ಚಿಂಚೋಳಿಯಲ್ಲಿ ಕಳುವಾಗಿದ್ದ ಕೆಎಸ್ ಆರ್ ಟಿಸಿ ಬಸ್ ಭೂಕೈಲಾಸದಲ್ಲಿ ಪತ್ತೆ!
ಬೆಳಗಿನ ಜಾವ 3:37 ನಿಮಿಷಕ್ಕೆ ಬಸ್ ಕಳ್ಳತನವಾಗಿರುವುದು ಗೊತ್ತಾಯಿತು.
Team Udayavani, Feb 22, 2023, 5:20 PM IST
Representative Image
ಚಿಂಚೋಳಿ: ಬೀದರ್ ನಿಂದ ಕಲಬುರಗಿ ಜಿಲ್ಲೆಯ ಚಿಂಚೋಳಿಗೆ ಬಂದಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಕಳುವಾಗಿ ನೆರೆಯ ತೆಲಂಗಾಣ ರಾಜ್ಯದಲ್ಲಿ ಪತ್ತೆಯಾದ ಘಟನೆ ಮಂಗಳವಾರ ನಡೆದಿದೆ.
ಬೀದರ ಡಿಪೋಗೆ ಸೇರಿದ ಈ ವಸತಿ ಬಸ್ ಸೋಮವಾರ ರಾತ್ರಿ 9ಗಂಟೆಗೆ ಚಿಂಚೋಳಿ ತಲುಪಿತ್ತು. ಬಸ್ ನಿಲ್ದಾಣದ ಪ್ಲಾಟ್ಫಾರಂ-3ರಲ್ಲಿ ಬಸ್ ನಿಲ್ಲಿಸಿದ ಚಾಲಕ ಮಹ್ಮದ್ ಅಯೂಬ್ ಹಾಗೂ ನಿರ್ವಾಹಕ ಈರಪ್ಪ ಬಸ್ನಲ್ಲಿಯೇ ಎಂದಿನಂತೆ ಊಟ ಮಾಡಿ, ಬಳಿಕ ವಿಶ್ರಾಂತಿ ಕೋಣೆಗೆ ಹೋಗಿ ಮಲಗಿದ್ದರು.
ಮರುದಿನ ಬೆಳಿಗ್ಗೆಯ ಟ್ರಿಪ್ಗೆ ಹೊರಡಲು ಚಾಲಕ ಮಹ್ಮದ್ ಅಯೂಬ್ ನಸುಕಿನ ಜಾವ ಐದು ಗಂಟೆಗೆ ಬಂದಾಗ ನಿಲ್ದಾಣದಲ್ಲಿ ಬಸ್ ಕಾಣಿಸಲಿಲ್ಲ. ಹೀಗಾಗಿ ಡಿಪೋ ವ್ಯವಸ್ಥಾಪಕ ಅಶೋಕ ಪಾಟೀಲ ಅವರ ಗಮನಕ್ಕೆ ತಂದರು.
ಅವರು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಬೆಳಗಿನ ಜಾವ 3:37 ನಿಮಿಷಕ್ಕೆ ಬಸ್ ಕಳ್ಳತನವಾಗಿರುವುದು ಗೊತ್ತಾಯಿತು. ಚಿಂಚೋಳಿ ಪಿಎಸ್ಐ ಮಹೆಬೂಬ್ ಅಲಿ
ನಿಲ್ದಾಣದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಕಳ್ಳ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಸ್ ಚಲಾಯಿಸಿಕೊಂಡು ಮಿರಿಯಾಣ ಮಾರ್ಗವಾಗಿ ಹೋಗಿರುವುದು ಗೊತ್ತಾಯಿತು. ತೆಲಂಗಾಣದತ್ತ ಹೋಗಿರಬಹುದೆಂದು ಶಂಕಿಸಿ ಕಾರ್ಯಾಚರಣೆ ನಡೆಸಿದಾಗ ಸಂಜೆ ಹೊತ್ತಿಗೆ ತೆಲಂಗಾಣದ ತಾಂಡೂರ ಬಳಿಯ ತಾಂಡಾದ ಭೂಕೈಲಾಸ ದೇಗುಲದ ಬಳಿ ಚರಂಡಿಯಲ್ಲಿ ಸಿಕ್ಕಿ ಹಾಕಿದ ರೀತಿಯಲ್ಲಿ ಬಸ್ ಪತ್ತೆಯಾಯಿತು.
ಬಸ್ ಕಳವು ಕುರಿತು ವಿಚಾರಣೆ ನಡೆದಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಎಂ.ರಾಚಪ್ಪ , ವ್ಯವಸ್ಥಾಪಕ ನಿರ್ದೇಶಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