ಹೀಗೂ ಉಂಟು: ಕನ್ನಡ ಕಟ್ಟಾಳು ಬಿ.ಎಂ. ಇದಿನಬ್ಬವಿಗೆ ಅಧಿಕಾರ !
Team Udayavani, Mar 14, 2023, 7:25 AM IST
ವೀರರಾಣಿ ಅಬ್ಬಕ್ಕ ಆಳಿದ, ಗಡಿನಾಡು ಕಾಸರಗೋಡಿಗೆ ಸನಿಹದ ಮಂಗಳೂರು ವಿಧಾನಸಭಾ ಕ್ಷೇತ್ರ ಕವಿ, ಕನ್ನಡದ ಕಟ್ಟಾಳು ಎಂದೇ ಖ್ಯಾತರಾಗಿದ್ದ ಬಿ.ಎಂ. ಇದಿನಬ್ಬ ಅವರನ್ನು 3 ಬಾರಿ ಶಾಸಕರನ್ನಾಗಿದ ಕ್ಷೇತ್ರ. 2008ರಿಂದ ಮಂಗಳೂರು ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಇದು, 1957ರಿಂದ 1972ರ ವರೆಗೆ “ಮಂಗಳೂರು -2” ಕ್ಷೇತ್ರವಾಗಿತ್ತು. ಆ ಸಂದರ್ಭ 1967ರಲ್ಲಿ ಕಾಂಗ್ರೆಸ್ನಿಂದ ಪ್ರಥಮ ಬಾರಿಗೆ ಬಿ.ಎಂ. ಇದಿನಬ್ಬ ವಿಧಾನಸಭೆ ಪ್ರವೇಶಿಸಿದ್ದರು.
ಬಳಿಕ 1978ರಿಂದ 2007ರ ವರೆಗೆ ಇದು ಉಳ್ಳಾಲ ಕ್ಷೇತ್ರವಾಯಿತು. 1985 ಮತ್ತು 1989ರ ಚುನಾವಣೆಯಲ್ಲಿ ಮತ್ತೆ ಗೆಲ್ಲಿಸಿದ್ದು ಸರಳ ಹಾಗೂ ಸಜ್ಜನ ಎಂದೇ ಪ್ರಸಿದ್ಧಿಯಾಗಿದ್ದ ಬಿ.ಎಂ. ಇದಿನಬ್ಬ ಅವರನ್ನೇ. ಆದ್ದರಿಂದ ಕವಿವಾಣಿಯಲ್ಲಿ ಜನರ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರತಿಧ್ವನಿಸುವಂತಾಗಿತ್ತು.
ವಿಶೇಷವೆಂದರೆ ಕರಾವಳಿಯಿಂದ ಕವಿ ಹಾಗೂ ಸಾಹಿತಿಗಳು ವಿಧಾನಸಭೆ ಪ್ರವೇಶಿಸಿದ್ದರಲ್ಲಿ ಇವರೇ ಮೊದಲಿಗರು. ಕವಿ ಎಂ.ಗೋಪಾಲ ಕೃಷ್ಣ ಅಡಿಗರು ಸ್ಪರ್ಧಿಸಿದರಾದರೂ ಯಶಸ್ವಿಯಾಗಲಿಲ್ಲ. ಸಾಹಿತಿ ಡಾ. ಕೆ. ಶಿವರಾಮ ಕಾರಂತರೂ ಸ್ಪರ್ಧಿಸಿದ್ದು ಲೋಕಸಭೆ ಚುನಾವಣೆಯಲ್ಲಿ. ಅವರೂ ಯಶ ಗಳಿಸಲಿಲ್ಲ.
- ಸತ್ಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?