ಕನ್ನಡ ನಾಡಿಗೆ ಸಿದ್ದರಾಮೇಶ್ವರರ ಕೊಡುಗೆ ಅಪಾರ


Team Udayavani, Feb 1, 2023, 12:19 PM IST

tdy-10

ಎಚ್‌.ಡಿ.ಕೋಟೆ: ಇತಿಹಾಸದ ಉದ್ದಗಲಕ್ಕೂ ಇತರ ಸಮುದಾಯಗಳಿಗೆ ಸಹಕಾರಿಯಾಗಿಶ್ರಮಿಸುತ್ತಿರುವ ಬೋವಿ ಸಮಾಜ ಶ್ರಮಜೀವಿಗಳು.ಕುಲ ಕಸುಬನ್ನೇ ಅವಲಂಭಿಸದೆ ಮಕ್ಕಳನ್ನುಸುಶಿಕ್ಷಿತರನ್ನಾಗಿಸುವಂತೆ ಮಾಸನ ಗಂಗೋತ್ರಿಯಪ್ರೊ.ತಳವಾರ್‌ ಬೋವಿ ಸಮುದಾಯದವರಿಗೆ ಕಿವಿ ಮಾತು ಹೇಳಿದರು.

ಎಚ್‌.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್‌. ಅಂಬೇಡ್ಕರ್‌ ಸಮುದಾಯ ಭವನದಲ್ಲಿ ತಾಲೂಕು ಆಡಳಿತ ಮತ್ತು ಬೋವಿ ಸಮುದಾಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಅವರ 851ನೇ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಬಲದಿಂದ ಸರ್ವ ಸಮಾಜಕ್ಕೂ ಆದ್ಯತೆ ದೊರೆತ ಹಿನ್ನೆಲೆಯಲ್ಲಿ ಬೋವಿ ಸಮಾಜಕ್ಕೂ ಮೀಸಲಾತಿ ಲಭಿಸಿದೆ ಎಂದರು.

12ನೇ ಶತಮಾನದಲ್ಲಿ ಕನ್ನಡ ನಾಡಿನ ಇತಿಹಾಸ ಉಜ್ವಲಗೊಳ್ಳಲು ಸಿದ್ದರಾಮೇಶ್ವರರ ಕೊಡುಗೆ ಅಪಾರ. ಸೊಲ್ಲಾಪುರದಲ್ಲಿ ಜನಿಸಿದ ಸಿದ್ದರಾಮೇಶ್ವರರು ಬಾಲ್ಯದಲ್ಲೇ ಆಧ್ಯಾತ್ಮಿಕತೆ ಮತ್ತು ದೈವಿಕ ಗುಣಗಳನ್ನು ಹೊಂದಿದ್ದವರು. ಬಸವ ಸ್ತೋತ್ರ, ವಚನ 1002 ಸಾಹಿತ್ಯಗಳಲ್ಲಿ ಸಿದ್ದರಾಮೇಶ್ವರ ಗುರ್ತಿಸಿಕೊಂಡವರು. ಕರ್ಮಯೋಗಿಯಾಗಿ ಬೆಳೆದ ಸಿದ್ದರಾಮೇಶ್ವರ ಸೊಲ್ಲಾಪುರವನ್ನು ನಗರನಾಗಿ ಬೆಳೆಸಿದ ಕೀರ್ತಿಗೆ ಪಾತ್ರರಾದವರು. ಸರ್ವರ ಅಭಿವೃದ್ಧಿಗೆ ಪೂರಕವಾಗಿ ಸಂಪತ್ತು ಬಳಸಿಕೊಳ್ಳಬೇಕೆ ಹೊರತು ರಾಜಕೀಯಕ್ಕಾಗಿ ಜಾತಿ ಮತ್ತು ಕುಲಗಳನ್ನು ಬಳಸಿಕೊಳ್ಳಬಾರದುಅನ್ನುವ ಸಿದ್ಧಾಂತ ಸಿದ್ದರಾಮೇಶ್ವರರದು. ಇಂತಹ ತ್ಯಾಗಮಹಿ ಆದರ್ಶ, ಸಿದ್ದಾಂತಗಳನ್ನು ಯುವ ಪೀಳಿಗೆ ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.

