ಜಿಲ್ಲೆಯಲ್ಲಿ ಸಂಭ್ರಮದ ಹೋಳಿಹಬ್ಬ: ಬಣ್ಣಗಳಲ್ಲಿ ಮಿಂದೆದ್ದ ಕಡಲ ಒಡಲು
Team Udayavani, Mar 7, 2023, 9:48 PM IST
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲಾ 12 ತಾಲೂಕು ಕೇಂದ್ರಗಳಲ್ಲಿ ಮಂಗಳವಾರ ಸಂಭ್ರಮದ ಬಣ್ಣದ ಹಬ್ಬ ಹೊಳಿಯನ್ನು ಆಚರಿಸಲಾಯಿತು.
ಕಾರವಾರದಲ್ಲಿ ಜನರು ಸಡಗರ ದಿಂದ ಬಣ್ಣ ಆಡಿದರು .ಮಕ್ಕಳು ,ಮಹಿಳೆಯರು, ಯುವಕರು ,ಯುವತಿಯರು ಹೋಳಿಯನ್ನು ಸಂಭ್ರಮಿಸಿದರು . ಬಣ್ಣ ಹಚ್ಚಿಕೊಂಡು ಪರಸ್ಪರರು ಶುಭಾಶಯ ವಿನಿಮಯ ಮಾಡಿಕೊಂಡರು. ಸೋಮವಾರ ರಾತ್ರಿ ನಗರದ ಕೋಡಿಭಾಗ, ರಂಗಮಂದಿರ, ಮಾರುತಿ ಮಂದಿರ ಬಳಿ ಕಾಮದಹನ ಮಾಡಲಾಯಿತು. ಮಂಗಳವಾರ ಬೆಳಗಿನಿಂದ ಬಣ್ಣ ಚೆಲ್ಲಿ ಹೊಳಿ ಆಡಲಾಯಿತು. ನೀರಿಗೆ ಬಣ್ಣ ಮಿಶ್ರ ಮಾಡಿ ಪರಸ್ಪರ ಎರಚಿ ಸಂಭ್ರಮಿಸಲಾಯಿತು. ಡಿಜೆ ಹಾಕಿ ಬೀದಿ ಬೀದಿಗಳಲ್ಲಿ ನೃತ್ಯ ಮಾಡುವುದು ಕಂಡು ಬಂತು. ಇಡೀ ನಗರ ಬಣ್ಣಗಳಿಂದ ಅಲಂಕರಿಸಿದಂತಿತ್ತು . ವಾರದಿಂದ ವಿವಿಧ ವೇಷಧಾರಿಗಳು, ಸುಗ್ಗಿ ಕುಣಿತ , ವಿವಿಧ ಸಮುದಾಯಗಳು ತಂಡ ಕಟ್ಟಿಕೊಂಡು ತಮ್ಮದೇ ಆದ ಭಿನ್ನ ಶೈಲಿಯಲ್ಲಿ ಹೊಳಿಗೆ ಮೆರಗು ತಂದಿದ್ದವು. ಶಿರಸಿಯಲ್ಲಿ ಬೇಡರ ಕುಣಿತ ವಿಶಿಷ್ಟವಾಗಿತ್ತು. ಅಂಕೋಲಾದ ಬೆಳಂಬಾರ ಸುಗ್ಗಿ ತಂಡ ಗಮನಸೆಳೆಯಿತು.
ಸಮುದ್ರ ಸ್ನಾನ:
ಕಾರವಾರದಲ್ಲಿ ಬಣ್ಣ ಆಡಿದ ನಂತರ ಜನರು ಸಮುದ್ರ ಸ್ನಾನಕ್ಕೆ ತೆರಳುವುದು ವಿಶೇಷ. ಮಧ್ಯಾಹ್ನ 12 ರಿಂದ 2 ಗಂಟೆತನಕ ಸಾವಿರಾರು ಜನ ಬೀಚ್ ನಲ್ಲಿ ಸಮಾವೇಶಗೊಂಡು ಸಮುದ್ರ ಸ್ನಾನ ಮಾಡಿದರು. ಇಡೀ ಕಡಲು ಬಣ್ಣ ಉಂಡಂತೆ ರಂಗು ರಂಗಾಗಿತ್ತು. ಜನರ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು.
ಇದನ್ನೂ ಓದಿ: ಮಧುಗಿರಿ: ಎರಡು ಲಾರಿಗಳ ನಡುವೆ ಭೀಕರ ಅಪಘಾತ, ಕ್ಲಿನರ್ ಸ್ಥಳದಲ್ಲೇ ಸಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru; ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟ ಬೆದರಿಕೆ; ಪೊಲೀಸ್ ಭದ್ರತೆ
Pen drive case; ಪ್ರಜ್ವಲ್ ರೇವಣ್ಣ ಹಾಸನ ನಿವಾಸದಲ್ಲಿ ಎಸ್ಐಟಿ ಪರಿಶೀಲನೆ
ಸಮರ್ಥ ರಾಷ್ಟ್ರ – ಸಮಗ್ರ ಅಭಿವೃದ್ಧಿಗಾಗಿ ಮತ್ತೂಮ್ಮೆ ಸಂಸತ್ಗೆ ಕಳುಹಿಸಿ: B.Y. ರಾಘವೇಂದ್ರ
Lok Sabha Election: ಗೆಲುವು ಸಾಧಿಸಿ ಮೋದಿ ಕೈ ಬಲಪಡಿಸುವೆ: ಗಾಯತ್ರಿ ಸಿದ್ದೇಶ್ವರ
Tragedy: ಬಿಸಿಲಿನ ತಾಪ… ಕುಸಿದು ಬಿದ್ದು ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಮೃತ್ಯು