Drought relief: ಕೇಂದ್ರದ ಬರ ಪರಿಹಾರಕ್ಕೆ ಕಾದು ಕುಳಿತ ರೈತರು


Team Udayavani, May 4, 2024, 2:57 PM IST

10

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ ವರ್ಷ ತೀವ್ರ ಮಳೆ ಕೊರತೆಯಿಂದ ಬರಗಾಲಕ್ಕೆ ಅಪಾರ ಪ್ರಮಾಣದಲ್ಲಿ ಬೆಳೆ ಕಳೆದುಕೊಂಡ ರೈತರಿಗೆ ಇಲ್ಲಿವರೆಗೂ ಅರೆಬರೆ ಪರಿಹಾರ ಸಿಕ್ಕಿದ್ದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಬರ ಪರಿಹಾರ ಹಣ ರೈತರು ಎದುರು ನೋಡುವಂತಾಗಿದೆ.

ಕಳೆದ ಸಾಲಿನಲ್ಲಿ ಜಿಲ್ಲಾದ್ಯಂತ ಬರೋಬ್ಬರಿ 75,208.20 ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಮಳೆ ಕೊರತೆಯಿಂದ ವಿವಿಧ ಬೆಳಗಳನ್ನು ಕಳೆದುಕೊಂಡು ಸಂಕಷ್ಟಕ್ಕಿಡಾಗಿದ್ದರು. ಆದರೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಲಿಲ್ಲ ಎಂದು ತಾತ್ಕಲಿಕವಾಗಿ ತಲಾ 2000 ರೂ, ಪರಿಹಾರ ವಿತರಿಸಿದರೂ ರೈತರಿಗೆ ಬೆಳೆ ನಷ್ಟ ಪರಿಹಾರ ಪೂರ್ತಿ ಜಮೆ ಇನ್ನೂ ಆಗಲೇ ಇಲ್ಲ.

ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ನಷ್ಟಕ್ಕೀಡಾಗಿರುವ ಒಟ್ಟು 75,208.20 ಹೆಕ್ಟೇರ್‌ ಪೈಕಿ ಇಲ್ಲಿವರೆಗೂ 68,551.67 ಹೆಕ್ಟೇರ್‌ ಪ್ರದೇಶದಲ್ಲಿ ಬರ ಪರಿಹಾರ ನೀಡಿದ್ದು, ಒಟ್ಟು 97,278 ರೈತರಿಗೆ ಪರಿಹಾರ ಸಿಕ್ಕಿದೆ. ಇಲ್ಲಿವರೆಗೂ 9 ಕಂತುಗಳಲ್ಲಿ ಜಿಲ್ಲೆಯ ರೈತರಿಗೆ ರಾಜ್ಯ ಸರ್ಕಾರ ತಲಾ 2,000 ರೂ, ಒಳಗೆ ಒಟ್ಟು 17.71 ಕೋಟಿ ರೂ, ಬರ ಪರಿಹಾರ ಹಣವನ್ನು ರೈತರ ಖಾತೆಗಳಿಗೆ ಜಮೆ ಮಾಡಿದರೂ ಇನ್ನೂ 6,656 ಹೆಕ್ಟೇರ್‌ ಪ್ರದೇಶದ ರೈತರಿಗೆ ಬರ ಪರಿಹಾರ ಬಂದಿಲ್ಲ. ಅಲ್ಲದೇ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರವೇ  ಪ್ರತಿ ಹೆಕ್ಟೇರ್‌ಗೆ 8,500 ರೂ., ಬರ ಪರಿಹಾರ ಸಿಗಬೇಕಿದ್ದು ಈಗ ಕೇವಲ ರಾಜ್ಯ ಸರ್ಕಾರ 2,000 ರೂ, ತಾತ್ಕಲಿಕ ಪರಿಹಾರ ಬಿಟ್ಟರೆ ಕೇಂದ್ರದಿಂದ ಒಂದು ನೈಯಾಪೈಸೆ ಕೂಡ ರೈತರಿಗೆ ಸಿಕ್ಕಿಲ್ಲ.

