ಅಂಜನಾದ್ರಿ ಅಭಿವೃದ್ಧಿ ಕಾರ್ಯಕ್ಕೆ ಅಮಿತ್ ಶಾರಿಂದ ಚಾಲನೆ : ಸಚಿವ ಆನಂದ ಸಿಂಗ್

ಹಂಪಿ ಉತ್ಸವ ಚಾಲನೆಗೆ ಸಿಎಂ ಬೊಮ್ಮಾಯಿ

Team Udayavani, Jan 26, 2023, 5:08 PM IST

1-sadsadas

ಕೊಪ್ಪಳ: ಅಂಜನಾದ್ರಿಯ ಅಭಿವೃದ್ಧಿ ಕಾರ್ಯಗಳಿಗೆ ಫೆ.15 ರಂದು ಅಡಿಗಲ್ಲು ನೆರವೇರಿಸಲು ಸಿದ್ದತೆ ನಡೆಸಿದ್ದು, ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತನಾಡಿದ್ದೇವೆ. ಸಿಎಂ ದಿನಾಂಕ ಅಧೀಕೃತ ಮಾಡಬೇಕಾಗಿದೆ. ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಆಹ್ವಾನಿಸಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಕೊಡಿಸಬೇಕೆನ್ನುವ ಚಿಂತನೆಯು ಇದೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ ವಿಚಾರ ನನಗೆ ಗೊತ್ತಿಲ್ಲ. ಅವರು ದೊಡ್ಡ ನಾಯಕರು. ಅಮಿತ್ ಶಾ ಅವರು ಬರುವ ಸಾಧ್ಯತೆಯಿದೆ. ಸಿಎಂ ಅವರು ಈ ಕುರಿತು ಹೇಳಿದ್ದಾರೆ.ಒಂದು ವೇಳೆ ಶಾ ಅವರು ಬರದಿದ್ದರೆ ಸಿಎಂ ಅವರಿಂದ ಚಾಲನೆ ಕೊಡಿಸಲಿದ್ದೇವೆ. ಅಂಜಿನಾದ್ರಿ ಟೆಂಡರ್ ಕರೆಯುವ ಜೊತೆಗೆ ರೂಪ್ ವೇ, ಪ್ರದಕ್ಷಣ ಪಥ, ಶೌಚಾಲಯ, ಪಾರ್ಕಿಂಗ್ ಸೇರಿ ಇತರೆ ಕಾರ್ಯಗಳಿಗೆ ಚಾಲನೆ ನೀಡಲಿದ್ದೇವೆ. ನಂದಿ ಬೆಟ್ಟಕ್ಕೂ ರೂಪ್ ವೇ ನಿರ್ಮಾಣಕ್ಕೂ ಒಪ್ಪಂದ ಆಗಿದೆ. ಅದಕ್ಕೂ ಕೇಂದ್ರ ನಾಯಕರ ಆಹ್ವಾನಕ್ಕೆ ಸಿಎಂ ಅವರ ಗಮನಕ್ಕೆ ತಂದಿದ್ದೇವೆ ಎಂದರು.

