ರಿಷಭ್ ಪಂತ್ ಕೆನ್ನೆಗೆ ಹೊಡೆಯಲು ಕಾಯುತ್ತಿದ್ದಾರೆ ಕಪಿಲ್ ದೇವ್!
Team Udayavani, Feb 9, 2023, 12:30 PM IST
ನವದೆಹಲಿ: ಅಪಘಾತದಿಂದ ತೀವ್ರ ಗಾಯಗೊಂಡು ಈಗಷ್ಟೇ ಸುಧಾರಿಸಿಕೊಳ್ಳುತ್ತಿರುವ ಕ್ರಿಕೆಟಿಗ ರಿಷಭ್ ಪಂತ್ ಕೆನ್ನೆಗೆ ಹೊಡೆಯಲು ಮಾಜಿ ನಾಯಕ ಕಪಿಲ್ ದೇವ್ ಕಾದು ಕುಳಿತ್ತಿದ್ದಾರೆ! ಕಾರಣವೇನೆಂದು ಕೇಳಿ. ರಿಷಭ್ ಪಂತ್ ಬೇಜವಾಬ್ದಾರಿಯಿಂದ ಕಾರು ಓಡಿಸಿಕೊಂಡು ಹೋಗಿ ಭೀಕರ ಅಪಘಾತಕ್ಕೆ ತುತ್ತಾಗಿದ್ದರು. ಇದರಿಂದ ಭಾರತ ಟೆಸ್ಟ್ ತಂಡ ಸಮತೋಲನವೇ ತಪ್ಪಿಹೋಗಿದೆ. ಅದು ಕಪಿಲ್ಗೆ ಸಿಟ್ಟು ತರಿಸಿದೆ.
“ಮೊದಲು ರಿಷಭ್ಗೆ ನನ್ನ ಆಶೀರ್ವಾದ ನೀಡುತ್ತೇನೆ. ಆಮೇಲೆ ಬಲವಾಗಿ ಕೆನ್ನೆಗೆ ಹೊಡೆಯುತ್ತೇನೆ. ಒಮ್ಮೆ ಗಾಯಗಳಿಂದ ರಿಷಭ್ ಸುಧಾರಿಸಿಕೊಳ್ಳಲಿ ಎಂದು ಕಾಯುತ್ತಿದ್ದೇನೆ. ಅಪ್ಪಅಮ್ಮನಿಗೆ ಹೇಗೆ ಮಕ್ಕಳು ತಪ್ಪು ಮಾಡಿದಾಗ ಹೊಡೆಯುವ ಅಧಿಕಾರವಿರುತ್ತದೋ, ಅದನ್ನೇ ನಾನೂ ಮಾಡುತ್ತೇನೆ…’ ಹೀಗೆಂದು ಕಪಿಲ್ ಹೇಳಿದ್ದಾರೆ.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ ಪ್ರಕರಣ: ಎನ್ಎಸ್ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣಗೆ ಜಾಮೀನು ಮಂಜೂರು
ಕಪಿಲ್ ಮಾತಿನಲ್ಲಿ ತಪ್ಪು ಮಾಡುವ ಮಕ್ಕಳನ್ನು ತಿದ್ದುವ ಒಂದು ಪ್ರೀತಿ, ಕಾಳಜಿ, ಆಕ್ರೋಶವಿತ್ತು. ಅದೂ ಸಹಜವೂ ಹೌದು. ಕಳೆದ ಡಿ.30ರಂದು ದೆಹಲಿಯಿಂದ ಉತ್ತರಾಖಂಡದ ರೂರ್ಕೆಲಕ್ಕೆ ತಾವೇ ಕಾರು ಓಡಿಸಿಕೊಂಡು ರಿಷಭ್ ಹೊರಟಿದ್ದರು. ಮುಂಜಾನೆ ಹೊತ್ತು ರಸ್ತೆ ವಿಭಜಕಕ್ಕೆ ಗುದ್ದಿದ ಕಾರಿಗೆ ಬೆಂಕಿ ಹತ್ತಿಕೊಂಡಿತು. ಆ ಹಂತದಲ್ಲಿ ಕಾರಿನ ಕಿಟಕಿ ಒಡೆದು ಬಸ್ ಚಾಲಕರೊಬ್ಬರು ರಿಷಭ್ ರನ್ನು ಕಾಪಾಡಿದ್ದರು. ಅವರು ಬದುಕುಳಿದಿದ್ದೇ ಒಂದು ಆಶ್ಚರ್ಯ. ಬೆನ್ನಿಗೆ, ಕಾಲಿಗೆ, ಮಂಡಿಗೆ ತೀವ್ರ ಗಾಯ ಮಾಡಿಕೊಂಡಿದ್ದಾರೆ. ಯಾವಾಗ ಅವರು ಮರಳಿ ಕಣಕ್ಕಿಳಿಯುತ್ತಾರೆ ಎನ್ನುವುದು ಖಚಿತವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
IPL; ಬೌಲರ್ಗಳನ್ನು ಕಾಪಾಡಿ: ಅಶ್ವಿನ್ ವಿನಂತಿ!
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