ಕೋಟೆ ಪುರಸಭೆ ಬಜೆಟ್‌: ಮೂಲ ಸೌಕರ್ಯಕ್ಕೆ  ಹೆಚ್ಚಿನ ಆದ್ಯತೆ


Team Udayavani, Mar 28, 2023, 12:56 PM IST

tdy-13

ಎಚ್‌.ಡಿ.ಕೋಟೆ : ಪುರಸಭೆಯ 2023-2024ನೇ ಸಾಲಿನ 62.29 ಲಕ್ಷ ರೂ. ಉಳಿತಾಯ ಬಜೆಟ್‌ ಮಂಡಿಸಿದ ಪುರಸಭೆಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಾ ವೆಂಕಟೇಶ್‌ ಅವರಿಗೆ ಪುರಸಭೆಯ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಪುರಸಭೆ ಅಧ್ಯಕ್ಷೆ ಅನಿತ ಅವರ ಅಧ್ಯಕ್ಷತೆಯಲ್ಲಿ ಪುರಸಭೆ ದಿ.ಚಿಕ್ಕಮಾದು ಸಭಾಂಗಣದಲ್ಲಿ ನಡೆದ ಬಜೆಟ್‌ ಮಂಡನೆ ಸಭೆಯಲ್ಲಿ ಮುಖ್ಯಾಧಿಕಾರಿ ಪಿ.ಸುರೇಶ್‌ ಆರಂಭದಲ್ಲಿ ಸರ್ವರನ್ನೂ ಸ್ವಾಗತಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಾ ವೆಂಕಟೇಶ್‌ ವೇದಿಕೆಯನ್ನೇರದೆ ಸದಸ್ಯರು ಆಸೀನರಾಗುವ ಅಸನಗಳಲ್ಲಿ ಆಸೀನರಾಗಿದ್ದಕ್ಕೆ ಸದಸ್ಯ ಮಿಲ್‌ ನಾಗರಾಜು ಆಕ್ಷೇಪ ವ್ಯಕ್ತಪಡಿಸಿ ಹಿಂದಿನಿಂದ ನಡೆದು ಬಂದ ಪದ್ಧತಿಯಂತೆ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್‌ ವೇದಿಕೆಯಲ್ಲಿ ಆಸೀನರಾಗಿ ಬಜೆಟ್‌ ಮಂಡಿಸಬೇಕು ಎಂದು ಪಟ್ಟು ಹಿಡಿದರು.