ಅಂಜನಾದ್ರಿಗೆ ಕೇಬಲ್ ಕಾರ್ ಕುರಿತಂತೆ ಚರ್ಚೆಯಾಗಿದೆ. ಇದೊಂದು ಒಳ್ಳೆಯ ಯೋಚನೆ. ನಿತಿನ್ ಗಡ್ಕರಿ ಅವರು ದೂರದೃಷ್ಟಿಯ ನಾಯಕರಾಗಿದ್ದಾರೆ. ಎಲ್ಲವೂ ಹೇಳಿದಾಕ್ಷಣ ಮಾಡಲು ಆಗಲ್ಲ. ನುರಿತ ತಜ್ಞರನ್ನು ಆಹ್ವಾನಿಸಿ ಕೇಬಲ್ ಕಾರ್ ನಿರ್ಮಾಣದ ಕುರಿತು ಅಧ್ಯಯನ ನಡೆಸಲಿದ್ದೇವೆ. ಈ ಕೇಬಲ್ ಕಾರ್ ಅನ್ನು ಮುಂದೆ ಹಂಪಿಗೆ ಸಂಪರ್ಕವನ್ನ ಕಲ್ಪಿಸುವಂತೆಯೂ ಸಲಹೆ ನೀಡಿದ್ದಾರೆ. ಪ್ರಾಚ್ಯ ವಸ್ತು ಇಲಾಖೆಯು ಇದಕ್ಕೆಲ್ಲಾ ಅನುಮತಿ ಕೊಡಬೇಕಾಗುತ್ತದೆ. ಇದೆಲ್ಲ ಅಧ್ಯಯನ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಹಂಪಿ ಗೋಪುರದ ಬಳಿ ಬೆಂಕಿಗೆ ಆಹುತಿಯಾದ ೯೦ ಸುಟ್ಟ ಮನೆಗಳಿಗೆ ಪುನರ್‌ವಸತಿ ಕಲ್ಪಿಸಲು ಚಿಂತನೆ ನಡೆದಿದೆ. ಕೇಂದ್ರ, ರಾಜ್ಯದ ಸಹಯೋಗದಲ್ಲಿ ಪುನರ್ ವಸತಿ ವೆಚ್ಚ ಭರಿಸುವ ಚಿಂತನೆಯಿದೆ. ಆದರೆ ನಿಖರವಾಗಿ ಏಷ್ಟೆನ್ನುವುದು ಈಗಲೇ ಹೇಳಲು ಸಾಧ್ಯವಿಲ್ಲ. ಜನತಾ ಪ್ಲಾಟ್‌ನಿಂದ ನಿಂತು ನೋಡಿದರೆ ಹಂಪಿ ಗೋಪುರ ನೋಡಲು ಮನಮೋಹಕ ಎಂದೆನಿಸುತ್ತದೆ. ಹಾಗಾಗಿ ಅಲ್ಲಿನ ೯೦ ಕುಟುಂಬಗಳು ಬೇರೆಡೆ ಪುನರ್ ವಸತಿಗೆ ಒಪ್ಪಿಗೆ ಸೂಚಿಸಿದ್ದಾರೆ. ಪ್ರಾಚ್ಯವಸ್ತು ಇಲಾಖೆ ಒಪ್ಪಿದೆ. ವಿಶೇಷ ಜೋನ್‌ನಲ್ಲಿ ಜಮೀನು ಖರೀದಿಸಿ ಆ ಕುಟುಂಬಕ್ಕೆ ನಿವೇಶನ ಕೊಡುವ ಯೋಜನೆಯಿದೆ.ಹಂಪಿಗೆ ಕೇಬಲ್ ಕಾರ್ ನಿರ್ಮಾಣಕ್ಕೂ ಮೊದಲು ಪ್ರಾಚ್ಯವಸ್ತು ಇಲಾಖೆ ಗಮನಕ್ಕೆ ತರಲು ಅವರು ಹೇಳಿದ್ದಾರೆ ಎಂದರು.

