ಅಪಾರ ಭಕ್ತಿ: ಶ್ರೀಕೃಷ್ಣ ದೇವರನ್ನೇ ಗಂಡನಾಗಿ ಸ್ವೀಕರಿಸಿ ಅದ್ಧೂರಿ ಮದುವೆಯಾದ ಯುವತಿ.!
Team Udayavani, Mar 14, 2023, 10:13 AM IST
ಲಕ್ನೋ: ಈಗಿನ ಕಾಲದಲ್ಲಿ ಮದುವೆಯಾಗಬೇಕಾದರೆ ವರನಿಗೆ ಉತ್ತಮ ಗುಣದೊಂದಿಗೆ, ಉತ್ತಮ ಸಂಬಳವೂ ಬೇಕು. ಆದರೆ ಇಲ್ಲೊಂದು ಅಪರೂಪದ ಮದುವೆಗೆ ಉತ್ತರ ಪ್ರದೇಶದ ಔರ್ರೈಯಾ ಜಿಲ್ಲೆಯ ಜನರು ಸಾಕ್ಷಿಯಾಗಿದ್ದಾರೆ.
ರಕ್ಷಾ ಎನ್ನುವ 30 ವರ್ಷದ ಯುವತಿಯೊಬ್ಬಳು ತನ್ನ ಕನಸಿನಂತೆ ಮದುವೆಯಾಗಿದ್ದಾರೆ. ಅವರ ಕನಸಿನ ಮದುವೆಗೆ ಅಪಾರ ಜನರು, ಸಂಭ್ರಮ, ಸಂತಸವೂ ಜೊತೆಯಾಗಿದೆ. ಊಟೋಪಚಾರ, ಸಂಗೀತ ಸಂಭ್ರಮದಿಂದ ಮದುವೆ ನೆರವೇರಿದೆ. ಆದರೆ ಆ ಮದುವೆಯಲ್ಲಿ ವರನಿಲ್ಲ. ರಕ್ಷಾ ಮದುವೆಯಾದದ್ದು ಶ್ರೀಕೃಷ್ಣನನ್ನು. ಪೂಜೆಸುವ, ಆರಾಧಿಸುವ ಶ್ರೀಕೃಷ್ಣ ದೇವರನ್ನು.!
ಇದನ್ನೂ ಓದಿ: ಕಾರ್ಯಾಚರಣೆ ಸ್ಥಗಿತ: ಕೊಳವೆ ಬಾವಿಗೆ ಬಿದ್ದಿದ್ದ 5 ವರ್ಷದ ಬಾಲಕ ಮೃತ್ಯು
ತನ್ನ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಸದ್ಯ ಎಲ್ ಎಲ್ ಬಿ ಓದುತ್ತಿರುವ ರಕ್ಷಾ ಶ್ರೀಕೃಷ್ಣ ದೇವರನ್ನು ಶ್ರದ್ಧೆಯಿಂದ ಪೂಜಿಸುವ ಆರಾಧಿಸುವ ಅಪ್ಪಟ್ಟ ಭಕ್ತೆ. ತಾನು ಮದುವೆಯಾದರೂ ಶ್ರೀಕೃಷ್ಣನೊಂದಿಗೆ ಮೊದಲಿನ ಹಾಗೆಯೇ ಭಕ್ತಿಯಿಂದ ಇರಬೇಕೆನ್ನುವ ಉದ್ದೇಶದಿಂದ ತನ್ನ ತಂದೆಯ ಬಳಿ ಕೃಷ್ಣನನ್ನೇ ಮದುವೆಯಾಗಬೇಕೆಂದು ಹೇಳಿದ್ದಾರೆ. ಮಗಳ ಕನಸಿನಂತೆ ರಂಜಿತ್ ಸಿಂಗ್ ಸೋಲಂಕಿ ಮದುವೆ ಆಯೋಜನೆಯನ್ನು ಮಾಡಿದ್ದಾರೆ.
ಅದ್ದೂರಿ ಮಂಟಪ, ಆಮಂತ್ರಣ ಮಾಡಿ ನೆಂಟರಿಗೆ ಆಹ್ವಾನಿಸಿದ್ದಾರೆ. ಶ್ರೀಕೃಷ್ಣನ ಮೂರ್ತಿಯನ್ನು ಹೊತ್ತ ಮದುವೆಯ ಮೆರವಣಿಗೆಯು ಮದುವೆಯ ಸ್ಥಳಕ್ಕೆ ತಲುಪಿ, ಅಲ್ಲಿ ಬಾರಾತಿಗಳು ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿದರು. ಬಂದ ನೆಂಟರಿಗೆ ಊಟೋಪಚಾರ ನೀಡಲಾಗಿದೆ.
ವಿವಾಹ ಸಮಾರಂಭದ ನಂತರ, ವಧು ಕೃಷ್ಣನ ಮೂರ್ತಿಯೊಂದಿಗೆ ಜಿಲ್ಲೆಯ ಸುಖಚೈನ್ಪುರ ಪ್ರದೇಶದಲ್ಲಿನ ತನ್ನ ಸಂಬಂಧಿಕರ ಸ್ಥಳಕ್ಕೆ ತೆರಳಿದ್ದಾಳೆ. ಆ ಬಳಿಕ ತನ್ನ ಪತಿ ಶ್ರೀಕೃಷ್ಣನ ಮೂರ್ತಿಯನ್ನು ಮಡಿಲಿನಲ್ಲಿ ಹೊತ್ತುಕೊಂಡು ತವರಿಗೆ ಬಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