“ಸೋಲಾರ್ ಗ್ರಾಮ” ಆಗಲಿದೆ ಗೋಳಿಹೊಳೆ
ಜಿಲ್ಲೆಯ 2ನೇ ಸಂಪೂರ್ಣ "ಸೋಲಾರ್ ಗ್ರಾಮ" : ಅಮಾಸೆಬೈಲು ಗ್ರಾಮಕ್ಕೆ ಮೊದಲ ಶ್ರೇಯ : 2 ವರ್ಷದೊಳಗೆ ಯೋಜನೆ ಸಾಕಾರ ಸಾಧ್ಯತೆ
Team Udayavani, Feb 15, 2023, 12:24 PM IST
ಕುಂದಾಪುರ: ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮದ ಅನಂತರ ಈಗ ಉಡುಪಿ ಜಿಲ್ಲೆಯ ಮತ್ತೂಂದು ಗ್ರಾಮ ಸಂಪೂರ್ಣ “ಸೋಲಾರ್ ಗ್ರಾಮ’ ಆಗುವತ್ತ ಹೆಜ್ಜೆಯಿಟ್ಟಿದೆ. ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮವು ಈಗಾಗಲೇ ಶೇ. 50ರಷ್ಟು ಸೋಲಾರ್ ಅಳವಡಿಸಿಕೊಡಿದ್ದು, ಮುಂದಿನ 2 ವರ್ಷದೊಳಗೆ ಪೂರ್ಣ ಪ್ರಮಾಣದ “ಸೋಲಾರ್ ಗ್ರಾಮ”ವಾಗಲಿದೆ.
ಸುಸ್ಥಿರ ಗ್ರಾಮದ ಪರಿಕಲ್ಪನೆಯಲ್ಲಿ ಗೋಳಿಹೊಳೆ ಗ್ರಾಮದ ಎಲ್ಲ ಮನೆಗಳಿಗೂ ಸೊಲಾರ್ ಅಳವಡಿಸುವ ಯೋಜನೆಯನ್ನು ಸೆಲ್ಕೋ ಸೋಲಾರ್ ಸಂಸ್ಥೆಯ ಕುಂದಾಪುರ ಶಾಖೆಯು ಯೋಜನೆ ಹಾಕಿಕೊಂಡಿದೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸಹಕಾರದೊಂದಿಗೆ ಈ ಯೋಜನೆ ಸಾಕಾರಗೊಳ್ಳುತ್ತಿದೆ. ಸೌರ ವಿದ್ಯುತ್ ಉತ್ಪಾದನೆ, ಗೃಹ ಸೌರಶಕ್ತಿ ಸದ್ಬಳಕೆ ಮೂಲಕ ಸ್ವಾವಲಂಬಿಯಾಗುವ ಮಹತ್ವದ ಕಾರ್ಯಕ್ಕೆ ಗೋಳಿಹೊಳೆ ಗ್ರಾಮದಲ್ಲಿ 2019 ರ ಡಿಸೆಂಬರ್ನಲ್ಲಿ ಚಾಲನೆ ನೀಡಲಾಗಿತ್ತು. ಈಗಾಗಲೇ ಶೇ. 50ರಷ್ಟು ಮನೆ, ವಾಣಿಜ್ಯ ಮಳಿಗೆಗಳಿಗೆ ಸೋಲಾರ್ ಅಳವಡಿಸಲಾಗಿದೆ. ಗೋಳಿಹೊಳೆ ಗ್ರಾಮದ 220 ಮನೆಗಳಿಗೆ ಈಗಾಗಲೇ ಸೋಲಾರ್ ಅಳವಡಿಸಿಕೊಳ್ಳಲಾಗಿದೆ.
ಹೈನುಗಾರಿಕೆಗೂ ಸೋಲಾರ್ ಟಚ್
ಅದಲ್ಲದೆ 40 ಸ್ವೋದ್ಯೋಗ, ಉದ್ಯಮ, ಹೈನುಗಾರಿಕೆಗಳಿಗೂಸೋಲಾರ್ ವ್ಯವಸ್ಥೆಯ ಪ್ರಯೋಜನ ಪಡೆಯುತ್ತಿದ್ದಾರೆ. ಹಾಲು ಕರೆಯುವ ಯಂತ್ರಕ್ಕೆ, ಟೈಲರಿಂಗ್ ಯಂತ್ರಕ್ಕೆ ಸೋಲಾರ್ ಅಳವಡಿಕೆ, ಪ್ರಿಂಟರ್ಗೂ ಸೋಲಾರ್ ಬಳಕೆ, ಕೋಳಿ ಮಾರಾಟದ ಅಂಗಡಿಯ ಫ್ರಿಡ್ಜ್, ಮೀನು ಮಾರಾಟದ ಫ್ರಿಡ್ಜ್ಗಳಿಗೂ ಸೋಲಾರ್ ಶಕ್ತಿಯನ್ನು ಒದಗಿಸಲಾಗಿದೆ.
