ಸುರತ್ಕಲ್‌, ಶಿಬರೂರು, ಕಟೀಲು ಮಾರ್ಗವಾಗಿ ನರ್ಮ್ ಬಸ್‌ ಸಂಚಾರ ಪುನರಾರಂಭ


Team Udayavani, May 22, 2024, 4:35 PM IST

ಸುರತ್ಕಲ್‌, ಶಿಬರೂರು, ಕಟೀಲು ಮಾರ್ಗವಾಗಿ ನರ್ಮ್ ಬಸ್‌ ಸಂಚಾರ ಪುನರಾರಂಭ

ಸುರತ್ಕಲ್‌: ಕೊರೊನೋತ್ತರ ದಿನಗಳಲ್ಲಿ ಹಲವಾರು ಕಡೆ ಹಾಕಲಾದ ನಗರಸಾರಿಗೆ ನರ್ಮ್ ಬಸ್‌ ಸಂಚಾರವು ಪ್ರಯಾಣಿಕರ ಕೊರತೆಯಿಂದ ನಿಲ್ಲಿಸಬೇಕಾಗಿ ಬಂದಿತ್ತು. ಆದರೆ ಶಿಬರೂರು ಜನರ ಒತ್ತಾಸೆ ಸತತ ಪ್ರಯತ್ನದಿಂದ ಸುರತ್ಕಲ್‌ ಶಿಬರೂರು ಕಟೀಲು ಮಾರ್ಗವಾಗಿ ಪುನರಾರಂಭಗೊಂಡಿದೆ. ಇದೀಗ ನರ್ಮ್ ಬಸ್‌ ಜನರ ಜೀವನಾಡಿಯಾಗಿ ನಿತ್ಯ ಓಡಾಟ ನಡೆಸುತ್ತಿದೆ.

ಗ್ರಾಮೀಣ ಪ್ರದೇಶದ ಬಹು ಭಾಗಗಳಲ್ಲಿ ರವಿವಾರ ರಜಾ ದಿನವಾದೊಡನೆ ಖಾಸಗಿ ಬಸ್‌ ಸಂಚಾರ ಕಲೆಕ್ಷನ್‌ ಇಲ್ಲದೆ ನಿಲ್ಲಿಸುವುದು
ಸಾಮಾನ್ಯ. ಇದರಿಂದ ಶುಭ ಸಮಾರಂಭಗಳಿಗೆ ಹೋಗುವ ಮಂದಿಗೆ ಅನಾನುಕೂಲವಾಗುತ್ತಿತ್ತು. ಇದರಿಂದ ಸಂಘ – ಸಂಸ್ಥೆಗಳ ಆಗ್ರಹದ ಮೇರೆಗೆ ಸುರತ್ಕಲ್‌, ಕೊಂಚಾಡಿ, ಕಟೀಲು ಮತ್ತಿತರ ರಸ್ತೆ ಗಳಲ್ಲಿ ನರ್ಮ್ ಬಸ್‌ಗಳ ಸಂಚಾರ ಆರಂಭವಾಗಿತ್ತು.

ಇದರಲ್ಲಿ ಸುರತ್ಕಲ್‌, ಶಿಬರೂರು ಕಿನ್ನಿಗೋಳಿ ನರ್ಮ್ ಬಸ್‌ ಸಂಚಾರ 2022ರ ಬಳಿಕ ಎರಡನೇ ಬಾರಿ ಪುನರಾರಂಭಗೊಂಡು ಜನರಿಗೆ ಅನುಕೂಲವಾಗಿದೆ. ಕೆಎಸ್‌ ಆರ್‌ಟಿಸಿಗೆ ಆದಾಯವೂ ಬರುತ್ತಿದೆ. ಮಹಿಳೆಯರಿಗೆ ಉಚಿತ ಪ್ರಯಾಣದ ಬಳಿಕ ನರ್ಮ್ ಬಸ್‌ ಕಾದು ಕೂತು ಹೋಗುವ ಮಹಿಳಾ ಪ್ರಯಾಣಿಕರೂ ಇದ್ದಾರೆ. ಈ ರಸ್ತೆ ಮಾರ್ಗವಾಗಿ ಕೇವಲ ನರ್ಮ್ ಬಸ್‌ ಓಡಾಟ ಮಾತ್ರ ಇದೆ. ಖಾಸಗಿ ಬಸ್‌ ಸಂಚಾರ ಈ ಭಾಗದಲ್ಲಿ ಇನ್ನೂ ಆರಂಭವಾಗಿಲ್ಲ.

ಮಂಗಳೂರು ಲಾಲ್‌ಬಾಗ್‌ ನಿಂದ ಹೊರಡುವ ಈ ಬಸ್‌ ಶಿಬರೂರಿಗೆ 7.35ಕ್ಕೆ ಬಂದು ವಿದ್ಯಾರ್ಥಿಗಳಿಗೆ ಕಟೀಲು ಶಾಲಾ ಕಾಲೇಜಿಗೆ ತೆರಳಲು ಅನುಕೂಲವಾಗಿದೆ. ಪಡೀಲಿನಿಂದ ಹೊರಡುವ ಇನ್ನೊಂದು ನರ್ಮ್ ಬಸ್‌ 8.10ಕ್ಕೆ ಶಿಬರೂರು ತಲುಪುವುದರಿಂದ ವಿವಿಧೆಡೆಗಳಿಗೆ ಉದ್ಯೋಗಕ್ಕೆ ತೆರಳು ವವರಿಂದ ತುಂಬಿರುತ್ತದೆ. ಸಂಜೆ ಕೆಲಸ ಬಿಟ್ಟು ಬರುವ ಮಂದಿಗೆ 5 ಗಂಟೆಯ ಬಳಿಕದ ಪ್ರಯಾಣವೂ ಅನುಕೂಲಕರವಾಗಿದ್ದು, ನರ್ಮ್ ಬಸ್‌ ಯಶಸ್ವಿ ಓಡಾಟಕ್ಕೆ ಸಹಕಾರಿಯಾಗಿದೆ. ಖಾಸಗಿ ಬಸ್‌ ಗಳಂತೆ ದಾವಂತವಿಲ್ಲದ ಸುರಕ್ಷಿತ ಸಂಚಾರ, ಮಿತವ್ಯಯದರ ಹಾಗೂ ಮಹಿಳೆಯರಿಗೆ ಉಚಿತ ಪ್ರಯಾಣದ ಕೊಡುಗೆಯಿಂದ ಈ ಮಾರ್ಗದಲ್ಲಿ ಓಡಾಟ ಯಶಸ್ವಿಯಾಗುತ್ತಿರುವಂತೆಯೇ ನಿಲ್ಲಿಸಲಾದ ವಿವಿಧ ಮಾರ್ಗಗಳ ನರ್ಮ್ ಬಸ್‌ ಓಡಾಟಕ್ಕೂ ಇದೀಗ ಬೇಡಿಕೆ ಹೆಚ್ಚಾಗಿದೆ.

