ಮೊಬೈಲ್ ಟವರ್ ಏರಿ ವ್ಯಕ್ತಿಯ ರದ್ದಾಂತ: ಕೆಳಗಿಳಿಸಲು ಅಗ್ನಿ ಶಾಮಕ ಸಿಬ್ಬಂದಿ ಸುಸ್ತೋ ಸುಸ್ತು
ಬಿರಿಯಾನಿ, ಸಿಗರೇಟ್ ಬೇಕೆಂದ ವ್ಯಕ್ತಿ...
Team Udayavani, Jan 17, 2023, 7:56 PM IST
ಧಾರವಾಡ : ಇಲ್ಲಿಯ ಜ್ಯುಬಲಿ ವೃತ್ತದಲ್ಲಿ ಮೊಬೈಲ್ ಟವರ್ ಏರಿ ಕುಳಿತಿದ್ದ ಅಪರಾಧ ಹಿನ್ನಲೆವುಳ್ಳ ವ್ಯಕ್ತಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಒಳಗೊಂಡ ತಂಡವು ಸತತ 3 ತಾಸು ಕಾರ್ಯಾಚರಣೆ ಕೈಗೊಂಡು ಸುರಕ್ಷಿತವಾಗಿ ಕೆಳಗಡೆ ಇಳಿಸಿದ ಘಟನೆ ಮಂಗಳವಾರ ನಡೆದಿದೆ.
ಇಲ್ಲಿನ ಮಾಳಮಡ್ಡಿಯ ಜಾವೇದ ಎಂಬಾತ ಮಧ್ಯಾಹ್ನದ ಹೊತ್ತಿಗೆ ಎತ್ತರ ಮೊಬೈಲ್ ಟವರ್ ಏರಿ ಕುಳಿತು ಬಿಟ್ಟಿದ್ದಾನೆ. ಈ ವಿಷಯ ತಿಳಿದು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಬಂದಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಆರಂಭದಲ್ಲಿ ಮಾನಸಿಕ ಅಸ್ವಸ್ಥ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿತ್ತು. ಆದರೆ ರಕ್ಷಣಾ ಸಿಬ್ಬಂದಿ, ಟವರ್ ಏರಿ ಜಾವೇದನೊಂದಿಗೆ ಸಂವಹನ ಮಾಡಿದ ಬಳಿಕ ಜಾವೇದನ ಗುರುತು ಪತ್ತೆಯಾಗಿದೆ.
ಇದಕ್ಕೂ ಮುನ್ನ ರಕ್ಷಣೆ ಕಾರ್ಯದಲ್ಲಿ ಟವರ್ ಎರಲು ಮುಂದಾದ ಸಿಬ್ಬಂದಿಗೆ ಜಾವೇದ ತನ್ನ ಕೈಯಲ್ಲಿದ್ದ ಚಿಕ್ಕ ಕಬ್ಬಿಣದ ಸಲಾಕೆಯಿಂದ ಹೊಡೆಯುವ ಬೆದರಿಕೆ ಹಾಕಿದ್ದ. ಆದರೆ ಆತನ ಮನವೊಲಿಸಿದ ಸಿಬ್ಬಂದಿ, ಆತನೊಂದಿಗೆ ಸಂವಹನ ಮಾಡಿದಾಗ ಕೆಲ ಬೇಡಿಕೆ ಇಟ್ಟಿದ್ದಾನೆ.
ಸಿಬ್ಬಂದಿ ಕೊಟ್ಟ ನೀರು ಕುಡಿದ ಜಾವೇದ, ಬಿರಿಯಾನಿ ಕೊಡುವಂತೆ ಹೇಳಿದ್ದಾನೆ. ಅದಕ್ಕೆ ಸಮ್ಮತಿಸಿ ಬಿರಿಯಾನಿ ಸಹ ತರಿಸಿ, ನೀಡಿದರೂ ಅದನ್ನು ತಿನ್ನದೇ ಬಿಸಾಡಿದ್ದಾನೆ. ಇದಲ್ಲದೇ ಜಿಲ್ಲಾ ನ್ಯಾಯಾಧೀಶರು ಬರುವಂತೆ ಬೇಡಿಕೆ ಇಟ್ಟಿದ್ದು, ಇದಕ್ಕೂ ಸಮ್ಮತಿಸಿದಂತೆ ಹೇಳಿದ ರಕ್ಷಣಾ ಸಿಬ್ಬಂದಿಗಳು, ಕೊನೆಗೆ ಜಾವೇದನಿಗೆ ಆತನ ಪತ್ನಿ ನೊಂದು ಅಳುತ್ತಿರುವುದಾಗಿ ಹೇಳಿ ಕೆಳಗಡೆ ಇಳಿಯುವಂತೆ ಹೇಳಿದ್ದಾರೆ. ಕೊನೆಗೆ ಸಿಗರೇಟ್ ಪ್ಯಾಕೇಟ್ ಕೇಳಿದ ಜಾವೇದನಿಗೆ ಅದನ್ನೂ ಪೂರೈಸಿದ್ದು, ಟವರ್ ಮೇಲೆ ಕುಳಿತೇ ಒಂದು ಸಿಗರೇಟ್ ಸೇದಿ, ಆ ಬಳಿಕ ಕೆಳಗಡೆ ಇಳಿದಿದ್ದಾರೆ.
3 ತಾಸಿಗೂ ಹೆಚ್ಚು ಸಮಯ ಬಿಸಿಲಿನಲ್ಲಿ ಟವರ್ನ ತುತ್ತತುದಿಯ ಮೇಲೆ ಕುಳಿತಿದ್ದರಿಂದ ಬಳಲಿದ್ದ ಆತನನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯತ್ತ ಪೊಲೀಸರ ಪಡೆ ಕರೆದೊಯ್ದಿದೆ.
ಇದನ್ನೂ ಓದಿ : ಕೆಎಂಎಫ್ ವೀಲಿನಕ್ಕೆ ಮುಂದಾದರೆ ರೈತರ ಜೊತೆ ಸೇರಿ ಉಗ್ರ ಹೋರಾಟ : ಕೆಸಿಆರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
MUST WATCH
ಹೊಸ ಸೇರ್ಪಡೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