ವರ್ಷ ಸಮೀಪಿಸಿದರೂ ಪರಿಹಾರ ಇಲ್ಲ: ಬರ ಪರಿಹಾರ ವಿಚಾರದಲ್ಲಿ ಕೇಂದ್ರ, ರಾಜ್ಯ ಸರ್ಕಾರದ ನಡುವೆ ಕಾನೂನು ಸಮರ ನಡೆದಿದ್ದು ವಿಚಾರ ಸುಪ್ರೀಂಕೋಟ್‌ ì ಮೆಟ್ಟಲೇರಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆದರೂ ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ ಬರ ಪರಿಹಾರ ಹಣದಲ್ಲಿ ಜಿಲ್ಲೆಯ ರೈತರಿಗೆ ಪರಿಹಾರ ಹಣ ಬರುವುದು ಯಾವಾಗ ಎನ್ನುವ ವಿಚಾರ ಚರ್ಚೆಗೆ ಗ್ರಾಸವಾಗಿದೆ. ರೈತರು ಬೆಳೆ ಕಳೆದುಕೊಂಡು ಒಂದು ವರ್ಷ ಕಳೆಯುತ್ತಿದೆ. ಈಗ ಮುಂಗಾರು ಹಂಗಾಮು ಶುರುವಾಗಲು ದಿನಗಣನೆ ಶುರುವಾಗಿದೆ. ರೈತರು ಮುಂದಿನ ಕೃಷಿ ಚಟುವಟಿಕೆಗಳಿಗೆ ಸದ್ದಿಲ್ಲದೇ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರವಾಗಲಿ ಅಥವ ರಾಜ್ಯ ಸರ್ಕಾರವಾಗಲಿ ಎನ್‌ಡಿಆರ್‌ಎಫ್ ಪ್ರಕಾರ ರೈತರಿಗೆ ಸಿಗಬೇಕಾದ ಬರ ಪರಿಹಾರ ಹಣವನ್ನು ಇನ್ನೂ ಸಂಪೂರ್ಣ ಜಮೆ ಮಾಡುವಲ್ಲಿ ವಿಫ‌ಲವಾಗಿರುವುದು ಸಹಜವಾಗಿಯೆ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರವೇ ಬರ ಘೋಷಣೆ ಮಾಡಿ, ಕೇಂದ್ರದಿಂದ ಬರ ಅಧ್ಯಯನ ತಂಡ ಆಗಮಿಸಿ ಬರ ವೀಕ್ಷಣೆ ಮಾಡಿ ಹೋದರೂ ಪರಿಹಾರ ಹಣ ರೈತರಿಗೆ ಸಂಪೂರ್ಣ ಸಿಕ್ಕಿಲ್ಲ.

ತಾಲೂಕುವಾರು ಬೆಳೆ ನಷ್ಟ, ಪರಿಹಾರ ಮೊತ್ತ

ತಾಲೂಕು      ಬೆಳೆ ನಷ್ಟ(ಹೇಕ್ಟರ್‌)            ಬೆಳೆ ನಷ್ಟ(ಲಕ್ಷಗಳಲ್ಲಿ)

ಚಿಕ್ಕಬಳ್ಳಾಪುರ           9,039  768.31

ಗೌರಿಬಿದನೂರು          15,037 1,278.16

ಗುಡಿಬಂಡೆ      7,156  608.26

ಬಾಗೇಪಲ್ಲಿ     16320 1387.2

ಚಿಂತಾಮಣಿ   17476 1485.46

ಶಿಡ್ಲಘಟ್ಟ       10180 865.3

ಒಟ್ಟು  75,208.20       6410

ಬರ ಪರಿಹಾರ ಪಡೆದು ರೈತರ ವಿವರ

ತಾಲೂಕಿನ    ಒಟ್ಟು ರೈತರು          ಮೊತ್ತ (ಕೋಟಿಗಳಲ್ಲಿ)

ಗೌರಿಬಿದನೂರು          28,698 5,21,73,975

ಚಿಕ್ಕಬಳ್ಳಾಪುರ           12,524 2,20,05,225

ಗುಡಿಬಂಡೆ      7,199  1,32,84,569

ಬಾಗೇಪಲ್ಲಿ     14,983 2,81,52,879

ಶಿಡ್ಲಘಟ್ಟ       15,448 2,79.04,414

ಚಿಂತಾಮಣಿ   18,426 3,35,48,093

ಒಟ್ಟು  97,278 17,70,69,155

-ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

17

ಶಾಸಕ ಹರೀಶ್ ಪೂಂಜ ಬಂಧನ ಹೈಡ್ರಾಮ: ಪೊಲೀಸರ ಮೇಲೆ ರಾಜಕೀಯ ಒತ್ತಡ ಆರೋಪ

Channapatna: ಪತ್ನಿಯನ್ನೇ ಹತ್ಯೆಗೈದು ಎಸ್ಕೇಪ್ ಆದ ಪತಿ… ಪೊಲೀಸರಿಂದ ಶೋಧ

Channapatna: ಪತ್ನಿಯನ್ನೇ ಹತ್ಯೆಗೈದು ಎಸ್ಕೇಪ್ ಆದ ಪತಿ… ಪೊಲೀಸರಿಂದ ಶೋಧ

RCB (2)

IPL Eliminator ಪಂದ್ಯ; ಅಭ್ಯಾಸವನ್ನು ಕೈಬಿಟ್ಟ ಆರ್ ಸಿಬಿ: ಉಗ್ರ ಬೆದರಿಕೆ ಕಾರಣವೇ?

