ಶಿವಮೊಗ್ಗ ಸಹಿತ ಹಲವೆಡೆ ಉಗ್ರ ದಾಳಿಗೆ ಸಂಚು?
Team Udayavani, Feb 6, 2023, 6:50 AM IST
ಹೈದರಾಬಾದ್: ದೇಶದಲ್ಲಿ ಪಾಕ್ ಬೆಂಬಲಿತ ದುಷ್ಕೃತ್ಯಗಳನ್ನು ನಡೆಸುವ ಹಾಗೂ ಬಾಂಬ್ ದಾಳಿ ಎಸಗುವ ಸಂಚನ್ನು ಬಯಲಿಗೆ ಎಳೆಯಲಾಗಿದೆ. ಜತೆಗೆ ದೇಶದಲ್ಲಿ ಒಂಟಿ ತೋಳ ದಾಳಿ (ಲೋನ್ ವೂಲ್ಫ್ ಅಟ್ಯಾಕ್) ನಡೆಸುವ ಹುನ್ನಾರ ಬಹಿರಂಗವಾಗಿದೆ.
ಕರ್ನಾಟಕದ ಶಿವಮೊಗ್ಗ, ಉತ್ತರ ಪ್ರದೇಶದ ಗೋರಖ್ಪುರ, ಹೈದರಾಬಾದ್ನಲ್ಲಿ ಒಂಟಿ ತೋಳ ದಾಳಿ ನಡೆಸಲು ಯೋಜಿಸಲಾಗಿದೆ ಎಂಬ ಆಘಾತಕಾರಿ ಅಂಶ ಬಹಿರಂಗವಾಗಿದೆ.
ಹೈದರಾಬಾದ್ನಲ್ಲಿ ಮೊಹಮ್ಮದ್ ಅಬ್ದುಲ್ ಝಹೇದ್, ಮೂಸಾರಾಮ್ ಭಾಗ್, ಮಾಸ್ ಹಸನ್ ಫಾರೂಕ್ ಎಂಬವ ರನ್ನು ಬಂಧಿಸ ಲಾಗಿದ್ದು, ಅವರಿಗೆ ಲಷ್ಕರ್-ಎ- ತಯ್ಯಬಾ, ಪಾಕ್ ಐಎಸ್ಐನಿಂದ ನಿರ್ದೇಶನ ಹಾಗೂ ಧನಸಹಾಯ ಲಭ್ಯವಾಗುತ್ತಿತ್ತು ಎಂದು ಎನ್ಐಎ ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಬಿಜೆಪಿ ಮತ್ತು ಆರೆಸ್ಸೆಸ್ ಸಭೆ, ಕಾರ್ಯ ಕ್ರಮಗಳನ್ನು ಗುರಿಯಾಗಿಸಿಕೊಂಡು ಗ್ರೆನೇಡ್ ದಾಳಿಗೆ ಸಂಚು ರೂಪಿಸಲಾಗಿದೆ ಎಂಬುದು ಎನ್ಐಎ ನಡೆಸಿದ ಪ್ರಾಥಮಿಕ ಹಂತದ ತನಿಖೆಯಿಂದ ದೃಢಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