ಮಾರ್ಚ್ ಅಂತ್ಯಕ್ಕೆ ಚುನಾವಣಾ ಅಧಿಸೂಚನೆ ಸಾಧ್ಯತೆ
ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ವಿಧಾನ ಸಭಾ ಚುನಾವಣಾ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಅದರೊಳಗೆ ಎಲ್ಲ ಕಾಮಗಾರಿಗಳಿಗೆ ಚಾಲನೆ ಕೊಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಹಂಪಿ ಉತ್ಸವ ಚಾಲನೆಗೆ ಸಿಎಂ ಬೊಮ್ಮಾಯಿ
ಹಂಪಿ ಉತ್ಸವ ಸಂಭ್ರಮದಿಂದ ಆಚರಣೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಜ.27 ರಂದು ಉತ್ಸವಕ್ಕೆ ಚಾಲನೆ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಅವರು ಆಗಮಿಸಲಿದ್ದಾರೆ. ನಾಲ್ಕು ಮುಖ್ಯ ವೇದಿಕೆಯಲ್ಲಿ ಉತ್ಸವವು ಸಂಭ್ರಮ ಸಡಗರದಿಂದ ನಡೆಯಲಿದೆ. ರಾಜ್ಯದಲ್ಲಿನ ಉತ್ಸವಗಳನ್ನು ಗಮನಿಸಿದ್ದೇನೆ. ಬೇರೆ ಉತ್ಸವಕ್ಕೂ ನಮ್ಮ ಉತ್ಸವಗಳಿಗೂ ಕೆಲ ವ್ಯತ್ಯಾಸಗಳಿವೆ. ಹಂಪಿ ಉತ್ಸವ ಅತ್ಯಂತ ವೈಭವ ಮಾಡಲು ನಿರ್ಧರಿಸಿದ್ದೇವೆ ಎಂದರು.

ಹಂಪಿಯಲ್ಲಿ ಸ್ಥಳದ ಕೊರತೆಯಿದೆ. ಪಾರ್ಕಿಂಗ್ ಸಮಸ್ಯೆ ಎದುರಾಗಿದ್ದು ನೋಡಿದ್ದೇವೆ. ಹಂಪಿಯಲ್ಲಿ ಎದುರು ಬಸವಣ್ಣ, ಗಾಯಿತ್ರಿ ಪೀಠ, ಸಾಸಿವೆಕಾಳು ಗಣಪತಿ, ಆನೆಸಾಲು ಒಂಟೆ ಸಾಲು ಸ್ಥಳದಲ್ಲಿ ಉತ್ಸವ ಆಚರಣೆ ಮಾಡಲು ಮುಂದಾಗಿದೆ. ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಒಂಬತ್ತು ದಿನ ನಡೆಯಲಿದೆ ಎಂದರು.

ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ
ಉತ್ಸವಕ್ಕೆ ಸಿನಿಮಾ ತಾರೆಗಳನ್ನು ಆಹ್ವಾನಿಸಿ ಆಕರ್ಷಣೆ ಮಾಡಲು ಮುಂದಾಗಿಲ್ಲ. ಸ್ಥಳೀಯ ಕಲಾವಿದರನ್ನು ಆಹ್ವಾನಿಸಿ ಅವರಿಗೆ ವೇದಿಕೆ ನೀಡಿ ಜನರ ಆಕರ್ಷಣೆ ಮಾಡಲು ಮುಂದಾಗಿದೆ. ನಮ್ಮ ಸಂಸ್ಕೃತಿ, ಕಲೆ, ಕಲಾವಿದರಿಗೆ ಅವಕಾಶವನ್ನು ನೀಡಿ ಈ ಬಾರಿಯ ಉತ್ಸವದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದೇವೆ. ಗಾಯಕರಾದ ಅರ್ಜುನ್ ಜನ್ಯಾ, ವಿಜಯ ಪ್ರಕಾಶ ಸೇರಿ ನಾಲ್ವರು ಮಾತ್ರ ಆಹ್ವಾನ ಮಾಡಿದ್ದೇವೆ. ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ದೀಪಾಲಂಕಾರ ಮಾಡಿದ್ದೇವೆ.

ನಾಯಕ ಎಂ.ಪಿ.ಪ್ರಕಾಶ ಅವರ ಶ್ರಮದಿಂದ ಪುರಂದರ ದಾಸರ ಸಣ್ಣ ಮಂಟಪದಲ್ಲಿ ಮೊದಲು ಹಂಪಿ ಉತ್ಸವವು ನಡೆಯುತ್ತಿದ್ದವು. ಈಗ ದೊಡ್ಡದಾಗಿ ಮಾಡಲಾಗುತ್ತಿದೆ. ನವರಾತ್ರಿ ಮೈಸೂರು ದಸರಾ ನಡೆದ ಬಳಿಕ ಹಂಪಿ ಉತ್ಸವ ಮಾಡಬೇಕು ಎನ್ನುವ ಅಭಿಪ್ರಾಯ ಬಂದಿದೆ. ಮೈಸೂರು ನೋಡಲು ಬರುವ ಜನರು ನಂತರದಲ್ಲಿ ಹಂಪಿಗೆ ಬರುತ್ತಾರೆ. ಇದರಿಂದ ಒಂದು ಸರ್ಕ್ಯೂಟ್ ಆಗಲಿದೆ. ಈ ಕುರಿತಂತೆಯೂ ಚರ್ಚೆ ಮಾಡಲಾಗುತ್ತಿದೆ ಎಂದರು

