ಬೋನಿಗೆ ಬಿತ್ತು ಸಿಕ್ಕಿತ್ತು ಕೆಆರ್ ಎಸ್ ಚಿರತೆ: ಎರಡು ತಿಂಗಳ ಪ್ರಯತ್ನ ಕೊನೆಗೂ ಸಕ್ಸಸ್
Team Udayavani, Dec 28, 2022, 11:41 AM IST
ಮಂಡ್ಯ: ಕಳೆದ ಎರಡು ತಿಂಗಳಿನಿಂದ ವಿಶ್ವ ವಿಖ್ಯಾತ ಕೆಆರ್ ಎಸ್ ಜಲಾಶಯದ ಬೃಂದಾವನದಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.
ಕಳೆದ ತಿಂಗಳು ಜಲಾಶಯದ ಮೇಲೆ ಹಾಗೂ ಬೃಂದಾವನದ ದಕ್ಷಿಣ ಗೇಟ್ ನಲ್ಲಿ ಕಾಣಿಸಿಕೊಂಡಿದ್ದ ಚಿರತೆ ಆತಂಕ ಸೃಷ್ಟಿಸಿತ್ತು.
ಚಿರತೆ ಸೆರೆಗೆ ಅರಣ್ಯ ಇಲಾಖೆಯವರು ಕೂಬಿಂಗ್, ಸಿಸಿಕ್ಯಾಮೆರಾ ಹಾಗೂ ಎಂಟು ಕಡೆ ಬೋನು ಇರಿಸಿದ್ದರೂ ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಣ್ತಪ್ಪಿಸಿಕೊಂಡು ಚಳ್ಳೆ ತಿನ್ನಿಸಿ ಆಗಾಗ್ಗೆ ಕಾಣಿಸಿಕೊಂಡು ಪ್ರವಾಸಿಗರಿಗೆ ಭಯ ಹುಟ್ಟಿಸಿತ್ತು.
ಇದನ್ನೂ ಓದಿ:ಸಲ್ಮಾನ್ ಖಾನ್ ಬರ್ತ್ ಡೇ ವಿಶ್ ಗೆ ನೂಕುನುಗ್ಗಲು: ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್
ಚಿರತೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಬೃಂದಾವನ ಬಂದ್ ಮಾಡಿದ್ದರಿಂದ ಸುಮಾರು 75ಲಕ್ಷ ರೂ. ಹೆಚ್ಚು ನಷ್ಟ ಸಂಭವಿಸಿತ್ತು.
ಬುಧವಾರ ಮುಂಜಾನೆ ಬೃಂದಾವನ ಬಳಿ ಇರಿಸಿದ್ದ ಬೋನಿಗೆ ಬಿದ್ದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಕಾಡಿಗೆ ಬಿಡಲು ಕ್ರಮ ವಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