ನೆಲದ ಸೊಗಡಿನ ಪ್ರಿ ವೆಡ್ಡಿಂಗ್ ಫೋಟೋ ಶೂಟ್; ನೋಡಿದವರಿಗೆ ಮೋಡಿ ಮಾಡಿದ ಜೋಡಿ
Team Udayavani, Mar 7, 2023, 5:30 PM IST
ಇತ್ತೀಚೆಗೆ ಎಲ್ಲ ವಿಚಾರದಲ್ಲೂ ನಾವು ತೀರಾ ಮಾಡರ್ನ್ ಆಗಿದ್ದೇವೆ. ನಿತ್ಯದ ದಿನಚರಿಯೂ ಹಿಂತಿರುಗಿ ನೋಡಲಾಗಷ್ಟು ಬದಲಾಗಿದೆ. ಹವ್ಯಾಸಗಳು, ರೂಢಿಗಳು ಬದಾಲಾಗಿವೆ. ಇಡೀ ಜಗತ್ತೇ ಈ ಹಾದಿಯಲ್ಲಿ ಹೊರಟಿದೆ. ಸುಮ್ನೆ ನಾನೇಕೆ ಹೊಸ ಹಾದಿಯಲ್ಲಿ ಹೋಗಬೇಕು ಎಂಬುದಕ್ಕೆ ನಾವೆಲ್ಲ ಒಗ್ಗಿಕೊಂಡಿದ್ದೇವೆ.
ಈಗ ಹೇಳಬೇಕಾದ ವಿಷಯಕ್ಕೆ ಬರೋಣ. ಮದುವೆಗೆ ಮುನ್ನ ಜೋಡಿಯು ಫೋಟೋ ಶೂಟ್ ಮಾಡಿಸೋದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಥೇಟ್ ಹೀರೋ ಹೀರೋಯಿನ್ಗಳಂತೆ ಪೋಸ್ ಕೊಟ್ಟುಕೊಂಡು ಫೋಟೋ ಶೂಟ್ ಮಾಡಿಸಿಕೊಳ್ಳುವುದು, ಡ್ರೋನ್ ಹಾರಿ ಬಿಟ್ಟು ವಿಹಂಗಮ ನೋಟದ ದೃಶ್ಯ ಚಿತ್ರೀಕರಿಸಿ ಜಾಣ್ಮೆಯಿಂದ ಎಡಿಟ್ ಮಾಡಿಸುವುದು, ನಂತರ ಅದನ್ನು ತಮ್ಮ ಸ್ನೇಹಿತರು, ಬಂಧುಗಳು, ಹಿತೈಷಿಗಳೊಂದಿಗೆ ಹಂಚಿಕೊಳ್ಳುವುದು, ಆ ಮೂಲಕ ಖುಷಿ ಪಡೋದು ಸಾಮಾನ್ಯ ಎಂಬಂತಾಗಿದೆ. ಇದಕ್ಕಾಗಿ ಪ್ರಕೃತಿಯ ರಮಣೀಯ ತಾಣಗಳಿಗೆ ಹೋಗಿ ಲಕ್ಷಗಟ್ಟಲೇ ಹಣ ಖರ್ಚು ಮಾಡುವವರೂ ಇದ್ದಾರೆ.
ಆದರೆ ಅಂಥವರೆಲ್ಲರ ನಡುವೆ ಇಲ್ಲೊಂದು ಜೋಡಿ ಪಕ್ಕಾ ಗ್ರಾಮ್ಯ ಸೊಗಡಿನಲ್ಲಿ ವಿಭಿನ್ನ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದೆ. ಬಳ್ಳಾರಿ ಮೂಲದ ಪವಿತ್ರಾ ಮತ್ತು ಅರ್ಜುನ್ ಎಂಬ ಈ ಜೋಡಿಗೆ ಈ ಪರಿಕಲ್ಪನೆಯಲ್ಲಿ ಫೋಟೋ ಶೂಟ್ ಮಾಡಿಸಿದವರು ಹುಬ್ಬಳ್ಳಿಯ ಯುವ ಪ್ರತಿಭೆ ಅಭಿನಂದನ್ ಜೈನ್. ವೃತ್ತಿಪರ ಫೋಟೋಗ್ರಾಫರ್ ಆಗಿರುವ ಇವರು ಉತ್ತಮ ದೃಶ್ಯ ಸಂಕಲನಕಾರ (ವಿಡಿಯೋ ಎಡಿಟರ್) ಕೂಡ ಹೌದು. ಸದಾ ಹೊಸತನಕ್ಕೆ ಹಂಬಲಿಸುವ ಅಭಿನಂದನ್, ಸೃಜನಶೀಲ ಛಾಯಾಗ್ರಹಣಕ್ಕೆ ಮುಂದಾಗುತ್ತಾರೆ. ಅವರು ಕ್ಲಿಕ್ ಮಾಡಿದ ಈ ಫೋಟೋಗಳನ್ನು ಗಮನಿಸಿದರೆ ವರಕವಿ ಡಾ. ದ. ರಾ ಬೇಂದ್ರೆ ಅವರ ಈ ಕವಿತೆ ನೆನಪಾಗುವುದು.