ಆನೆಗೊಂದಿ, ಕೊಪ್ಪಳ ರಜತ ಮಹೋತ್ಸವ ಮಾಡ್ತೇವೆ
ಕೊಪ್ಪಳ: ಕೊಪ್ಪಳ ರಜತ ಮಹೋತ್ಸವ ಹಾಗೂ ಆನೆಗೊಂದಿ ಉತ್ಸವವನ್ನು ನಾವು ಮಾಡಲಿದ್ದೇವೆ. ಮೊದಲು ಕೊಪ್ಪಳ ರಜತ ಮಹೋತ್ಸವ ಮಾಡಲಿದ್ದು, ನನ್ನ ಪ್ರವಾಸೋಧ್ಯಮ ಇಲಾಖೆಯಿಂದ 50 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಿ ಆದೇಶವನ್ನು ತಂದಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದರು.

ಕೊಪ್ಪಳ ರಜತ ಮಹೋತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುದಾನಕ್ಕೆ ಮನವಿ ಮಾಡಿದ್ದೇನೆ. ಜಿಲ್ಲೆಯ ಜನಪ್ರತಿನಿಧಿಗಳು ಯಾವ ದಿನಾಂಕ ಎಂದು ನಿಗಧಿ ಮಾಡಲಿದ್ದಾರೆ. ಆನೆಗುಂದಿ ಉತ್ಸವಕ್ಕೆ 1 ಕೋಟಿ ರೂ. ನನ್ನ ಇಲಾಖೆಯಿಂದ ಬಿಡುಗಡೆ ಮಾಡಲಿದ್ದೇನೆ. ವಿಜಯನಗರ ಮೂಲ ರಾಜಧಾನಿ ಆನೆಗುಂದಿಯಾಗಿದ್ದು, ಅದರ ಉತ್ಸವವೂ ನಡೆಯಲಿದೆ ಎಂದರು.

ಟಾಪ್ ನ್ಯೂಸ್

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

DCM ಡಿಕೆಶಿ, ಶಿವರಾಮೇಗೌಡ ವಿರುದ್ಧ ಜೆಡಿಎಸ್‌ ಆಕ್ರೋಶ: ಹಲವೆಡೆ ಪ್ರತಿಭಟನೆ

DCM ಡಿಕೆಶಿ, ಶಿವರಾಮೇಗೌಡ ವಿರುದ್ಧ ಜೆಡಿಎಸ್‌ ಆಕ್ರೋಶ: ಹಲವೆಡೆ ಪ್ರತಿಭಟನೆ

ಹಂತ-2: ಶೇ. 71.4 ಮತ: ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಸಂಪನ್ನ

ಹಂತ-2: ಶೇ. 71.4 ಮತ: ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಸಂಪನ್ನ

HD Kumaraswamy ಮೈತ್ರಿ ಮುಂದುವರಿಕೆ ಉದ್ದೇಶ

BJP-JDS ಮೈತ್ರಿ ಮುಂದುವರಿಕೆ ಉದ್ದೇಶ; ಎಚ್‌.ಡಿ. ಕುಮಾರಸ್ವಾಮಿ

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಅಶೋಕ್‌

Randeep Surjewala ಚಿತ್ರಕಥೆ, ಡಿಕೆಶಿ ನಿರ್ಮಾಪಕ: ಆರ್‌. ಅಶೋಕ್‌

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.