ಬಾಗಲಕೋಟೆ: ಹಳೇ ಕಾರಿಗೆ ಐಎಎಸ್‌ ಅಧಿಕಾರಿ “ಅಂಬಾಸಿಡರ್‌’

ಉಮಾ ಮಹಾದೇವನ್‌ ಕೂಡಾ ಈ ಕಾರಿನಲ್ಲಿ ಸಂಚಾರ ಮಾಡಿ ಖುಷಿ ಪಟ್ಟಿದ್ದರು

Team Udayavani, Jan 27, 2023, 3:45 PM IST

ಬಾಗಲಕೋಟೆ: ಹಳೇ ಕಾರಿಗೆ ಐಎಎಸ್‌ ಅಧಿಕಾರಿ “ಅಂಬಾಸಿಡರ್‌’

ಬಾಗಲಕೋಟೆ: ಆಧುನಿಕ ಯುಗದಲ್ಲಿ ಮಾರುಕಟ್ಟೆಯಲ್ಲಿ ಹೊಸ ಹೊಸ ಕಾರು ಬಂದಿವೆ. ಬಹುತೇಕರು ಐಷಾರಾಮಿ ಹಾಗೂ ಹೊಸ ಮಾದರಿಯ ಕಾರನ್ನೇ ಬಳಸಲು ಇಷ್ಟಪಡುತ್ತಾರೆ. ಆದರೆ, ಇಲ್ಲಿನ ಯುವ ಐಎಎಸ್‌ ಅಧಿಕಾರಿಯೊಬ್ಬರು ತುಕ್ಕು ಹಿಡಿದು ನಿಂತಿದ್ದ ಹಳೆಯ ಅಂಬಾಸಿಡರ್‌ ಕಾರನ್ನು ದುರಸ್ತಿ ಮಾಡಿಸಿ, ಬಣ್ಣ ಹಚ್ಚಿ, ನಿತ್ಯವೂ ಅದನ್ನೇ ಬಳಸುತ್ತಿದ್ದಾರೆ. ಹೌದು, ಇಲ್ಲಿನ ಜಿಪಂ ಸಿಇಒ ಟಿ.ಭೂಬಾಲನ್‌ ಈ ಹಳೆಯ ಅಂಬಾಸಿಡರ್‌ ಕಾರು ಬಳಸುತ್ತಿದ್ದಾರೆ.

ಬಾಗಲಕೋಟೆ ನಗರವೂ ಸೇರಿದಂತೆ ಸ್ಥಳೀಯವಾಗಿ ಯಾವುದೇ ಕಾರ್ಯಕ್ರಮ ಇದ್ದರೆ ಈ ಹಳೆಯ ಕಾರನ್ನೇ ಬಳಸುತ್ತಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಿಗೆ ಭೇಟಿ ನೀಡುವುದಿದ್ದರೆ ಮಾತ್ರ ಹೊಸ ಇನ್ನೋವಾ ಕಾರು ಬಳಸುತ್ತಿದ್ದಾರೆ. ಜಿಪಂ ಉಪ ಕಾರ್ಯದರ್ಶಿಯಾಗಿದ್ದ ವಿ.ಎಸ್‌.ಹಿರೇಮಠ ಬಳಸುತ್ತಿದ್ದ 2011ರ ಮಾದರಿಯ ಅಂಬಾಸಿಡರ್‌ ಕಾರು ಕಳೆದ 3 ವರ್ಷಗಳಿಂದ ಶೆಡ್‌ ಸೇರಿತ್ತು.ಜಿಪಂಗೆ ಟಿ. ಭೂಬಾಲನ್‌ ಸಿಇಒ ಆಗಿ ಬಂದ ಬಳಿಕ ಶೆಡ್‌ನ‌ಲ್ಲಿ ಖಾಲಿ ನಿಂತಿದ್ದ ಕಾರು ನೋಡಿ ಇದನ್ನು ಏಕೆ ಬಳಸುತ್ತಿಲ್ಲ ಎಂದು ವಿಚಾರಿಸಿದ್ದರು.

