ಬೆಳಿಗ್ಗೆ ಶಾಲೆ ಹೋಗೋ ಹೊತ್ತಿಗಾದ್ರೂ ಒಂದು ಬಸ್ ಬಿಡ್ರಿ… ಸಂಜೆ ಬೇಕಾದ್ರು ನಡ್ಕೊಂಡು ಹೋಗ್ತೀವಿ..
ಅಧಿಕಾರಿಗಳಲ್ಲಿ ಮನವಿ ಮಾಡಿದ ಶಾಲಾ ವಿದ್ಯಾರ್ಥಿಗಳು
Team Udayavani, Nov 30, 2022, 12:10 PM IST
ಕುಷ್ಟಗಿ: ಬೆಳಗ್ಗೆ ಶಾಲೇ ಹೋಗೋ ಹೊತ್ತಿಗೆ ಒಮ್ಮೆ ನಮ್ಮೂರಿಗೆ ಬಸ್ ಬಿಡ್ರೀ… ಸಂಜೆ ಶಾಲೆ ಬಿಟ್ ಮೇಲೆ ಬೇಕಾದ್ರು ನಾವು ಕಾಲ್ನಡಿಗೆಯಲ್ಲೇ ನಮ್ಮೂರಿಗೆ ಹೋಗ್ತೀವಿ.. ಇದು ಕುಷ್ಟಗಿ ತಾಲೂಕಿನ ವಣಗೇರಾ ಗ್ರಾಮದ ವಿದ್ಯಾರ್ಥಿಗಳ ಆಳಲು.
ವಣಗೇರಾ ಗ್ರಾಮದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು 5 ಕಿ.ಮೀ. ಅಂತರದ ತಳವಗೇರಾ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾರೆ. ವಣಗೇರಾದಿಂದ ತಳವಗೇರಾ ಮಾರ್ಗವಾಗಿ ರಸ್ತೆ ಚನ್ನಾಗಿದ್ದರೂ ಈ ಒಳ ಮಾರ್ಗದಲ್ಲಿ ಒಂದೇ ಒಂದು ಬಸ್ ಸೇವೆ ಇಲ್ಲ.
ಬೆಳಗ್ಗೆ ಕುಷ್ಟಗಿಯಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ವಣಗೇರಾ ವರೆಗೆ ಬಂದು ಮತ್ತೆ ಅದೇ ಮಾರ್ಗವಾಗಿ ಕುಷ್ಟಗಿಗೆ ಹೋಗುತ್ತದೆ. ಸದ್ಯ ಈ ಬಸ್ಸನ್ನೇ ವಣಗೇರಾ ಮಾರ್ಗವಾಗಿ ತಳವಗೇರಾ ಶಾಲೆಯ ತನಕ ಬಂದರೆ ಸಂಜೆ ಶಾಲೆ ಬಿಡುವ ಸಮಯಕ್ಕೆ ತಳವಗೇರಾ ದಿಂದ ಕುಷ್ಟಗಿಗೆ ಪ್ರಯಾಣಿಸಿದರೆ ಮಕ್ಕಳಿಗೆ ಸಹಾಯವಾಗುತ್ತದೆ ಎಂದು ಮನವಿ ಮಾಡಿದ್ದರು. ಆದರೆ ಈ ಮನವಿಗೆ ಘಟಕ ವ್ಯವಸ್ಥಾಪಕರು ಸ್ಪಂಧಿಸುತ್ತಿಲ್ಲ ಹೀಗಾಗಿ ಬೆಳಗ್ಗೆ ಶಾಲಾ ಆರಂಭದ ವೇಳೆಗೆ ಕುಷ್ಟಗಿ, ವಣಗೇರಾ ಬಸ್ ಸೇವೆಯನ್ನು ತಳವಗೇರಾಕ್ಕೆ ವಿಸ್ತರಿಸಿರಿ ಸಂಜೆ ಶಾಲೆ ಬಿಟ್ಟ ಬಳಿಕ ವಣಗೇರಾಕ್ಕೆ 5 ಕಿ.ಮೀ. ನಡೆದು ಬರುತ್ತೇವೆ ಎಂದು ಕೇಳಿಕೊಂಡರು ಘಟಕ ವ್ಯವಸ್ಥಾಪಕ ಸ್ಪಷ್ಟ ಭರವಸೆ ನೀಡಿಲ್ಲ ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಉಮೇಶ ಯಾದವ್ ತಿಳಿಸಿದ್ದಾರೆ.
ಇದನ್ನೂ ಓದಿ: ಫಲಿತಾಂಶ ಬರೋವರೆಗೂ ಕಾದು ನೋಡಿ…ಗುಜರಾತ್ ನಲ್ಲಿ AAP ಖಾತೆಯನ್ನೇ ತೆರೆಯಲ್ಲ: ಶಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