ರಾಜ್ಯದ ಮೊದಲ ಗ್ರಾಮ ಅಮಾಸೆಬೈಲು
ಉಡುಪಿ ಜಿಲ್ಲೆಯ ಮಾತ್ರವಲ್ಲದೆ ರಾಜ್ಯದ ಮೊದಲ ಸಂಪೂರ್ಣ ಸೋಲಾರ್ ಗ್ರಾಮವೆಂಬ ಹೆಗ್ಗಳಿಕೆ ಅಮಾಸೆಬೈಲಿನದ್ದಾಗಿದೆ. ಅಮಾಸೆಬೈಲು ಗ್ರಾಮವನ್ನು ಕತ್ತಲು ಮುಕ್ತ ಗ್ರಾಮವಾಗಿಸುವ ನಿಟ್ಟಿನಲ್ಲಿ ಹಿರಿಯ ಮುತ್ಸದ್ಧಿ ದಿ| ಎ.ಜಿ. ಕೊಡ್ಗಿ ಅವರು ಸೋಲಾರ್ ಗ್ರಾಮವಾಗಿಸುವ ಪಣ ತೊಟ್ಟರು. ಅದರಂತೆ 2017ರಲ್ಲಿ ಅಮಾಸೆಬೈಲು ಸೋಲಾರ್ ಗ್ರಾಮವಾಗಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ 1,497 ಮನೆಗಳಿಗೆ ಸೋಲಾರ್ ಅಳವಡಿಸಲಾಗಿದೆ. ಬೀದಿ ದೀಪಗಳನ್ನು, ವಾಣಿಜ್ಯ ಮಳಿಗೆಗಳಿಗೂ ಸೋಲಾರ್ ದೀಪ ಅಳವಡಿಸಲಾಗಿದೆ.
2 ವರ್ಷದೊಳಗೆ ಪೂರ್ಣ
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸಹಕಾರದೊಂದಿಗೆ ನಮ್ಮ ಸೆಲ್ಕೋ ಸಂಸ್ಥೆಯಿಂದ ಗೋಳಿಹೊಳೆಯನ್ನು ಸಂಪೂರ್ಣ ಸೋಲಾರ್ ಗ್ರಾಮವಾಗಿಸುವ ಪ್ರಯತ್ನ ನಡೆಯುತ್ತಿದೆ. ಮುಂದಿನ ಎರಡು ವರ್ಷದೊಳಗೆ ಎಲ್ಲ ಮನೆಗಳಿಗೂ ಸೋಲಾರ್ ಅಳವಡಿಸುವ ಕಾರ್ಯ ಆಗಲಿದೆ. ಇದಲ್ಲದೆ ಗ್ರಾ.ಪಂ. ಸಹಕಾರದೊಂದಿಗೆ ಬೀದಿ ದೀಪಗಳನ್ನು ಅಳವಡಿಸುವ ಕಾರ್ಯಕ್ಕೂ ಮುಂದಾಗಲಿದ್ದೇವೆ.
– ಶೇಖರ್ ಶೆಟ್ಟಿ, ಪ್ರಾದೇಶಿಕ ವ್ಯವಸ್ಥಾಪಕರು,ಸೆಲ್ಕೋ ಫೌಂಡೇಶನ್
ಗ್ರಾಮಕ್ಕೆ ವರದಾನ
ಗೋಳಿಹೊಳೆ ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶವಾಗಿದ್ದು, ಅರಣ್ಯ ಪ್ರದೇಶಗಳೇ ಹೆಚ್ಚು. ಸೋಲಾರ್ ಅಳವಡಿಕೆಯಿಂದ ಮುಖ್ಯವಾಗಿ ಇಲ್ಲಿನ ವಿದ್ಯುತ್ ಸಂಪರ್ಕವೇ ಇಲ್ಲದ ಮನೆಗಳಿಗೆ ಬಹಳಷ್ಟು ಪ್ರಯೋಜನವಾಗಿದೆ. ಇನ್ನು ವಿದ್ಯುತ್ ಸಂಪರ್ಕವಿದ್ದರೂ, ಮಳೆಗಾಲದಲ್ಲಿ ಕಾಡು ಪ್ರದೇಶವಾಗಿದ್ದರಿಂದ ಆಗಾಗ್ಗೆ ವಿದ್ಯುತ್ ಕೈ ಕೊಡುತ್ತಿದ್ದು, ಇದಕ್ಕೂ ಸೋಲಾರ್ ಬೆಳಕು ಪರಿಹಾರ ನೀಡಿದೆ. ಇದರಿಂದ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗಿದೆ.
~ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು
Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ
Kundapura ಕಾರು ಡಿವೈಡರ್ ಏರಿ ಪಲ್ಟಿ; ಮೂವರಿಗೆ ಗಾಯ
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