ಸರ್ಕಾರದಿಂದ ಎಲ್ಲ ಅಧಿಕಾರಿಗಳಿಗೆ ಹೊಸ ಇನ್ನೋವಾ ಕಾರು ನೀಡಿದ್ದು ಎಲ್ಲರೂ ಅದನ್ನೇ ಬಳಸುತ್ತಾರೆ ಎಂದು ಸಿಬ್ಬಂದಿ ವಿವರಿಸಿದ್ದರು. ಆಗ ಆ ಕಾರನ್ನು ಗ್ಯಾರೇಜ್‌ಗೆ ಕಳುಹಿಸಿ ದುರಸ್ತಿಗೆ ಎಷ್ಟು ಖರ್ಚಾಗುತ್ತದೆ ಎಂದೆಲ್ಲ ವಿಚಾರಿಸಿದ್ದಾರೆ. ಅದನ್ನು ದುರಸ್ತಿ ಮಾಡಿಸಿ ಹೊಸದಾಗಿ ಬಣ್ಣ ಬಳಿಸಿದ್ದಾರೆ. ಒಟ್ಟು 2.20 ಲಕ್ಷ ಕಿಮೀ ಮಾತ್ರ ಓಡಿದ್ದು, ಇನ್ನೂ 60 ಸಾವಿರ ಕಿಮೀವರೆಗೆ ಓಡಿಸ ಬಹುದು. ಹೀಗಾಗಿ ಕಳೆದ ಹಲವು ತಿಂಗಳಿಂದ ಈ ಕಾರನ್ನು ಸಿಇಒ ಬಳಸುತ್ತಿದ್ದಾರೆ. ಈಚೆಗೆ
ಜಿಲ್ಲೆಗೆ ಬಂದಿದ್ದ ಆರ್‌ಡಿಪಿಆರ್‌ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್‌ ಕೂಡಾ ಈ ಕಾರಿನಲ್ಲಿ ಸಂಚಾರ ಮಾಡಿ ಖುಷಿ ಪಟ್ಟಿದ್ದರು. ಜತೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ಕೂಡ ಈ ಅಂಬಾಸಿಡರ್‌ ವಾಹನದಲ್ಲಿ ಸಂಚರಿಸಿ ಸಂಭ್ರಮಿಸಿದ್ದರು.

ಮಾರುಕಟ್ಟೆಗೆ ಎಷ್ಟೇ ಹೊಸ ಮಾದರಿಯ ಕಾರು ಬಂದರೂ ಈ ಹಳೆಯ ಅಂಬಾಸಿಡರ್‌ ಕಾರಿನ ಓಡಾಟ ಅತ್ಯಂತ ಆರಾಮದಾಯಕ ಹಾಗೂ ಸುರಕ್ಷಿತ. ಅಪಘಾತ ಸಂಭವಿಸಿ ಕನಿಷ್ಟ 2ರಿಂದ 3 ಪಲ್ಟಿ ಆದರೂ ಒಳಗೆ ಇದ್ದವರಿಗೆ ಏನೂ ಆಗಲ್ಲ. ಆದರೆ, ಮೈಲೇಜ್‌ ವಿಷಯದಲ್ಲಿ ಸ್ವಲ್ಪ ದುಬಾರಿಯಾಗುತ್ತದೆ. ಹೀಗಾಗಿ ನಮ್ಮ ಸಾಹೇಬರು ಸ್ಥಳೀಯವಾಗಿ ಮಾತ್ರ ಇದನ್ನು ಬಳಸುತ್ತಾರೆ.
ಪ್ರಕಾಶ ಗುಳೇದಗುಡ್ಡ (ತೊನಶ್ಯಾಳ), ಬಾಗಲಕೋಟೆ ಜಿಪಂ ಸಿಇಒ ಕಾರು ಚಾಲಕ

ಟಾಪ್ ನ್ಯೂಸ್

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

ತೇರದಾಳ: ಇಂದಿನಿಂದ ಚಿನಗುಂಡಿ ಗುಡಿದೇವಿ ಜಾತ್ರಾ ಮಹೋತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.