ಆಲಂಕಾರು: ಚರಂಡಿಗೆ ಬಿದ್ದ ಮೊಟ್ಟೆ ಸಾಗಾಟದ ಲಾರಿ
Team Udayavani, Feb 16, 2023, 1:03 AM IST
ಆಲಂಕಾರು: ಕೋಳಿ ಮೊಟ್ಟೆ ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ಬುಧವಾರ ಬೆಳಗ್ಗೆ ಆಲಂಕಾರು ಶರವೂರು ದೇವಾಲಯದ ಬಳಿ ಸಂಭವಿಸಿದೆ.
ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಮೈಸೂರಿನಿಂದ ನೆಟ್ಟಣಕ್ಕೆ ಮೊಟ್ಟೆ ಲುಪಿಸಿ ಉಳಿದ ಮೊಟ್ಟೆಯನ್ನು ಪುತ್ತೂರಿಗೆ ನೀಡಲು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.