ಶಾಸಕ ಅನಿಲ್‌ ಚಿಕ್ಕಮಾದು ಮಾತನಾಡಿ, ಕೊರೊನಾ ಹಿನ್ನೆಲೆ ಕಳೆದ 2 ವರ್ಷಗಳಿಂದ ದಾರ್ಶನಿಕರ ಜಯಂತಿ ಆಚರಣೆಗೆ ತಡೆಯಾಗಿತ್ತು.ಇಡೀ ಸಮುದಾಯಕ್ಕೆ ಬೋವಿ ಸಮುದಾಯದ ಪರಿಶ್ರಮದ ಕೊಡುಗೆ ಅವಿಸ್ಮರಣೀಯ. ಈ ಬಾರಿ ಅದ್ಧೂರಿಯಾಗಿ ಜಯಂತಿ ಆಚರಿಸುತ್ತಿರುವ ಬೋವಿ ಸಮುದಾಯಕ್ಕೆ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ ಮತ್ತು ಮೈಸೂರು ನಾಲ್ವಡಿಕೃಷ್ಣರಾಜ ಒಡೆಯರ್‌ ಸಮಾನತೆ ನೀಡಿದವರು. ಬೋವಿ ಸಮುದಾಯಕ್ಕೆ ತಾಲೂಕಿನ ವಡ್ಡರಗುಡಿಬಳಿಯಲ್ಲಿ 26 ಗುಂಟೆ ಜಾಗದಲ್ಲಿ 3 ಕೋಟಿಅಂದಾಜು ವೆಚ್ಚದ ಭವ್ಯ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರ 3 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಿದೆ. ಈಗಾಗಲೇ 80 ಲಕ್ಷ ಅನುದಾನ ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ, ಬಂಡೆಯನ್ನೂ ಲೆಕ್ಕಿಸದೆ ಜಲಾಶಯಗಳು, ಬಾವಿ, ಕೆರೆಕಟ್ಟೆಗಳನ್ನು ನಿರ್ಮಿಸುವ ಪರಿಶ್ರಮ ಜೀವನದ ಜೀವನ ನಡೆಸುದ ಬೋವಿ ಸಮುದಾಯ ಒಗ್ಗೂಡಿಸುವ ನಿಟ್ಟಿನಲ್ಲಿ ಜಯಂತಿ ಆಚರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ವಿವಿಧ ಕಲಾತಂಡಗಳೊಂದಿಗೆ ಪಟ್ಟಣದ ಶ್ರೀಲಕ್ಷ್ಮೀವರದರಾಜ ಸ್ವಾಮಿ ದೇವಸ್ಥಾನದಿಂದ 1ನೇ ಮುಖ್ಯರಸ್ತೆ ಮಾರ್ಗವಾಗಿ ಮೆರವಣಿಗೆ ಹೊರಟುಹುಣಸೂರು ಬೇಗೂರು ರಸ್ತೆ ಮಾರ್ಗವಾಗಿಮೆರವಣಿಗೆ ಅಂಬೇಡ್ಕರ್‌ ಭವನದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮವನ್ನು ತಲುಪಿತು. ಬೋವಿ ಸಮುದಾಯದ ಜಿ.ವಿ.ಸೀತಾರಾಂ,ಎಂ.ಸಿ.ದೊಡ್ಡನಾಯಕ, ಜಯಪ್ರಕಾಶ್‌, ಚಿತ್ರದುರ್ಗದ ಸಿದ್ದರಾಮೇಶ್ವರ ಸ್ವಾಮೀಜಿ, ಪುರಸಭೆ ಅಧ್ಯಕ್ಷೆಅನಿತಾ, ಉಪಾಧ್ಯಕ್ಷೆ ಗೀತಾ, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್‌, ಸದಸ್ಯರಾದ ನಂಜಪ್ಪ ಇತರರು ಇದ್ದರು.

 

ಟಾಪ್ ನ್ಯೂಸ್

ಜಿಗಿದ ಷೇರು ಪೇಟೆ;  ಒಂದೇ ದಿನ ಬಿಎಸ್‌ಇ ಸೆನ್ಸೆಕ್ಸ್‌ 2,507 ಅಂಕ ಜಿಗಿತ

ಜಿಗಿದ ಷೇರು ಪೇಟೆ;  ಒಂದೇ ದಿನ ಬಿಎಸ್‌ಇ ಸೆನ್ಸೆಕ್ಸ್‌ 2,507 ಅಂಕ ಜಿಗಿತ

MLC Elections; ನೈಋತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ

MLC Elections; ನೈಋತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ

Punjalkatte ಬಿರುಗಾಳಿ: ಇರ್ವತ್ತೂರು ಪರಿಸರದಲ್ಲಿ ಅಪಾರ ಹಾನಿ

Punjalkatte ಬಿರುಗಾಳಿ: ಇರ್ವತ್ತೂರು ಪರಿಸರದಲ್ಲಿ ಅಪಾರ ಹಾನಿ

Rain ದ.ಕ., ಉಡುಪಿ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಮಳೆ

Rain ದ.ಕ., ಉಡುಪಿ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಮಳೆ

June. 7, 8ರಂದು ಮೂಡುಬಿದಿರೆಯಲ್ಲಿ “ಆಳ್ವಾಸ್‌ ಪ್ರಗತಿ-2024 ಉದ್ಯೋಗ ಮೇಳ’