ನಾನು ಬಡವಿ ಆತ ಬಡವ
ಒಲವೇ ನಮ್ಮ ಬದುಕು
ಬಳಸಿಕೊಂಡೆವದನೇ ನಾವು
ಅದಕು ಇದಕು ಎದಕು
ಈ ಫೋಟೋಗಳಲ್ಲಿ ದಂಪತಿಯ ನಡುವೆ ಇರಬೇಕಾದ ಅಕ್ಕರೆ ಇದೆ. ಉತ್ಕಟ ಪ್ರೇಮ ಕಾಣುತ್ತಿದೆ. ಭಾವ ಬೆಸುಗೆ ಹೊಸೆದುಕೊಂಡಿದೆ. ಬಿಟ್ಟಿರಲಾಗದ ಬಾಂಧವ್ಯ ಏರ್ಪಟ್ಟಿದೆ. ನಿನ್ನ ಆಸೆ, ತುಡಿತ, ಬಯಕೆ, ಇಂಗಿತಗಳೆಲ್ಲವನ್ನೂ ಅರ್ಥೈಸಿಕೊಂಡು ಅದನ್ನು ಪೂರೈಸುವುದು ನನ್ನ ಸವಿನಯ ಕರ್ತವ್ಯ ಎಂದು ಒಬ್ಬರಿಗೊಬ್ಬರು ಹೇಳುತ್ತಿದ್ದಾರೇನೋ ಎಂಬಂತೆ ಈ ಫೋಟೋಗಳು ಕಾಣುತ್ತಿವೆ.
ಮಾಡಿಸಿದರೆ ಈ ತರ ಫೋಟೋ ಶೂಟ್ ಮಾಡಿಸಬೇಕು. ಅದರ ದಾಂಪತ್ಯದ ಏಳು-ಬೀಳಿನ ವಿವಿಧ ಮಜಲುಗಳು ಒಡಮೂಡಿ ಬರಬೇಕು ಎಂಬ ಅಭಿಪ್ರಾಯವನ್ನು ಈ ಫೋಟೋ ನೋಡಿದವರು ವ್ಯಕ್ತಪಡಿಸುತ್ತಿದ್ದಾರೆ. ಆಧುನಿಕ ಭರಾಟೆಯಲ್ಲಿ ನಮ್ಮ ಸಂಸ್ಕೃತಿ- ಸೊಗಡು ಮರೆಯದಿರೋಣ. ನಮ್ಮ ನೆಲ ಮೂಲದ ಆಚಾರ-ವಿಚಾರಕ್ಕೆ ಜೈ ಎನ್ನೋಣ. ಏನಂತೀರಿ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?
World War III Cinema: ಜಗತ್ತಿನಲ್ಲಿ 3ನೇ ಮಹಾಯುದ್ಧ ಘಟಿಸಿದರೆ ಏನಾಗಬಹುದು? ಹೇಗಾಗಬಹುದು?
ಟೀಂ ಇಂಡಿಯಾದಲ್ಲೂ ರೋಹಿತ್ ಕೆರಿಯರ್ ಮುಗಿಸಿದ್ರಾ ಹಾರ್ದಿಕ್ ಪಾಂಡ್ಯ? ಏನಿದು ವರದಿ
World Mother’s Day 2024: ಅಮ್ಮನಾಗಿ ಅಮ್ಮನನ್ನು ಅರಿತಾಗ….
Bado Badi Hoye Hoye.. ಎಲ್ಲಿ ನೋಡಿದರೂ ಈ ಹಾಡಿನದ್ದೇ ಹವಾ.. ಇದನ್ನು ಹಾಡಿದವರು ಯಾರು?
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Bengaluru ಎಷ್ಟೇ ಮಳೆ ಬಂದರೂ ಪಂದ್ಯ ನಡೆಸಬಹುದು; ಏನಿದು ಚಿನ್ನಸ್ವಾಮಿಯ ಸಬ್ ಏರ್ ಸಿಸ್ಟಂ?
ಪವಿತ್ರಾ – ಚಂದು ಪ್ರೀತಿಯಲ್ಲಿದ್ದರು.. ಆತ ನನ್ನ ಗಂಡ ಎಂದಿದ್ದರಂತೆ ಪವಿತ್ರಾ – ಚಂದು ಪತ್ನಿ
Bihar: ಕಸ್ಟಡಿಯಲ್ಲಿದ್ದ ಅಪ್ರಾಪ್ತ ವಯಸ್ಕ ಪತ್ನಿ,ಪತಿ ಸಾವು; ಗ್ರಾಮಸ್ಥರಿಂದ ಠಾಣೆ ಧ್ವಂಸ
Re Release; ಭರ್ಜರಿ ಓಪನಿಂಗ್ ಪಡೆದ ಉಪ್ಪಿ ‘ಎ’
ಪತ್ನಿ ಹತ್ಯೆಗೈದು ಶವದೊಂದಿಗೆ ಸೆಲ್ಫಿ: ಸಂಬಂಧಿಕರಿಗೆ ಫೋಟೋ ಕಳುಹಿಸಿ ತಾನೂ ನೇಣಿಗೆ ಶರಣಾದ