ಪತಿ ಚಾಕೊಲೇಟ್ ತಂದಿಲ್ಲ ಎಂದು ಪತ್ನಿ ಆತ್ಮಹತ್ಯೆ!
Team Udayavani, Apr 8, 2023, 11:44 AM IST
ಬೆಂಗಳೂರು: ಪತಿ ಚಾಕೊಲೇಟ್ ತಂದು ಕೊಡದಿದ್ದಕ್ಕೆ ನೊಂದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೊಣ್ಣಪ್ಪ ಲೇಔಟ್ ನಿವಾಸಿ ನಂದಿನಿ (30) ಆತ್ಮಹತ್ಯೆಗೆ ಶರಣಾದವರು. ಕಳೆದ 6 ವರ್ಷಗಳ ಹಿಂದೆ ಮದುವೆಯಾಗಿದ್ದ ನಂದಿನಿಗೆ ಇಬ್ಬರು ಮಕ್ಕಳಿದ್ದಾರೆ.
ಪತಿ ಸೆಲೂನ್ನಲ್ಲಿ ಕೆಲಸ ಮಾಡುತ್ತಿದ್ದರು. ಗುರುವಾರ ಕೆಲಸಕ್ಕೆ ಹೋಗಿದ್ದ ಪತಿಯ ಬಳಿ ಚಾಕೊಲೇಟ್ ತಂದು ಕೊಡುವಂತೆ ಕೇಳಿದ್ದರು. ಮಧ್ಯಾಹ್ನವಾದರೂ ಪತಿ ಚಾಕೊಲೇಟ್ ತಂದು ಕೊಡದಿದ್ದ ಕಾರಣಕ್ಕೆ ಬೇಸರಗೊಂಡು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಇತ್ತ ನಂದಿನಿ ಪತಿ ಎಂದಿನಂತೆ ಪತ್ನಿಗೆ ಮಧ್ಯಾಹ್ನ ಕರೆ ಮಾಡಿದಾಗ ಆಕೆ ಸ್ವೀಕರಿಸಿರಲಿಲ್ಲ. ಇದರಿಂದ ಅನುಮಾನಗೊಂಡು ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಚಾಕೊಲೇಟ್ ಕೊಡದಿರುವುದಕ್ಕೆ ನಂದಿನಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ? ಅಥವಾ ಬೇರೆ ಏನಾದರೂ ಕಾರಣವಿರಬಹುದಾ ಎಂಬ ಬಗ್ಗೆ ಎಲ್ಲ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.