June 7, 8ರಂದು ಮೂಡುಬಿದಿರೆಯಲ್ಲಿ “ಆಳ್ವಾಸ್‌ ಪ್ರಗತಿ-2024 ಉದ್ಯೋಗ ಮೇಳ’

Nalin Kumar Kateel ಮೈಸೂರು ರೈಲ್ವೇ ವಿಭಾಗಕ್ಕೆ ಮಂಗಳೂರು ಸೇರ್ಪಡೆ ಶೀಘ್ರ

Nalin Kumar Kateel ಮೈಸೂರು ರೈಲ್ವೇ ವಿಭಾಗಕ್ಕೆ ಮಂಗಳೂರು ಸೇರ್ಪಡೆ ಶೀಘ್ರ

kejriwal

AAP ಆರೋಪ; ಸಿಎಂ ಕೇಜ್ರಿಗೆ ಜೈಲಿನಲ್ಲಿ ಕೂಲರ್‌ ನೀಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜ್ಞಾನಕ್ಕೆ ಪ್ರಪಂಚದ ಎಲ್ಲೆಡೆ ಮಾನ್ಯತೆ: ಮಂತ್ರಾಲಯ ಶ್ರೀ ಸಂದೇಶ

ಜ್ಞಾನಕ್ಕೆ ಪ್ರಪಂಚದ ಎಲ್ಲೆಡೆ ಮಾನ್ಯತೆ: ಮಂತ್ರಾಲಯ ಶ್ರೀ ಸಂದೇಶ

8-gundlupete

Gundlupete: ಅನೈತಿಕ ಸಂಬಂಧದ ವಿಚಾರ: ಸ್ವಂತ ಅಣ್ಣನನ್ನೇ ಚಾಕುವಿನಿಂದ ಇರಿದು ಕೊಂದ ತಮ್ಮ

2-hunsur

Hunsur: ಬಿರುಗಾಳಿ ಸಹಿತ ಭಾರೀ ಮಳೆಗೆ ಕೆರೆಯಂತಾದ ಹೊಲಗಳು

ಐತಿಹಾಸಿಕ ಸ್ಮಾರಕಗಳ ತ್ರೀಡಿ ಮ್ಯಾಪಿಂಗ್‌, ಲೇಸರ್‌ ಸ್ಕ್ಯಾನಿಂಗ್‌

ಐತಿಹಾಸಿಕ ಸ್ಮಾರಕಗಳ ತ್ರೀಡಿ ಮ್ಯಾಪಿಂಗ್‌, ಲೇಸರ್‌ ಸ್ಕ್ಯಾನಿಂಗ್‌

2-hunsur

Hunsur: ಕಸಾಯಿಖಾನೆಗೆ ಸಾಗಿಸುತ್ತಿದ್ದ 40ಕ್ಕೂ ಅಧಿಕ ಹಸುಗಳ ರಕ್ಷಣೆ

MUST WATCH

udayavani youtube

ನಿಮ್ಮ ಮಗುವಿಗೆ Adenoid ಸಮಸ್ಯೆ ಇದೆಯೇ ಇಲ್ಲಿದೆ ಪರಿಹಾರ

udayavani youtube

ಉಳ್ಳಾಲ: ಉರುಮಣೆ ಸಮೀಪ ಬಸ್ಸುಗಳೆರಡರ ಮುಖಾಮುಖಿ ಢಿಕ್ಕಿ; ಸಣ್ಣಪುಟ್ಟ ಗಾಯ

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

ಹೊಸ ಸೇರ್ಪಡೆ

ಜಿಗಿದ ಷೇರು ಪೇಟೆ;  ಒಂದೇ ದಿನ ಬಿಎಸ್‌ಇ ಸೆನ್ಸೆಕ್ಸ್‌ 2,507 ಅಂಕ ಜಿಗಿತ

ಜಿಗಿದ ಷೇರು ಪೇಟೆ;  ಒಂದೇ ದಿನ ಬಿಎಸ್‌ಇ ಸೆನ್ಸೆಕ್ಸ್‌ 2,507 ಅಂಕ ಜಿಗಿತ

Amit Shah

FIR ನಿಂದ ಅಮಿತ್‌ ಶಾ ಹೆಸರು ಕೈಬಿಟ್ಟ ಪೊಲೀಸರು

MLC Elections; ನೈಋತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ

MLC Elections; ನೈಋತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ

Punjalkatte ಬಿರುಗಾಳಿ: ಇರ್ವತ್ತೂರು ಪರಿಸರದಲ್ಲಿ ಅಪಾರ ಹಾನಿ

Punjalkatte ಬಿರುಗಾಳಿ: ಇರ್ವತ್ತೂರು ಪರಿಸರದಲ್ಲಿ ಅಪಾರ ಹಾನಿ

NIA (2)

ISIS ಜತೆ ನಂಟು: 17 ಜನರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್‌ ಸಲ್ಲಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.