ಸೋಮವಾರಪೇಟೆ: ಕಾಫಿ ತೋಟಕ್ಕೆ ಬೆಂಕಿ: ಹಾನಿ
Team Udayavani, Mar 1, 2023, 12:24 AM IST
ಸೋಮವಾರಪೇಟೆ: ಆಕಸ್ಮಿಕವಾಗಿ ಕಾಫಿ ತೋಟಕ್ಕೆ ಬೆಂಕಿ ಬಿದ್ದು ಹಾನಿಯಾಗಿರುವ ಘಟನೆ ಕಿರಗಂದೂರು ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಬಡಗಿಮನೆ ಬಿ.ಎನ್. ಚಂದ್ರ, ಗಿರಿಜಮ್ಮ ಅವರ ಕಾಫಿ ತೋಟಕ್ಕೆ ಬೆಂಕಿ ಬಿದ್ದಿದೆ. ಫಸಲು ಕೊಡುತ್ತಿದ್ದ 200 ಕಾಫಿ ಗಿಡಗಳು, 30 ಮೆಣಸಿನ ಬಳ್ಳಿ, ಹತ್ತು ಸಿಲ್ವರ್ ಮರಗಳು ಬೆಂಕಿಗಾಹುತಿಯಾಗಿವೆ.
ಭತ್ತದ ಫಸಲಿಗೆ ಕಾಡಾನೆಗಳ ದಾಳಿ
ಭತ್ತದ ಫಸಲಿನ ಮೆದೆಗೆ ಕಾಡಾನೆಗಳು ದಾಳಿ ಮಾಡಿ ನಷ್ಟಪಡಿಸಿರುವ ಘಟನೆ ಐಗೂರು ಗ್ರಾಮದಲ್ಲಿ ರವಿವಾರ ತಡರಾತ್ರಿ ನಡೆದಿದೆ. ಕೊçಲು ಮಾಡಿರುವ ಭತ್ತದ ಪೈರನ್ನು ಗದ್ದೆಯಲ್ಲೇ ಸಂಗ್ರಹಿಸಿಡಲಾಗಿದ್ದು, ಸೋಮವಾರ ಯಂತ್ರದ ಮೂಲಕ ಭತ್ತ ಬಿಡಿಸುವ ಕೆಲಸಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ರವಿವಾರ ರಾತ್ರಿ ಕಾಡಾನೆಗಳು ಭತ್ತದ ಮೆದೆ ಕೆಡವಿ ತಿಂದು, ತುಳಿದು ಹಾನಿ ಮಾಡಿವೆ.
1 ಲಕ್ಷ ರೂ. ನಷ್ಟವಾಗಿರುವುದಾಗಿ ಕೃಷಿಕ ಕೆ.ಪಿ. ದಿನೇಶ್ ಹೇಳಿದ್ದಾರೆ.