Hemant

Supreme Court ತಪರಾಕಿ: ಬಂಧನದ ವಿರುದ್ಧದ ಮನವಿ ಹಿಂಪಡೆದ ಹೇಮಂತ್ ಸೊರೇನ್!

8-rishab-3

Rishab Shetty: ಇತಿಹಾಸ ಪ್ರಸಿದ್ಧ ಹರಿಹರಪುರ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ದಂಪತಿ ಭೇಟಿ

EC

BJP,Congress ಸೇರಿ ರಾಜಕೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಚುನಾವಣ ಆಯೋಗ

ಗಾನಕೋಗಿಲೆ ಎಂ.ಎಸ್.ಸುಬ್ಬುಲಕ್ಷ್ಮಿ ಪಾತ್ರಕ್ಕೆ ಬಣ್ಣ ಹಚ್ಚುತ್ತಾರಾ ಈ ಸೌತ್‌ ಬೆಡಗಿಯರು?

ಗಾನಕೋಗಿಲೆ ಎಂ.ಎಸ್.ಸುಬ್ಬುಲಕ್ಷ್ಮಿ ಪಾತ್ರಕ್ಕೆ ಬಣ್ಣ ಹಚ್ಚುತ್ತಾರಾ ಈ ಸೌತ್‌ ಬೆಡಗಿಯರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಡಿಮೆ ಅಂಕ: ಕುಂದಾಪುರ ಮೂಲದ ವಿದ್ಯಾರ್ಥಿ ಆತ್ಮಹತ್ಯೆ

SSLC ಕಡಿಮೆ ಅಂಕ: ಕುಂದಾಪುರ ಮೂಲದ ವಿದ್ಯಾರ್ಥಿ ಆತ್ಮಹತ್ಯೆ

Chikkaballapur: ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ, ರಕ್ಷಣೆಗೆ ಹೋದವ ಸಾವು

Chikkaballapur: ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ, ರಕ್ಷಣೆಗೆ ಹೋದವ ಸಾವು

Chikkaballapur: ಎಸ್ಪಿ ಕಚೇರಿ ಮುಂದೆ ನ್ಯಾಯಕ್ಕಾಗಿ ಧರಣಿ ಕೂತ ಪೇದೆಗಳು

Chikkaballapur: ಎಸ್ಪಿ ಕಚೇರಿ ಮುಂದೆ ನ್ಯಾಯಕ್ಕಾಗಿ ಧರಣಿ ಕೂತ ಪೇದೆಗಳು

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು

police

Chikkaballapur: ಆಂಧ್ರದಿಂದ ಗಾಂಜಾ ತರುತ್ತಿದ್ದ ಇಬ್ಬರ ಬಂಧನ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ಕುಂದಾಪುರ: ಅಪಾಯದಲ್ಲಿ ಕೋಡಿ ಸೀವಾಕ್‌- ಇಲಾಖೆ ನಿರ್ಲಕ್ಷ್ಯ

ಕುಂದಾಪುರ: ಅಪಾಯದಲ್ಲಿ ಕೋಡಿ ಸೀವಾಕ್‌- ಇಲಾಖೆ ನಿರ್ಲಕ್ಷ್ಯ

17

ಶಾಸಕ ಹರೀಶ್ ಪೂಂಜ ಬಂಧನ ಹೈಡ್ರಾಮ: ಪೊಲೀಸರ ಮೇಲೆ ರಾಜಕೀಯ ಒತ್ತಡ ಆರೋಪ

ಸುರತ್ಕಲ್‌, ಶಿಬರೂರು, ಕಟೀಲು ಮಾರ್ಗವಾಗಿ ನರ್ಮ್ ಬಸ್‌ ಸಂಚಾರ ಪುನರಾರಂಭ

ಸುರತ್ಕಲ್‌, ಶಿಬರೂರು, ಕಟೀಲು ಮಾರ್ಗವಾಗಿ ನರ್ಮ್ ಬಸ್‌ ಸಂಚಾರ ಪುನರಾರಂಭ

Channapatna: ಪತ್ನಿಯನ್ನೇ ಹತ್ಯೆಗೈದು ಎಸ್ಕೇಪ್ ಆದ ಪತಿ… ಪೊಲೀಸರಿಂದ ಶೋಧ

Channapatna: ಪತ್ನಿಯನ್ನೇ ಹತ್ಯೆಗೈದು ಎಸ್ಕೇಪ್ ಆದ ಪತಿ… ಪೊಲೀಸರಿಂದ ಶೋಧ

RCB (2)

IPL Eliminator ಪಂದ್ಯ; ಅಭ್ಯಾಸವನ್ನು ಕೈಬಿಟ್ಟ ಆರ್ ಸಿಬಿ: ಉಗ್ರ ಬೆದರಿಕೆ ಕಾರಣವೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.