ಇದಕ್ಕೆ ಸಭೆಯಲ್ಲಿದ್ದ ಬಹುಸಂಖ್ಯೆ ಸದಸ್ಯರು ಸಹಮತ ನೀಡಿ ವೇದಿಕೆ ಅಲಂಕರಿಸುವಂತೆ ಒತ್ತಾಯ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಐಡಿಯಾ ವೆಂಕಟೇಶ್‌ ಹಿಂದಿನ ಸಭೆಯೊಂದರಲ್ಲಿ ವೇದಿಕೆ ಯಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಸದಸ್ಯರೊಬ್ಬರು ಸ್ಥಾಯಿ ಸಮಿತಿ ಅಧ್ಯಕ್ಷರು ವೇದಿಕೆಯಲ್ಲಿ ಕುಳಿತು ಕೊಳ್ಳಲು ವಿರೋಧ ವ್ಯಕ್ತಪಡಿಸಿದ್ದಕ್ಕೆ ವೇದಿಕೆಯಿಂದ ಕೆಳಗಿಳಿದಿದ್ದೇನೆ. ಸದಸ್ಯರಿಗೆ ನನ್ನ ಮೇಲಿರುವ ಗೌರವಕ್ಕೆ ನಾನು ಚಿರಋಣಿಯಾಗಿದ್ದು, ಪುರಸಭೆ ಮುಖ್ಯಾಧಿಕಾರಿಗಳು ಸ್ಥಾಯಿ ಸಮಿತಿ ಅಧ್ಯಕ್ಷರು ವೇದಿಕೆಯಲ್ಲಿ ಕುಳಿತುಕೊಳ್ಳಬಹುದೇ? ಇಲ್ಲವೆ ಅನ್ನುವುದನ್ನು ಸರ್ಕಾರಿಂದ ನಿಯಮಾನು ಸಾರ ಖಾತರಿ ಪಡಿಸಿಕೊಂಡು ತಿಳಿಸುವ ತನಕ ನಾನು ವೇದಿಕೆ ಅಲಂಕರಿಸುವುದಿಲ್ಲ ಸರ್ವಸದಸ್ಯರೂ ಸಹಕಾರ ನೀಡಬೇಕೆಂದು ವಿನಂತಿಸಿಕೊಂಡು. ಬಳಿಕ ವೇದಿಕೆಯಿಂದ ಎದುರಿನಲ್ಲೇ ಬಜೆಟ್‌ ಮಂಡಿಸಿದ ವೆಂಕಟೇಶ್‌ ಪುರಸಭೆ ಆದಾಯದ ಮೂಲಗಳ ಅಂಕಿ ಅಂಶದ ಮಾಹಿತಿ ನೀರಿ 2022-23ನೇ ಸಾಲಿನ ಒಟ್ಟು ಆದಾಯ 15.01 ಕೋಟಿ ಅದರಂತೆಯೇ ಪಟ್ಟಣದ ಮೂಲಭೂತ ಸೌಲಭ್ಯಗಳ ಮತ್ತು ಅಭಿವೃದ್ಧಿ ಖರ್ಚು 15.38 ಕೋಟಿ, ಉಳಿಕೆ 62.29 ಲಕ್ಷದ ಬಜೆಟ್‌ ಮಂಡನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನೊಬ್ಬ ಪ್ರಥಮ ದರ್ಜೆ ಗುತ್ತಿಗೆದಾರ ನಾಗಿದ್ದು, ನನ್ನ ಸ್ವಂತ ಕೆಲಸಗಳನ್ನು ಬದಿಗೊತ್ತಿ ಪ್ರತಿದಿನ ಪುರಸಭೆಯ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಸಿಕೆಕೊಂಡು ಸರ್ಕಾರಿ ನೌಕರರಂತೆ ಬೆಳಗಿನಿಂದ ಸಂಜೆ ತನಕ ಪುರಸಭೆಯಲ್ಲಿ ದಿನ ಕಳೆಯುತ್ತಿದ್ದೇನೆ. ಪುರಸಭೆ 4 ಲಕ್ಷ ಆದಾಯ ಗಳಿಕೆ: ಪುರಸಭೆ ಆದಾಯ ಹೆಚ್ಚು ಮಾಡಲು ವಿವಿಧ ಮೂಲಗಳಿಗೆ ಇದಕ್ಕೆ ಉತ್ತಮ ಉದಾರಣೆ ಯಾಗಿ ವರ್ತಕರಿಂದ ಪ್ರತಿವರ್ಷಕ್ಕೆ 1 ಲಕ್ಷ ಆದಾಯ ಪುರಸಭೆಗಿತ್ತು. ಕಳೆದ 15 ದಿನಗಳ ಹಿಂದೆ ಅದಾಲತ್‌ ಮೂಲಕ ವರ್ತಕರಿಗೆ ಸ್ಥಳದಲ್ಲಿಯೇ ಪರವಾನಗಿ ನೀಡುವ ಕೆಲಸ ಕೈಗೆತ್ತಿಕೊಂಡಾಗ 2 ದಿನದಲ್ಲಿ ಪುರಸಭೆ 4 ಲಕ್ಷ ಆದಾಯಗಳಿಕೆಯಾಗಿದೆ. ಈ ವರ್ಷದ ಕೊನೆಯ ತನಕ ವರ್ತಕರಿಂದ ಪುರಸಭೆಗೆ 8 ಲಕ್ಷ ಪರವಾನಗಿ ಶುಲ್ಕ ಪಾವತಿಯಾಗುವ ನಿರೀಕ್ಷೆ ಇದೆ. ಕಟ್ಟಡಗಳ ಶುಲ್ಕ, ನೀರಿನ ತೆರಿಗೆ ವಸೂಲಿ, ರಸ್ತೆ ಬದಿ ವ್ಯಾಪಾರಸ್ಥರ ಶುಲ್ಕ, ಆಸ್ತಿ ತೆರಿಗೆ ಹೀಗೆ ಎಲ್ಲಾ ಮೂಲಗಳ ವಸೂಲಾತಿಗೆ ಪುರಸಭೆ ಅಧಿಕಾರಿಗಳು ಸಹಕಾರ ನೀಡಿ ಕೆಲಸ ಮಾಡಿದರೆ ಪುರಸಭೆಗೆ ಸಾಕಷ್ಟು ಆದಾಯ ಏರಿಕೆ ಮಾಡುವುದರಲ್ಲಿ ಸಂಶಯ ಇಲ್ಲ ಇದಕ್ಕೆ ಸಾರ್ವಜನಿಕರಷ್ಟೇ ಅಲ್ಲದೆ ಅಧಿಕಾರಿಗಳ ಸಹಕಾರ ಅಗತ್ಯ ಎಂದರು.

