಕರಿಸಿದೆ. ಸುಮಾರು ಮೂರು ವಾರಗಳ ಹಿಂದೆ ನಡೆದ ಘಟನೆಯ ಹೊರತಾಗಿಯೂ ಭಾರಿ ಜನಸಮೂಹವನ್ನು ಸೆಳೆಯಲು ಸಾಧ್ಯವಾಯಿತು. ಮಾಜಿ ಪ್ರಧಾನಿ ಇಸ್ಲಾಮಾಬಾದ್ಗೆ ತಮ್ಮ ಲಾಂಗ್ ಮಾರ್ಚ್ ಅನ್ನು ಮೊಟಕುಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಪಾಕಿಸ್ಥಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಇಮ್ರಾನ್ ಖಾನ್ ಅಧ್ಯಕ್ಷ ನವೆಂಬರ್ 3 ರಂದು ಪಂಜಾಬ್ನ ವಜೀರಾಬಾದ್ ಪ್ರದೇಶದಲ್ಲಿ ಸರಕಾರದ ವಿರುದ್ಧ ಕ್ಷಿಪ್ರ ಚುನಾವಣೆಗೆ ಒತ್ತಾಯಿಸಿ ಮೆರವಣಿಗೆಯನ್ನು ಮುನ್ನಡೆಸುತ್ತಿದ್ದಾಗ ಬಂದೂಕುಧಾರಿಗಳು ಅವರ ಮೇಲೆ ಗುಂಡು ಹಾರಿಸಿದಾಗ ಬಲಗಾಲಿಗೆ ನಾಲ್ಕು ಗುಂಡು ತಗುಲಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