ಜನಸಾಮಾನ್ಯರಿಗೆ ಅನುಕೂಲ
ಸುರತ್ಕಲ್‌, ಶಿಬರೂರು ಕಟೀಲು ಮಾರ್ಗವಾಗಿ ನರ್ಮ್ ಬಸ್‌ ಹಾಕಬೇಕೆಂದು ನಮ್ಮ ಶಿಬರೂರು ದೇಲಂತ ಬೆಟ್ಟುವಿನ ಯುವಕ ಮಂಡಲವು ದ.ಕ. ಜಿಲ್ಲಾಧಿಕಾರಿಗಳ ನೆರವು, ಜನಪ್ರತಿನಿಧಿಗಳ ಸಹಕಾರದಲ್ಲಿ ಕೆಎಸ್‌ಆರ್‌ ಟಿಸಿ ಪ್ರಾದೇಶಿಕ ಅಧಿಕಾರಿಗಳಿಗೆ ಮನವಿ ನೀಡಿ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಸರಕಾರಿ ಬಸ್‌ ನಿಯಮಿತವಾಗಿ ಓಡಾಟ ನಡೆಸುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ.
*ಭುವನೇಶ್‌ ಶಿಬರೂರು, ನಿತ್ಯ ಪ್ರಯಾಣಿಕ

ಟಾಪ್ ನ್ಯೂಸ್

1-wqeqwwewq

ಅಂಗನವಾಡಿ ಆಹಾರ ಕಳಪೆ, ಸೌಕರ್ಯ ಇಲ್ಲ !

Exam

UPSC ಸಿವಿಲ್‌ ಪ್ರಿಲಿಮ್ಸ್‌ ಪರೀಕ್ಷೆ ಇಂದು : 2 ಹಂತ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ಖಾಸಗಿ ಬಸ್‌ನಲ್ಲಿ ಲ್ಯಾಪ್‌ಟಾಪ್‌ ಸಹಿತ ಬ್ಯಾಗ್‌ ಕಳವು

Mangaluru ಖಾಸಗಿ ಬಸ್‌ನಲ್ಲಿ ಲ್ಯಾಪ್‌ಟಾಪ್‌ ಸಹಿತ ಬ್ಯಾಗ್‌ ಕಳವು

National Highway 73: ಸಮಸ್ಯೆಗಳ ನಿವಾರಣೆNational Highway 73: ಸಮಸ್ಯೆಗಳ ನಿವಾರಣೆ

National Highway 73: ಸಮಸ್ಯೆಗಳ ನಿವಾರಣೆ

ತ್ವರಿತಗತಿಯಲ್ಲಿ ತೇಲುವ ಜೆಟ್ಟಿ ಕಾಮಗಾರಿ ಮುಗಿಸಲು ಸೂಚನೆ

ತ್ವರಿತಗತಿಯಲ್ಲಿ ತೇಲುವ ಜೆಟ್ಟಿ ಕಾಮಗಾರಿ ಮುಗಿಸಲು ಸೂಚನೆ

ಶಿಕ್ಷಣದ ಮೂಲಕ ಕೌಶಲಪೂರ್ಣ ವ್ಯಕ್ತಿತ್ವ ನಿರ್ಮಾಣ: ಥಾವರ್‌ಚಂದ್‌ ಗೆಹ್ಲೋಟ್

ಶಿಕ್ಷಣದ ಮೂಲಕ ಕೌಶಲಪೂರ್ಣ ವ್ಯಕ್ತಿತ್ವ ನಿರ್ಮಾಣ: ಥಾವರ್‌ಚಂದ್‌ ಗೆಹ್ಲೋಟ್

university

Mangalore University: ಪ್ರಕಾಶ್ ಶೆಟ್ಟಿ, ರೊನಾಲ್ಡ್ ಕೊಲಾಸೋರಿಗೆ ಗೌರವ ಡಾಕ್ಟರೆಟ್ ಪ್ರದಾನ

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

1-asdsdasdas-d

South Africa 30 ವರ್ಷದಲ್ಲಿ ಮೊದಲ ಬಾರಿಗೆ ಸಮ್ಮಿಶ್ರ ಸರಕಾರ

1-wqeqwwewq

ಅಂಗನವಾಡಿ ಆಹಾರ ಕಳಪೆ, ಸೌಕರ್ಯ ಇಲ್ಲ !

Exam

UPSC ಸಿವಿಲ್‌ ಪ್ರಿಲಿಮ್ಸ್‌ ಪರೀಕ್ಷೆ ಇಂದು : 2 ಹಂತ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.