9 ಸದಸ್ಯರು ಗೈರು: ಬಜೆಟ್‌ ಮಂಡನೆ ವೇಳೆ ಕಾಂಗ್ರೆಸ್‌ ಪಕ್ಷದ 11 ಸದಸ್ಯರ ಪೈಕಿ ಇಬ್ಬರನ್ನು ಹೊರತುಪಡಿಸಿ ಉಪಾಧ್ಯಕ್ಷೆ ಗೀತಾ ಗಿರಿಗೌಡ ಸೇರಿ 9 ಸದಸ್ಯರು ಗೈರು ಹಾಜರಿದ್ದರು. ಐಡಿಯಾ ವೆಂಕಟೇಶ್‌ ಅವರ ಮುಂದಾ ಲೋಚನೆಯ ಐಡಿಯಾಗಳಿಗೆ ಮನಸೋತ ಬಹುಸಂಖ್ಯೆ ಪುರಸಭೆ ಸದಸ್ಯರು ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸದಸ್ಯರಾದ ಸರೋಜಮ್ಮ, ಲೋಕೇಶ್‌, ಶಿವಮ್ಮ, ಕವಿತ, ಶಾಂತಮ್ಮ, ಹರೀಶ್‌ಗೌಡ, ನಂಜಪ್ಪ, ನಂದಿನಿ, ಲೋಕೇಶ್‌, ನಾಮನಿದೇಶನ ಸದಸ್ಯರಾದ ಸಿದ್ದರಾಜು, ಚಂದ್ರಮೌಳಿ, ಮಹೇಶ, ಲೋಕೇಶ ಸೇರಿದಂತೆ ಪುರಸಭೆ ಸಿಬ್ಬಂದಿ ಉಸ್ಥಿತರಿದ್ದರು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

BJP ಅಧಿಕಾರಕ್ಕೆ ಬಂದರೆ ಸ್ತ್ರೀಯರು ಅನಾಥರಾದಾರು: ಯತೀಂದ್ರ ಸಿದ್ದರಾಮಯ್ಯ

1-aaweewq

Nagarahole; ಹುಲಿ ಶವ ಪತ್ತೆ: ದುಷ್ಕರ್ಮಿಗಳ ಕೃತ್ಯಕ್ಕೆ ತಿಂಗಳೊಳಗೆ 3 ಕಾಡುಕೋಣ ಬಲಿ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

Congress ನಾಯಕರಿಗೆ ಚೊಂಬೇ ಗತಿ: ಬಿ.ವೈ.ವಿಜಯೇಂದ್ರ

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

ಸೂರ್ಯನ ಶಾಖದಲ್ಲೂ ತಂಪಾಗಿರುವ ಮೃಗಾಲಯ!

Sumalatha (2)

BJP ಸೇರಿದುದರ ಅರ್ಥ ಎಚ್‌ಡಿಕೆಗೆ ಸಂಪೂರ್ಣ ಸಹಕಾರ: ಸುಮಲತಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.